ಚಿತ್ರರಂಗ ಕಂಡ ಶ್ರೇಷ್ಠ ನಟ ಸಾಹಸಸಿಂಹ ವಿಷ್ಣುವರ್ಧನ್. ಕನ್ನಡ ಸಿನಿಮಾ ರಂಗದ ‘ ಯಜಮಾನ’ ನಾಗಿ ಮಿಂಚಿದವರು ವಿಷ್ಣು ಸರ್.
ಎಲ್ಲರ ನೆಚ್ಚಿನ ನಟ ವಿಷ್ಣುವರ್ಧನ್ ಅವರ ಅಭಿನಯದ ಯಜಮಾನ ಚಿತ್ರ ಬಿಡುಗಡೆಯಾಗಿ 18 ವರ್ಷಗಳಾಗಿವೆ.
hi
ಈಗ ಮತ್ತದೇ ಟೈಟಲ್ ನಲ್ಲಿ ಮತ್ತೊಂದು ಕನ್ನಡ ಸಿನಿಮಾ ಬರಲಿದೆ.ಅಂದು ಸ್ಯಾಂಡಲ್ ವುಡ್ ನ ಯಜಮಾನ ವಿಷ್ಣು ದಾದ. ಇಂದು..?
ಯಜಮಾನ ಎಂಬ ಟೈಟಲ್ ಇಟ್ಕೊಂಡು ನಿರ್ದೇಶಕ ಪಿ.ಕುಮಾರ್ ಆ್ಯಕ್ಷನ್ ಕಟ್ ಹೇಳ ಹೊರಟಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅಭಿನಯದ ‘ವಿಷ್ಣುವರ್ಧನ’ ಚಿತ್ರ ನಿರ್ದೇಶಿಸಿದ್ದವರು ಇದೇ ಪಿ.ಕುಮಾರ್.
ಹಾಗಂತ ‘ ಯಜಮಾನ’ ಚಿತ್ರ ನಾಯಕ ಸುದೀಪ್ ಅಂತ ಭಾವಿಸಬೇಡಿ. ಈಗಿನ ಯಜಮಾನ ಸುದೀಪ್ ಅಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್.
ಹೌದು ದರ್ಶನ್ ಅವರ 51ನೇ ಸಿನಿಮಾ ‘ಯಜಮಾನ’. ಶೈಲಜಾನಾಗ್ ಬಿ.ಸುರೇಶ್ ಈ ಚಿತ್ರದ ನಿರ್ಮಾಪಕರು. ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ನೋಡಲು ಕಾಯುತ್ತಿರುವ ಅಭಿಮಾನಿಗಳಿಗೆ 2018 ರ ಕೊನೆಯಲ್ಲಿ ಯಜಮಾನನಾಗಿ ದರ್ಶನ್ ಅವರನ್ನು ನೋಡುವ ಭಾಗ್ಯ.