ಮುಂಬೈ ದಾಳಿಗೆ ಇಂದು ಎಂಟು ವರ್ಷ: ಜನರಲ್ಲಿ ಇನ್ನೂ ಮಾಸಿಲ್ಲ ಆ ಕರಾಳ ದಿನದ ನೆನಪು

admin
By admin
1 Min Read

26/11/2008 ಇಡೀ ವಿಶ್ವವೇ ಕಂಡು ಕೇಳರಿಯದ ದುರಂತವೊಂದು ನಡೆದು ಹೋಗಿತ್ತು..! ದೇಶದ ಪ್ರಖ್ಯಾತ ಹೋಟೆಲ್‍ಗಳಲ್ಲಿ ಒಂದಾದ ತಾಜ್ ಹಾಗೂ ಒಬೇರಾಯ್ ಹೋಟೆಲ್‍ಗಳ ಮೇಲೆ ಉಗ್ರರ ದಾಳಿ ನಡೆದು ಹೋಗಿತ್ತು. ಅಂದು ನಡೆದ ಕರಾಳ ದಿನದ ನೆನಪು ಇಂದೂ ಕೂಡ ಜನರಲ್ಲಿ ಅಚ್ಚಳಿದು ಬಿಟ್ಟಿದೆ. ದುರಂತ ನಡೆದು ಸುಮಾರು ಎಂಟು ವರ್ಷ ಕಳೆದರೂ ಅಮಾಯಕ ಜನರು, ಹುತಾತ್ಮ ಯೋಧರನ್ನು ಕಳೆದುಕೊಂಡ ನೆನಪಿನಲ್ಲಿ ದೇಶದ ಜನ ಇದ್ದಾರೆ.
ಇನ್ನು ಕರಾಳ ದಿನದ ನೆನಪು ಹಿನ್ನಲೆಯಲ್ಲಿ ದೇಶದಾದ್ಯಂತ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅದರಲ್ಲು ಮುಂಬೈ ನಗರಿಯಲ್ಲಿ ದಾಳಿಯಲ್ಲಿ ಅಸುನೀಗಿದ ಅಮಾಯಕ ಜನರು ಹಾಗೂ ಹುತಾತ್ಮ ಯೋಧರಿಗರ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
26/11/2008ರಲ್ಲಿ ಮುಂಬೈನ ಪ್ರಸಿದ್ದ ತಾಜ್ ಹೋಟೆಲ್, ಛತ್ರಪತಿ ಶಿವಾಜಿ ಟರ್ಮಿನಲ್, ಲಿಯೋಪೋಲ್ಡ್ ಕೆಫೆ, ಕಾಮಾ ಆಸ್ಪತ್ರೆ ಸೇರಿದಂತೆ 7 ಕಡೆಗಳಲ್ಲಿ ಸುಮಾರು 10 ಉಗ್ರರು ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 166 ಮಂದಿ ಮೃತ ಪಟ್ಟಿದ್ದು, 308 ಜನ ಗಾಯಗೊಂಡಿದ್ದರು. 68 ಗಂಟೆಗಳ ಕಾಲ ಭದ್ರತಾ ಸಿಬ್ಬಂಧಿ ಹಾಗೂ ಉಗ್ರರ ನಡುವೆ ನಡೆದ ಕಾದಾಟದಲ್ಲಿ ಭದ್ರತಾ ಪಡೆಗಳ 17 ಮಂದಿ ಹುತಾತ್ಮರಾಗಿದ್ದರು.

Like us on Facebook  The New India Times

POPULAR  STORIES :

500ರೂ. ಹೊಸ ನೋಟಿನಲ್ಲಿ ತಪ್ಪು: ಆರ್‍ಬಿಐ ಸ್ಪಷ್ಟನೆ

ಮಲ್ಯರಂತೆ ನನ್ನ ಸಾಲ ಮನ್ನಾ ಮಾಡಿ: ಮಂಡ್ಯ ರೈತನ ಮನವಿ.

ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ

ಇನ್ಮುಂದೆ ಬಿಗ್ ಬಜಾರ್‍ನಲ್ಲೂ ಮನಿ ವಿತ್‍ಡ್ರಾ ಮಾಡ್ಕೊಳ್ಳಿ..!

ಅವನಿಗೆ ಅವಳು ಇಷ್ಟವಾಗಿದ್ದು ಪ್ರತಿಭಟನೆಯಲ್ಲಿ. ಅವಳು ಇವನ ಮುಖ ನೋಡಿದ್ದು ಸೆರಗು ಸಿಕ್ಕಿಬಿದ್ದಾಗ.!

50 ಲಕ್ಷ ಮಂದಿಗೆ ಸ್ಮಾರ್ಟ್ ಫೋನ್ & 1 ವರ್ಷ ಡೇಟಾ ಉಚಿತ

ರೈಲ್ವೇ ಆಫರ್: ಇನ್ಮುಂದೆ ಆನ್‍ಲೈನ್ ಬುಕಿಂಗ್‍ಗೆ ಹೆಚ್ಚುವರಿ ಶುಲ್ಕ ಇಲ್ಲ..!

Share This Article