ಶಾಸಕರ ಕಾರು ಅಪಘಾತ 3 ವರ್ಷದ ಮಗು ಬಲಿ !?

admin
1 Min Read

ಶಾಸಕರ ಕಾರು, ಬೈಕ್ ಮೇಲೆ ಹರಿದ ಪರಿಣಾಮ 3 ವರ್ಷದ ಬಾಲಕಿ ಸಾವನ್ನಪ್ಪಿ, ಪೋಷಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಲುಗುಲು ಜಿಲ್ಲೆಯ ಜಿದಿವಾಗಾಲೂ ಗ್ರಾಮದಲ್ಲಿ ಸಂಭವಿಸಿದೆ.

ತೆಲಂಗಾಣದ ಶಾಸಕಿ ಧನಸಾರೈ ಅನುಸೂಯ ಅವರಿದ್ದ ಕಾರು ವಿರುದ್ಧ ದಿಕ್ಕಿನಲ್ಲಿ ಸಾಗಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಬೈಕ್ ಸ್ಕಿಡ್ ಆದ ಪರಿಣಾಮ 3 ವರ್ಷದ ಬಾಲಕಿ ಶ್ರಾವಂತಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಕೆ.ಅರುಣ್ ಹಾಗೂ ಆತನ ಪತ್ನಿ ವಿಜಯಾ ಗಾಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಈತುರಣಗ್ರಾಮದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಸ್ಥಳೀಯ ಪೊಲೀಸರು ಶಾಸಕಿ ಅನುಸೂಯ ಹಾಗೂ ಚಾಲಕನ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Share This Article
Leave a Comment