ನಟ ಪವನ್ ಕಲ್ಯಾಣ್ ಹತ್ಯೆಗೆ ಸ್ಕೆಚ್…..!

Date:

ನಟ ಪವನ್​ ಕಲ್ಯಾಣ್​ ಹತ್ಯೆಗೆ ಸ್ಕೆಚ್​..!

ಆಂಧ್ರಪ್ರದೇಶದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿರುವ ಪವರ್​ ಸ್ಟಾರ್​​ ಪವನ್​ ಕಲ್ಯಾಣ್​ ಹತ್ಯಗೆ ಸ್ಕೆಚ್​ ಹಾಕಿದ್ದಾರಾ..? ಇಂಥಾದ್ದೊಂದು ಆತಂಕವನ್ನ ಸ್ವತಃ ಪವನ್​ ಕಲ್ಯಾಣ್ ಅವರೇ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಪಶ್ಚಿಮ ಗೋಧಾವರಿ ಜಿಲ್ಲೆಯಲ್ಲಿ ನಡೆದ ಜನಸೇನಾ ಯಾತ್ರೆಯಲ್ಲಿ ಅವರು ಇಂಥಾದ್ದೊಂದು ಆತಂಕ ವ್ಯಕ್ತ ಪಡಿಸಿದ್ದಾರೆ.
ಮಂಗಳವಾರ ಪಶ್ಚಿಮ ಗೋದಾವರಿಯಲ್ಲಿ ಜನಸೇನಾ ಪಕ್ಷದ ವತಿಯಿಂದ ಪ್ರಜಾ ಹೋರಾಟ ಯಾತ್ರೆಯನ್ನ ಆಯೋಜಿಸಲಾಗಿತ್ತು. ಪವನ್​ ಕಲ್ಯಾಣ್​​ ಆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ನೂಕು ನುಗ್ಗಲು ಉಂಟಾಗುತ್ತೆ. ಅಷ್ಟೇ ಅಲ್ಲದೇ, ನಾಲ್ಕು ಯುವಕರು ಅನುಮಾನಾಸ್ಪದವಾಗಿ ಪವನ್​ ಕಲ್ಯಾಣ್​ ಅವರ ಸುತ್ತ ಓಡಾಡಿದ್ದರು. ಕೂಡಲೇ ಕಾರ್ಯಕರ್ತರು ಪವನ್​ ಅವರನ್ನ ಸುರಕ್ಷಿತವಾಗಿ ಕರೆದೊಯ್ದಿದ್ದರು. ಈ ನೂಕು ನುಗ್ಗಲಿನ ಬಳಿಕ ಮಾತನಾಡಿದ ಪವನ್​, ಚುನಾವಣೆಗೂ ಮುನ್ನ ತಮ್ಮ ಹತ್ಯೆಗೆ ಸಂಚು ರೂಪಿಸಲಾಗಿದೆ ಎನ್ನುವ ಆರೋಪ ಮಾಡಿದ್ದರು. ಅಷ್ಟೇ ಅಲ್ಲದೇ, ಇದು ಆಡಳಿತ ಪಕ್ಷ ಅಥವಾ ವಿರೋಧ ಪಕ್ಷದವರ ಸಂಚಾಗಿರಬಹುದು ಎನ್ನುವ ಅನುಮಾನವನ್ನ ಕೂಡ ವ್ಯಕ್ತಪಡಿಸಿದ್ದರು. ಜೊತೆಗೆ ಪೊಲೀಸ್​ ಭದ್ರತೆಯ ಬಗ್ಗೆಯೂ ಪ್ರಶ್ನೆ ಮಾಡಿದ್ದರು.
ಪವನ್​ ಕಲ್ಯಾಣ್​ ಇಂಥಾದ್ದೊಂದು ಆರೋಪ ಮಾಡುತ್ತಿದ್ದಂತೆ ಸಿಸಿಟಿವಿ ಕ್ಯಾಮರಾಗಳನ್ನ ಪರಿಶೀಲನೆ ಮಾಡಿದ ಪೊಲೀಸರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ನಾಲ್ಕು ಯುವಕರನ್ನ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಅವರೆಲ್ಲಾ ಪವನ್​ ಕಲ್ಯಾಣ್​ ಅವರ ಅಭಿಮಾನಿಗಳು ಎನ್ನುವ ಸಂಗತಿ ತಿಳಿದು ಬಂದಿದೆ. ಒಟ್ಟಾರೆ ಈ ಘಟನೆಯ ಬಳಿಕ ಜನಸೇನಾ ನಾಯಕ ಹಾಗೂ ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ಅವರಿಗೆ ಹೆಚ್ಚಿನ ಪೊಲೀಸ್​ ಭದ್ರತೆ ನೀಡಲಾಗಿದೆ.

Share post:

Subscribe

spot_imgspot_img

Popular

More like this
Related

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ “ಸಾಲು ಮರದ ತಿಮ್ಮಕ್ಕ” ಇನ್ನಿಲ್ಲ..!

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ "ಸಾಲು ಮರದ ತಿಮ್ಮಕ್ಕ" ಇನ್ನಿಲ್ಲ..! ಬೆಂಗಳೂರು: ಪದ್ಮಶ್ರೀ ಪುರಸ್ಕೃತ...

ಬಿಹಾರ ಚುನಾವಣೆ 2025 ಫಲಿತಾಂಶ: ಭರ್ಜರಿ ಮುನ್ನಡೆ ಸಾಧಿಸಿರುವ NDA ಮೈತ್ರಿಕೂಟ!

ಬಿಹಾರ ಚುನಾವಣೆ 2025 ಫಲಿತಾಂಶ: ಭರ್ಜರಿ ಮುನ್ನಡೆ ಸಾಧಿಸಿರುವ NDA ಮೈತ್ರಿಕೂಟ! ನವದೆಹಲಿ:...

ರಾಜ್ಯ ಸರ್ಕಾರದಿಂದ 2025ನೇ ಸಾಲಿನ ‘ಸಾರ್ವತ್ರಿಕ ರಜಾ’ ದಿನಗಳ ಪಟ್ಟಿ ಬಿಡುಗಡೆ

ರಾಜ್ಯ ಸರ್ಕಾರದಿಂದ 2025ನೇ ಸಾಲಿನ 'ಸಾರ್ವತ್ರಿಕ ರಜಾ' ದಿನಗಳ ಪಟ್ಟಿ ಬಿಡುಗಡೆ ಕರ್ನಾಟಕ...

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ ಇಂದಿನ ವೇಗದ ಜೀವನದಲ್ಲಿ ಬಹುತೇಕ...