ತಾನು ಓದದಿದ್ದರೂ ಪತ್ನಿಯನ್ನು ಓದಿಸಿ ತಹಶೀಲ್ದಾರ್ ಮಾಡಿದ ಕಡ್ಡಿ ಸೀನ ಕೊರೊನಾಗೆ ಬಲಿ

Date:

ಶಿವಮೊಗ್ಗ: ತಾನು ಓದದಿದ್ದರೂ ತನ್ನ ಪತ್ನಿಯನ್ನು ಕೆಎಎಸ್ ಶಿಕ್ಷಣ ಕೊಡಿಸಿ ತಹಶೀಲ್ದಾರ್ ಮಾಡಿದ್ದ ರೌಡಿ‌ ಶೀಟರ್ COVIDಗೆ ಬಲಿಯಾಗಿದ್ದಾನೆ.

ಶ್ರೀನಿವಾಸ್​ ಅಲಿಯಾಸ್​ ಕಡ್ಡಿ ಸೀನ ಕೊರೊನಾಗೆ ಬಲಿಯಾದವ. ಇಲ್ಲಿನ ಕಾಮಾಕ್ಷಿ‌ ಬೀದಿಯ‌ ನಿವಾಸಿಯಾದ ಶ್ರೀನಿವಾಸ್ ಈ ಹಿಂದೆ ರೌಡಿ ಶೀಟರ್ ಆಗಿದ್ದನಂತೆ. ಈತ ಕಾರಬ್ ಶಿವುನ ಪ್ರಾಣ ಸ್ನೇಹಿತ.

ತನ್ನ ಅಕ್ಕನ ಮಗಳನ್ನೇ ಮದುವೆಯಾಗಿದ್ದ ಸೀನ, ಆಕೆಯನ್ನು ಕೆಎಎಸ್ ಓದಿಸಿ ಕಳೆದ ಎರಡು ವರ್ಷದ ಹಿಂದೆ ತಹಶೀಲ್ದಾರ್ ಆಗಿ ಉದ್ಯೋಗ ದೊರಕುವಂತೆ ಮಾಡಿದ್ದ. ಆದರೆ ವಿಧಿಯ ಆಟಕ್ಕೆ ಶ್ರೀನಿವಾಸ್ ಬಲಿಯಾಗಿದ್ದಾನೆ.

ಎರಡು ದಿನಗಳ ಹಿಂದೆ ಜ್ವರ ಎಂದು ಮೆಗ್ಗಾನ್ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದ ಶ್ರೀನಿವಾಸ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾನೆ. ಅಪಘಾತವಾಗಿ ಬಿಲಗಾಲಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿ‌ಕೊಂಡಿದ್ದ ಶ್ರೀನಿವಾಸ್ ಊರುಗೋಲಿನ ಸಹಾಯದಿಂದ ಓಡಾಡುತ್ತಿದ್ದ. ಈತನಿಗೆ 7 ವರ್ಷದ ಮಗ ಇದ್ದಾನೆ.

 

Share post:

Subscribe

spot_imgspot_img

Popular

More like this
Related

IPL 2026: ತವರಿನಲ್ಲಿ ಹೈದರಾಬಾದ್​ ಮಣಿಸಿ ಶುಭಾರಂಭ ಮಾಡಿದ RCB!

IPL 2026: ತವರಿನಲ್ಲಿ ಹೈದರಾಬಾದ್​ ಮಣಿಸಿ ಶುಭಾರಂಭ ಮಾಡಿದ RCB! ಬೆಂಗಳೂರುದಲ್ಲಿರುವ ಎಂ....

ಕುವೆಂಪು ಮೆಟ್ರೋ ನಿಲ್ದಾಣದ ಬಳಿ ಭಾರಿ ಅವಾಂತರ! ನೋಡ ನೋಡುತ್ತಿದ್ದಂತೆಯೇ ಧರೆಗುರುಳಿದ ಬೃಹತ್ ಮರ!

ಕುವೆಂಪು ಮೆಟ್ರೋ ನಿಲ್ದಾಣದ ಬಳಿ ಭಾರಿ ಅವಾಂತರ! ನೋಡ ನೋಡುತ್ತಿದ್ದಂತೆಯೇ ಧರೆಗುರುಳಿದ...

ಹಿಂದೂ ಧರ್ಮವು ಪೂಜಾ, ಆಚರಣೆಗಳಷ್ಟೇ ಅಲ್ಲ; ಅದು ಒಂದು ಜೀವನ ಶೈಲಿ: ಮೋಹನ್ ಭಾಗವತ್

ಹಿಂದೂ ಧರ್ಮವು ಪೂಜಾ, ಆಚರಣೆಗಳಷ್ಟೇ ಅಲ್ಲ; ಅದು ಒಂದು ಜೀವನ ಶೈಲಿ:...

ವಯೋವೃದ್ಧ ಗಜೇಂದ್ರನಿಗೆ ಶಿಬಿರಕ್ಕೆ ಸ್ಥಳಾಂತರಕ್ಕೆ ಈಶ್ವರ್ ಖಂಡ್ರೆ ಸೂಚನೆ

ವಯೋವೃದ್ಧ ಗಜೇಂದ್ರನಿಗೆ ಶಿಬಿರಕ್ಕೆ ಸ್ಥಳಾಂತರಕ್ಕೆ ಈಶ್ವರ್ ಖಂಡ್ರೆ ಸೂಚನೆ ಚಾಮರಾಜನಗರ: ಹಲವು ದಸರಾ...