ನಿತ್ಯ ಭವಿಷ್ಯ : ಪ್ರೇಮ ಸಂಬಂಧಗಳಲ್ಲಿ ಈ ರಾಶಿಯವರಿಗೆ ಆಹ್ಲಾದಕರ ದಿವಸ

Date:

ನಿತ್ಯ ಭವಿಷ್ಯ :  ಪ್ರೇಮ ಸಂಬಂಧಗಳಲ್ಲಿ ಈ ರಾಶಿಯವರಿಗೆ ಆಹ್ಲಾದಕರ ದಿವಸ

 

ಮೇಷ :   ವೃತ್ತಿರಂಗದಲ್ಲಿ ಸ್ಪರ್ಧಾತ್ಮಕ ಪೈಪೋಟಿ. ಕಾಲಮಿತಿಯಲ್ಲಿ ಕೆಲಸ ಮುಗಿಸಬೇಕಾದ ಒತ್ತಡ. ದಾಂಪತ್ಯದಲ್ಲಿ ಸ್ವಲ್ಪಮಟ್ಟಿಗೆ ಕಿರಿಕಿರಿ. ಕುಟುಂಬಸ್ಥರ ಹಿತಾಸಕ್ತಿ ಕಡೆ ಸ್ವಲ್ಪ ಗಮನಕೊಡಿ. ಹಣಕಾಸಿನ  ವಿಚಾರ ನೋಡುವುದಾದರೆ ಶುಭದಾಯಕವಾಗಿದೆ. ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ.

ವೃಷಭ : ವಿವಾಹ ಮಾತುಕತೆ, ಆಸ್ತಿಯ ವಿಚಾರದಲ್ಲಿ ಸಹೋದರ ಸಂಬಂಧಿ ನಡೆಯಿಂದ ಸಂತೋಷ ಮೊದಲಾದ ಫಲಗಳು ಗೋಚರವಾಗುತ್ತಿವೆ. ಗುರುವನ್ನು ಪ್ರಾರ್ಥಿಸಿ.

ಮಿಥುನ :  ಕೃಷಿಕರಿಗೆ, ದ್ರವ ವ್ಯಾಪಾರಿಗಳಿಗೆ ಶುಭ ದಿವಸ. ಯಶಸ್ಸಿನ ಬಗ್ಗೆ ಯೋಚಿಸುತ್ತಿರುವ ನೀವು ಸೋಗಿನ ಮಾತುಗಳಿಗೆ ಮರುಳಾಗಬೇಡಿ. ಅಪರಿಚಿತರ ಮಾತಿಗೆ ಕಳೆದುಹೋಗದಿರಿ. ವಿಘ್ನೇಶ್ವರನನ್ನು ಅನನ್ಯ ಭಾವದಿಂದ ಪ್ರಾರ್ಥಿಸಿ.

ಕರ್ಕಾಟಕ :  ಕಚೇರಿ ಕೆಲಸ ಕಾರ್ಯಗಳಲ್ಲಿ ಜಯ. ನೀವು ಕೆಲಸ ಮಾಡುವ ಸ್ಥಳದಲ್ಲಿ ಪ್ರಶಂಸೆ. ಆದರೆ ಮಾತಿಗೆ ಮುನ್ನ ಗಡಿಬಿಡಿ ಬೇಡ. ನಿಮ್ಮ ಮುಖ್ಯಸ್ಥರ ಮಾತನ್ನು ಸಾವಧಾನದಿಂದ ಆಲಿಸಿ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ. ಸಹೋದರನ ಸಹಕಾರ ದೊರೆಯಲಿದೆ. ಸಾಲಬಾಧೆಯಿಂದ ಮುಕ್ತಿ. ಶಿವನನ್ನು ಪ್ರಾರ್ಥಿಸಿ.

ಸಿಂಹ : ನಿಮ್ಮ ನಿಜವಾದ ಅರ್ಹತೆಯನ್ನು ಮೇಲಾಧಿಕಾರಿಗಳು ಅಳೆಯುವರು. ವ್ಯಾಪಾರ-ವ್ಯವಹಾರಗಳಲ್ಲಿ ಲಾಭ. ಕುಟುಂಬದವರಿಗೆ ನೆರವಾಗುತ್ತೀರಿ. ಎಂಜಿನಿಯರ್ಸ್, ವೈದ್ಯ ವೃತ್ತಿಯವರಿಗೆ ಮಹತ್ವದ ದಿನವಾಗಿರಲಿದೆ. ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥನೆ ಮಾಡಿ.

