ಸಿಂಗಲ್ಸ್ ತಿರಸ್ಕರಿಸುವ ದಿನ ದೂರವಿಲ್ಲ ಅಂದಿದ್ದೇಕೆ ದ್ರಾವಿಡ್?

Date:

ಕ್ರಿಕೆಟ್​​ನಲ್ಲಿ ಪ್ಲೇಯರ್ಸ್​​​ ಸಿಂಗಲ್(ಒಂದು)​​ ರನ್​ ತಿರಸ್ಕರಿಸುವ ದಿನ ದೂರು ಉಳಿದಿಲ್ಲ ಎಂದು ಟೀಂ ಇಂಡಿಯಾದ ಮಾಜಿ ದಿಗ್ಗಜ ಆಟಗಾರ, ಕ್ರಿಕೆಟ್​​ ಗೋಡೆ ಖ್ಯಾತಿಯ ರಾಹುಲ್​​ ದ್ರಾವಿಡ್​ ಹೇಳಿದ್ದಾರೆ. ವಾಷಿಂಗ್ಟನ್​​ನಲ್ಲಿ ನಡೆದ 15ನೇ ಎಂಐಟಿ ಸ್ಲೋನ್​​ ಸ್ಪೋರ್ಟ್ಸ್​​​ ಅನಾಲಿಟಿಕ್ಸ್​ ಸಮ್ಮೇಳನದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಪ್ಲೇಯರ್ಸ್​ಗಳ ಡೇಟಾ ಆಟಗಾರರ ಆಯ್ಕೆಗೆ ಬಳಕೆ ಮಾಡಲಾಗುತ್ತಿದ್ದು, ಇದು ಉತ್ತಮ ಸ್ಪರ್ಧೆಗೆ ಬಳಕೆಯಾಗಬೇಕಾಗಿದೆ ಎಂದರು. ಕ್ರಿಕೆಟ್​ ತಂತ್ರಗಾರಿಕೆ ಮತ್ತು ಆಟಗಾರರ ಆಯ್ಕೆಗೆ ಸಹಾಯ ಮಾಡಲು ಅಂಕಿ – ಅಂಶ ಕ್ರಿಕೆಟ್​ನಲ್ಲಿ ಬಳಸಲಾಗುವ ಡೇಟಾ ಉತ್ತಮ ಸ್ಪರ್ಧೆ ನಡೆಸಬೇಕು ಎಂದಿದ್ದಾರೆ.

ಕ್ರಿಕೆಟ್​ ಯಾವಾಗಲೂ ಬೇಸ್​ ಬಾಲ್​ನಂತೆ ಸಂಖ್ಯಾಶಾಸ್ತ್ರೀಯವಾಗಿ ಚಾಲಿತವಾಗಿದೆ. ಆದರೆ, ಕಳೆದ 15 ವರ್ಷಗಳಲ್ಲಿ ನಾವು ಎಲ್ಲವೂ ಮೀರಿ ಸಾಗಿದ್ದೇವೆ. ಇದೀಗ ಆಟಗಾರರ ಆಯ್ಕೆಗೆ ಡೇಟಾ ಬಳಕೆ ಮಾಡಲಾಗ್ತಿದೆ. ಹೀಗಾಗಿ ಪ್ಲೇಯರ್ಸ್​​ ಪಂದ್ಯಗಳಲ್ಲಿ ಹೆಚ್ಚು ಅಗ್ರೇಸ್ಸಿವ್​ ಆಗಿ ಆಟವಾಡ್ತಿದ್ದಾರೆ ಎಂದರು.

ಟಿ-20 ಪಂದ್ಯಗಳಲ್ಲಿ ಹೆಚ್ಚು ಗೆಲ್ಲುವು ಸಾಧಿಸಲು ಕ್ರಿಕೆಟ್​ ಆಟಗಾರರು ಬೌಂಡರಿ ಮತ್ತು ಸಿಕ್ಸರ್​ಗಳ ಮೊರೆ ಹೊಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ಲೇಯರ್ಸ್​​ ಸಿಂಗಲ್​ ತಿರಸ್ಕರಿಸುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಎರಡು ಅಥವಾ ಮೂರು ಎಸೆತಗಳಲ್ಲಿ ಸಿಕ್ಸರ್​, ಬೌಂಡರಿ ಹೊಡೆಯಲು ಅವರು ಮುಂದಾಗುತ್ತಿರುವುದು ಎಂದರು.

ಈ ಕಾರ್ಯಕ್ರಮದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್​ಮನ್​​, ಭಾರತದ ಮಾಜಿ ಕೋಚ್​ ಗ್ಯಾರಿ ಕರ್ಸ್ಟನ್​​ ಹಾಗೂ ಇಂಗ್ಲೆಂಡ್​ ಮಹಿಳಾ ತಂಡದ ಆಟಗಾರ್ತಿ ಇಸಾ ಗುಹಾ ಭಾಗಿಯಾಗಿದ್ದರು.

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...