ಬ್ರೆಷ್ ಮಾಡದ ತನ್ನ ಮಗಳಿಗೆ ತಾಯಿ ಕೊಟ್ಟ ಶಿಕ್ಷೆ ಏನು ಗೊತ್ತಾ..?

Date:

ಬೆಳಿಗ್ಗೆ ಎದ್ದು ತಮ್ಮ ಮಕ್ಳು ಬ್ರೆಷ್ ಮಾಡದೇ ಇದ್ರೆ ಸಾಮಾನ್ಯವಾಗಿ ಒಬ್ಬ ತಾಯಿ ಕೊಡೋ ಶಿಕ್ಷೆಯಾದ್ರೂ ಹೇಗಿರ್ಬೋದು ಹೇಳಿ. ಬೈಬೋದು ಇಲ್ಲ ಹೊಡಿಬೋದು.. ಅದಕ್ಕೂ ಮುಂದೆ ಹೋದ್ರೆ ತಾಯಿನೇ ಬಲವಂತ ಮಾಡಿ ಬ್ರಷ್ ಮಾಡಿಸ್ಬೋದು. ಆದ್ರೆ ಕೊಲೆ ಮಾಡೋ ಮಟ್ಟಿಗೆ ಹೋಗ್ತಾಳೆ ಅಂದ್ರೆ ನೀವ್ ನಂಬ್ತೀರಾ..? ಹೌದು.. ಇಂತಹದೊಂದು ಅಮಾನವೀಯ ಕೃತ್ಯ ನಡೆದಿರೋದು ಅಮೇರಿಕಾದಲ್ಲಿ. ತನ್ನ ನಾಲ್ಕು ವರ್ಷದ ಮಗಳು ಬೆಳಗೆದ್ದು ಬ್ರೆಷ್ ಮಾಡ್ಲಿಲ್ಲ ಎಂಬ ಕಾರಣಕ್ಕಾಗಿ ಆ ಪುಟ್ಟ ಮಗುವನ್ನೆ ಕೊಲೈಗೈದಿದ್ದಾಳೆ..! ಜನವರಿ 26ರಂದು ನಡೆದ ಈ ದುರ್ಘಟನೆ ಬೆಳಕಿಗೆ ಬಂದದ್ದು ಮಾತ್ರ ಈಗ. ಹರ್ನಾಂಡೆಜ್ ರಿವಾಸ್ ಎಂಬಾಕೆ ಮಗಳು ಬ್ರೆಷ್ ಮಾಡಲಿಲ್ಲ ಎಂಬ ಕೋಪಕ್ಕೆ ಹೊಟ್ಟೆಯ ಮೇಲೆ ಹಲ್ಲೆ ನಡೆಸಿದ್ದಾಳೆ. ನಂತರ ತನ್ನ ಮಗಳು ಯಾವುದೇ ಪ್ರತಿಕ್ರಿಯೆ ನೀಡ್ತಾ ಇಲ್ಲ ಎಂದರಿತ ಆಕೆ ವೈದ್ಯರಿಗೆ ಕರೆ ಮಾಡಿದ್ದಾಳೆ. ತಕ್ಷಣವೇ ಬಂದ ವೈದ್ಯರು ಮಗುವನ್ನು ಪರೀಕ್ಷೆ ಮಾಡಿದಾಗ ಆಕೆಯ ಹೊಟ್ಟೆಯ ಭಾಗದಲ್ಲಿ ಕೆಂಪು ಕಲೆಯಾಗಿರೋದು ಗೊತ್ತಾಗಿದೆ. ಮಗುವನ್ನು ಆಸ್ಪತ್ರೆಗೆ ಧಾವಿಸಿ ಸಿಟಿ ಸ್ಕ್ಯಾನ್ ಮಾಡಿ ನೋಡಿದಾಗ ಮಗುವಿನ ಲಿವರ್ ಡ್ಯಾಮೇಜ್ ಆಗಿರೋದು ಗೊತ್ತಾಯ್ತು. ಈ ಕುರಿತಾಗಿ ತಾಯಿಯನ್ನು ವಿಚಾರಣೆ ನಡೆಸಿದಾಗ ಮೊದ ಮೊದಲು ಕಥೆ ಕಟ್ಟಲು ಶುರು ಮಾಡಿದ್ಲು. ಆನಂತ್ರ ತಾನು ಮಾಡಿದ ತಪ್ಪನ್ನು ಕೋರ್ಟ್ ಮುಂದೆ ಒಪ್ಪಿಕೊಂಡಿದ್ದಾಳೆ. ಮಗಳು ಬೆಳಿಗ್ಗೆ ಬ್ರೆಷ್ ಮಾಡ್ಲಿಲ್ಲ ಎಂಬ ಕಾರಣಕ್ಕಾಗಿ ಕೆಲ ದಿನಗಳ ಹಿಂದೆ ಬೆಲ್ಟ್ ನಿಂದ ಹೊಡೆದಿದ್ದೆ ಎಂದು ಸತ್ಯ ಬಾಯ್ಬಿಟ್ಟಿದ್ದಾಳೆ.

 

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಸತ್ರೂ ಲವ್ ಮ್ಯಾರೇಜ್ ಆಗಲ್ವಂತೆ ಈ ನಟಿ.

ಶುಭ ಶುಕ್ರವಾರದಂದು ತೆರೆಗೆ ಬರಲಿದೆ ಕುಳ್ಳನ ಚೌಕ

ಬಜೆಟ್-2017: ಯಾವುದು ತುಟ್ಟಿ, ಯಾವುದು ಅಗ್ಗ..?

ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ

ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?

ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

Share post:

Subscribe

spot_imgspot_img

Popular

More like this
Related

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ ಹೈದರಾಬಾದ್:...

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ: ಡಿ.ಕೆ.ಶಿವಕುಮಾರ್

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ:...

‘ಬುರುಡೆ’ ಪ್ರಕರಣ: ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಜಾಮೀನು ಸಿಕ್ಕಿದ್ರು ಬಿಡುಗಡೆ ಭಾಗ್ಯವಿಲ್ಲ

‘ಬುರುಡೆ’ ಪ್ರಕರಣ: ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಜಾಮೀನು ಸಿಕ್ಕಿದ್ರು ಬಿಡುಗಡೆ ಭಾಗ್ಯವಿಲ್ಲ ಶಿವಮೊಗ್ಗ:...

ಫುಲ್‌ ಚಳಿ ಅಲ್ವಾ? ಈ ಚಳಿಗಾಲದಲ್ಲಿ ಈ 3 ಚಹಾ ಸೇವಿಸಿ ಅದ್ಭುತ ಪ್ರಯೋಜನ ಪಡೆಯಿರಿ

ಫುಲ್‌ ಚಳಿ ಅಲ್ವಾ? ಈ ಚಳಿಗಾಲದಲ್ಲಿ ಈ 3 ಚಹಾ ಸೇವಿಸಿ...