ಡಿಸ್ಕೋ ಶಾಂತಿ ಪುತ್ರ ತೆರೆಮೇಲೆ..!

Date:

ಒಂದು ಕಾಲದಲ್ಲಿ ಅದ್ಭುತ ನೃತ್ಯದ ಮೂಲಕವೇ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಚೆಲುವೆ ಅಂದ್ರೆ ಡಿಸ್ಕೋ ಶಾಂತಿ. ಈಕೆ ತೆರೆ ಮೇಲೆ ಬಂದ್ರೆ ಸಾಕು ಯುವಕರು ಎದೆ ಬಡಿತ ಜೋರಾಗಿ ಬಡಿದುಕೊಳ್ಳುತ್ತೆ. ಸೌತ್ ಸಿನಿ ಇಂಡಸ್ಟ್ರಿಯಲ್ಲಿ ರಾಣಿಯಾಗಿ ಮೆರೆದ ಪ್ರತಿಭಾನ್ವಿತ ನಟಿ ಈಕೆ. ಬಳುಕೋ ಬಳ್ಳಿಯಂತೆ, ಚೆಲುವಿನ ಮೈಮಾಟದ ನೃತ್ಯಗಳ ಮೂಲಕ ನೋದುಗರ ಮೈ ಬಿಸಿಯೇರುವಂತೆ ಮಾಡ್ತಿದ್ದ ಬೆಡಗಿ. ಅಂಜದ ಗಂಡು, ಕುರುಕ್ಷೇತ್ರ, ಸಾಂಗ್ಲಿಯಾನ, ಯುದ್ಧಕಾಂಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ಡಿಸ್ಕೋ ನೃತ್ಯದ ಮೂಲಕವೇ ಸಿನಿರಸಿಕರ ಮನಗೆದ್ದವರು ಶಾಂತಿ. ಬಳಿಕ ಡಿಸ್ಕೋ ಶಾಂತಿ ಅಂತಾನೇ ಫೇಮಸ್ ಆಗಿದ್ರು. ಅನಂತರ ತೆಲುಗು ರಿಯಲ್ ಸ್ಟಾರ್ ಶ್ರೀಹರಿಯನ್ನು ಮದುವೆಯಾಗೋ ಮೂಲಕ ಡ್ಯಾನ್ಸ್ ಹಾಗೂ ನಟನೆಯಿಂದ ಸ್ವಲ್ಪ ದೂರವಾಗಿದ್ರು. ಇದೀಗ ಡಿಸ್ಕೋಶಾಂತಿಯ ಪುತ್ರ ಮೇಘಾಂಶ್ ಸಿನಿ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ.

ಡಿಸ್ಕೋಶಾಂತಿ ಹಲವಾರು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರಿದಂದ ಸೈ ಎನಿಸಿಕೊಂಡಿದ್ದಾರೆ. ಇದೀಗ ಪುತ್ರ ಮೇಘಾಂಶ್ ಟಾಲಿವುಡ್ನ ‘ರಾಜಧೂತ್’ ಅನ್ನೋ ಸಿನಿಮಾದ ಮೂಲಕ ನಾಯಕನಾಗಿ ಬಣ್ಣದ ಲೋಕಕ್ಕೆ ಕಾಲಿಡ್ತಿದ್ದಾರೆ. ಅಂದ್ದಾಗೆ ಇದೊಂದು ಮಾಸ್, ಸೆಂಟಿಮೆಂಟ್ ಚಿತ್ರವಾಗಿದ್ದು ಪಕ್ಕಾ ಲವರ್ ಬಾಯ್ ಗೆಟಪ್ನಲ್ಲಿ ಮಿಂಚಲಿದ್ದಾರೆ. ಲಕ್ಷ್ಯ ಬ್ಯಾನರ್ನಲ್ಲಿ ಸತ್ಯನಾರಾಯಣ ನಿರ್ಮಾಣದಲ್ಲಿ ರಾಜ್ಧೂತ್ ಸಿನಿಮಾ ಸೆಟ್ಟೇರೆಲಿದ್ದು ಕಾರ್ತಿಕ್ ಮತ್ತು ಅರ್ಜುನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಬಾಲನಟನಾಗಿ ನೃತ್ಯ, ಡ್ಯಾನ್ಸ್ ಕಲೆಯನ್ನು ಕರಗತ ಮಾಡಿಕೊಂಡಿರೋ ಮೇಘಾಂಶ್ ರಾಜಧೂತ್ ಹೇಗೆಲ್ಲ ಕಾಣಿಸಲಿದ್ದಾರೆ ಅನ್ನೋದು ಕುತೂಹಲ ಹೆಚ್ಚಿಸಿದೆ.

Share post:

Subscribe

spot_imgspot_img

Popular

More like this
Related

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...