ರಘು ಗೌಡಗೆ ಮನೆ ಹೋಗುವುದಾದರೆ ಹೋಗಿ ಅಂದಿದ್ದೇಕೆ ಸುದೀಪ್

Date:

ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಬಯಸಿದಾಗ ಮನೆಗೆ ಹೋಗಲಾಗುವುದಿಲ್ಲ. ಇನ್ನು ಒಂದು ವೇಳೆ ಯಾರಾದರೂ ಸ್ಪರ್ಧಿಗಳು ಕೈ ಎತ್ತಿದರೆ ಬಿಗ್ ಬಾಸ್ ಮರು ಕ್ಷಣ ಆ ಸ್ಪರ್ಧಿಯನ್ನು ಬಾಗಿಲಿನಿಂದ ಹೊರ ಹಾಕುತ್ತಾರೆ. ಈ ಬಾರಿಯ ಸ್ಪರ್ಧೆಯಲ್ಲಿ ಸ್ವತಃ ಸುದೀಪ್ ಅವರೇ ರಘು ಗೌಡ ಅವರಿಗೆ ನಿಮಗೆ ಇಷ್ಟವಿದ್ದರೆ ಮನೆಗೆ ಹೋಗಬಹುದು ಎಂದಿದ್ದಾರೆ.

ಸಾಕಷ್ಟು ಬಾರಿ ರಘು ಗೌಡ ಅವರು ನನ್ನ ಹತ್ತಿರ ಆಗುತ್ತಿಲ್ಲ, ಮನೆಗೆ ಹೋಗುತ್ತೇನೆ ಎಂದು ಹೇಳಿದ್ದಾರಂತೆ. ಹೀಗಾಗಿ ಸುದೀಪ್ ಅವರು “ನೀವು ಬಯಸಿದರೆ ಈ ಕ್ಷಣ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗಬಹುದು, ಬಿಗ್ ಬಾಸ್ ಮನೆಯ ಬಾಗಿಲನ್ನು ಓಪನ್ ಮಾಡಿಸುತ್ತೇನೆ, ಈ ಹಿಂದಿನ ಸೀಸನ್‌ಗಳಲ್ಲಿ ಈ ರೀತಿ ಆಗಿರಲಿಲ್ಲ, ಆದರೆ ನೀವು ಬಯಸಿದರೆ ಮೊದಲ ಬಾರಿಗೆ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗಲು ಅವಕಾಶವಿದೆ. ಒಂದು ವೇಳೆ ಮನೆಯಿಂದ ಹೊರಗೆ ಹೋಗೋದಿಲ್ಲ, ಆಟವನ್ನು ಮುಂದುವರಿಸುತ್ತಾರೆ ಎಂದರೆ ಒಂದು ಬಲವಾದ ಕಾರಣ ಕೊಡಬೇಕು” ಎಂದು ರಘು ಅವರಿಗೆ ಹೇಳಿದ್ದಾರೆ.

ತುಂಬ ಯೋಚನೆ ಮಾಡಿ ಮಾತನಾಡಿದ ರಘು ಅವರು “ನಾನು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ಪದೇ ಪದೇ ಹೇಳಿ ಬಿಗ್ ಬಾಸ್ ವೇದಿಕೆಗೆ ಅವಮಾನ ಮಾಡಿದ್ದೇನೆ. ಇದಕ್ಕಾಗಿ ಕ್ಷಮೆ ಕೇಳುತ್ತೇನೆ. ನನಗೆ ಆಟ ಆಡದೆ ಹೊರಗೆ ಹೋಗೋದು ಇಷ್ಟವಿಲ್ಲ. ಹೀಗಾಗಿ ಆಟವನ್ನು ಮುಂದುವರೆಸುತ್ತೇನೆ. 50 ಲಕ್ಷ ಜನರಲ್ಲಿ ಒಬ್ಬರನ್ನು ಬಿಗ್ ಬಾಸ್ ಸ್ಪರ್ಧಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ನನಗೆ ಸಿಕ್ಕ ಅವಕಾಶವನ್ನು ಹಾಳು ಮಾಡಿಕೊಳ್ಳಲಾಗೋದಿಲ್ಲ” ಎಂದು ಹೇಳಿದ್ದಾರೆ.

ಆ ನಂತರದಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಅವರು “ಈ ಏಳು ಸೀಸನ್‌ಗಳಲ್ಲಿ ಜನರು ಸ್ಪರ್ಧಿಗಳಿಗೆ ವೋಟ್ ಹಾಕುತ್ತಾರೋ ಇಲ್ಲವೋ ಬಿಗ್ ಬಾಸ್‌ಗೆ ವೋಟ್ ಹಾಕಿ ಗೆಲ್ಲಿಸಿದ್ದಾರೆ, ಯಶಸ್ವಿ ಮಾಡಿದ್ದಾರೆ” ಎಂದು ಹೇಳಿದ್ದಾರೆ.

 

Share post:

Subscribe

spot_imgspot_img

Popular

More like this
Related

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ “ಸಾಲು ಮರದ ತಿಮ್ಮಕ್ಕ” ಇನ್ನಿಲ್ಲ..!

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ "ಸಾಲು ಮರದ ತಿಮ್ಮಕ್ಕ" ಇನ್ನಿಲ್ಲ..! ಬೆಂಗಳೂರು: ಪದ್ಮಶ್ರೀ ಪುರಸ್ಕೃತ...

ಬಿಹಾರ ಚುನಾವಣೆ 2025 ಫಲಿತಾಂಶ: ಭರ್ಜರಿ ಮುನ್ನಡೆ ಸಾಧಿಸಿರುವ NDA ಮೈತ್ರಿಕೂಟ!

ಬಿಹಾರ ಚುನಾವಣೆ 2025 ಫಲಿತಾಂಶ: ಭರ್ಜರಿ ಮುನ್ನಡೆ ಸಾಧಿಸಿರುವ NDA ಮೈತ್ರಿಕೂಟ! ನವದೆಹಲಿ:...

ರಾಜ್ಯ ಸರ್ಕಾರದಿಂದ 2025ನೇ ಸಾಲಿನ ‘ಸಾರ್ವತ್ರಿಕ ರಜಾ’ ದಿನಗಳ ಪಟ್ಟಿ ಬಿಡುಗಡೆ

ರಾಜ್ಯ ಸರ್ಕಾರದಿಂದ 2025ನೇ ಸಾಲಿನ 'ಸಾರ್ವತ್ರಿಕ ರಜಾ' ದಿನಗಳ ಪಟ್ಟಿ ಬಿಡುಗಡೆ ಕರ್ನಾಟಕ...

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ ಇಂದಿನ ವೇಗದ ಜೀವನದಲ್ಲಿ ಬಹುತೇಕ...