ಕನ್ಯಾ : ಪ್ರೇಮ ಸಂಬಂಧದಲ್ಲಿ ಆಹ್ಲಾದಕರದಿನ. ಆಸ್ತಿ-ಪಾಸ್ತಿ ವಿಚಾರದಲ್ಲಿ ಮಹತ್ವದ ಸುದ್ದಿ ಕೇಳುತ್ತೀರಿ. ಸ್ನೇಹತರೊಂದಿಗೆ ಸುಂದರ ಕ್ಷಣಗಳನ್ನು ಕಳೆಯುತ್ತೀರಿ. ಹಣದ ಸಮಸ್ಯೆ ಬಗೆಹರಿಯುತ್ತದೆ. ಪೋಷಕರು ಸಹಕಾರ ನೀಡುತ್ತಾರೆ. ವಾಹನ ಸೌಖ್ಯ ಮೊದಲಾದ ಫಲಗಳಿವೆ. ಸುಬ್ರಹ್ಮಣ್ಯ ದೇವರನ್ನು ಪೂಜಿಸಿ.

ತುಲಾ :  ಆರೋಗ್ಯದಲ್ಲಿ ಏರುಪೇರು, ಸಹೋದರಿಯಿಂದ ಸಹಕಾರ, ನಿಮ್ಮವರಿಂದಲೇ ಅವಮಾನ, ಕಠಿಣ ಶ್ರಮದಿಂದ ಲಾಭ, ಯಶಸ್ಸಿಗೆ ದಾರಿ ಕಂಡುಕೊಳ್ಳುವ ಸಮಯ ಮೊದಲಾದ ಮಿಶ್ರಫಲಗಳು ಗೋಚರವಾಗುತ್ತಿವೆ. ಧನ್ವಂತರಿಯನ್ನು ಪೂಜಿಸಿ.

ವೃಶ್ಚಿಕ : ಹೆಸರು, ಸಾಧನೆ, ಕೀರ್ತಿ ಸಂಪಾದನೆಗೆ ದಾರಿ. ಬಯಸಿದ ಕೆಲಸ ಕಾರ್ಯಗಳಲ್ಲಿ ಜಯ. ಘನತೆ ಕಾಪಾಡಿಕೊಳ್ಳಿ ಯಶಸ್ಸು ಸದ್ಯದಲ್ಲೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.  ನೀವು ಕೂಡ ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿ.

ಧನು : ಕಾರ್ಯಸಾಧನೆಯ ದಿನ. ಆದರೆ ಪ್ರಯಾಣದಲ್ಲಿ ಎಚ್ಚರವಿರಲಿ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಸುಬ್ರಹ್ಮಣ್ಯನನ್ನು ಅನನ್ಯಭಾವದಿಂದ ಪ್ರಾರ್ಥಿಸಿ.

ಮಕರ :  ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಕೆಲಸದ ಸ್ಥಳದಲ್ಲಿ ಜವಬ್ದಾರಿ ಹೆಚ್ಚಲಿದೆ. ಹಣಕಾಸಿನ ಸುಧಾರಣೆ, ಬಾಕಿ ಬಿಲ್ ಗಳನ್ನೆಲ್ಲಾ ಪಾವತಿಸಲು ಅನುಕೂಲಕರವಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಗಣೇಶ ಹಾಗೂ ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ.

ಕುಂಭ :  ನಿಮ್ಮ ದೌರ್ಬಲ್ಯ ಸರಿಪಡಿಸಿಕೊಳ್ಳಿ. ಬೇರೆಯವರನ್ನು ಟೀಕಿಸುವ ಕೆಲಸ ಬೇಡವೇ ಬೇಡ. ಆರೋಗ್ಯದತ್ತ ಗಮನಕೊಡಿ.  ಕೆಲವರನ್ನು ನಿಮ್ಮ ಸಂಘ ಬೆಳೆಸಲು ಇಷ್ಟಪಡುತ್ತಾರೆ. ನಿಮ್ಮೊಂದಿಗೆ ಬೆರೆಯಲು ಪ್ರಯತ್ನ ಪಡುತ್ತಾರೆ. ಮಹೇಶ್ವರ, ನಾಗ ದೇವರು, ಆಂಜನೇಯನನ್ನು ಭಕ್ತಿ ಭಾವದಿಂದ ಪ್ರಾರ್ಥಿಸಿ.

ಮೀನ :   ವ್ಯಾಪಾರ –ವ್ಯವಹಾರಗಳಲ್ಲಿ ಯಶಸ್ಸು. ಆಭರಣ, ಬಟ್ಟೆ ವ್ಯಾಪಾರಿಗಳಿಗೆ ಲಾಭದಾಯಕ ದಿನ. ಆರೋಗ್ಯದಲ್ಲಿ ಸುಧಾರಣೆ. ಮಾತಿನಲ್ಲಿ ಸಂಯಮವಿರಲಿ. ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...