ಕೊಹ್ಲಿ ಕಮಾಲ್ , ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಜಯ !?

Date:

ಟಿ-20 ಮೊದಲ ಪಂದ್ಯದಲ್ಲಿ 20 ಓವರ್ ನಲ್ಲಿ 9 ವಿಕಟ್ ಪಡೆದು ಕೇವಲ 95 ರನ್ ಗೆ ಕಟ್ಟಿ ಹಾಕಿತು. ಟೀಮ್ ಇಂಡಿಯಾದ ಕರಾರುವಕ್ ಬೌಲಿಂಗ್ ಎದುರು ಬ್ಯಾಟ್ ಬೀಸಲಾಗದೆ ವಿಂಡೀಸ್ ಪಡೆ ಪೆವಿಲಿಯನ್ ಪೆರೇಡ್ ನಡೆಸಿತು. ಆದರೆ, ಉತ್ತರ ನೀಡಲು ಬಂದ ಟೀಮ್ ಇಂಡಿಯಾ ಸಹ ಆರಂಭದಲ್ಲಿ ಅಷ್ಟಾಗಿ ಉತ್ತಮ ಪ್ರದರ್ಶನವೇನೂ ನೀಡಲಿಲ್ಲ. ಕೇವಲ 1ರನ್ ಗೆ ಶಿಖರ್ ಧವನ್ ಎಲ್ ಬಿಡಬ್ಲೂ ಔಟ್ ಆದರೆ ರೋಹಿತ್ ಶರ್ಮಾ 24ರನ್ ಬಾರಿಸಿ ಆರನೇ ಓವರ್ ನಲ್ಲಿ ಕ್ಯಾಚಿತ್ತು ಹೊರಟರು. ಬಳಿಕ ಬಂದ ರಿಷಬ್ ಪಂತ್ ಖಾತೆ ತೆರೆಯದೇ ಹಿಂದಿರುಗಿದರು.

ವಿಕೆಟ್ ಪತನದಿಂದ ನಿಧಾನಗತಿಯ ಆಟವಾಡಿದ ಪರಿಣಾಮ ಟೀಮ್ ಇಂಡಿಯಾ 10ನೇ ಓವರ್ ಗೆ 3ವಿಕೆಟ್ ಕಳೆದುಕೊಂಡು 52 ರನ್ ಬಾರಿಸಿತು. ವಿರಾಟ್ ಕೊಹ್ಲಿ ಹೆಚ್ಚು ಹೊತ್ತು ಮೈದಾನದಲ್ಲಿದ್ದು ನಾಯಕನ ಆಟವಾಡಿ ಗೆಲುವಿನ ದಾರಿ ತೋರಿದರು.29 ಬಾಲ್ ಗೆ 19 ರನ್ ಬಾರಿಸಿ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಕ್ಯಾಚ್ ಔಟಾದರು.

ಬಳಿಕ ಕೃನಾಲ್ ಪಾಂಡ್ಯ ಸಿಕ್ಸರ್ ಬಾರಿಸಿ ಮಿಂಚಿನ ಆಟವಾಡಲೆತ್ನಿಸಿ 14 ಬಾಲ್ ಗೆ 12 ರನ್ ಬಾರಿಸಿ ಬೋಲ್ಡ್ ಔಟಾದರು. ಕೊನೆಗೆ ಸುಂದರ್ ಸಿಕ್ಸ್ ಬಾರಿಸುವ ಮೂಲಕ ಟೀಮ್ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದರು. 6ವಿಕೆಟ್ ಕಳೆದುಕೊಂಡ ಭಾರತ 17.2 ಓವರ್ ನಲ್ಲಿ 98 ರನ್ ಬಾರಿಸಿ ಗೆಲುವಿನ ನಗೆ ಬೀರಿತು.

Share post:

Subscribe

spot_imgspot_img

Popular

More like this
Related

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್ ತಿರಗೇಟು

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್...

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್’ಗೆ HDK ಪತ್ರ

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್'ಗೆ HDK ಪತ್ರ ನವದೆಹಲಿ:...

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...