ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಅಪರಾಧಿ ಅಬ್ದುಲ್ ಕರೀಂ ಲಾಲಾ ತೆಲಗಿ (57) ಬದುಕಿದ್ದರೆ ಇನ್ನು 12 ದಿನಗಳಲ್ಲಿ ಜೈಲಿನಿಂದ ಹೊರಬರ್ತಿದ್ನಂತೆ..! ತನ್ನ ಮೇಲಿನ ಎಲ್ಲಾ ಪ್ರಕರಣಗಳಿಂದ ಮುಕ್ತನಾಗಿ ಜೈಲಿಂದ ಹೊರ ಬರೋ ಸಾಧ್ಯತೆ ಇತ್ತು ಅಂತ ವಕೀಲ ಸಿ.ಮಲ್ಲೇಶ್ ರಾವ್ ಹೇಳಿದ್ದಾರೆ.
ತೆಲಗಿ ಬೇಗಂ ಬಜಾರ್ ಪ್ರಕರಣದಲ್ಲಿ ತಪ್ಪೊಪ್ಪಿಕೊಳ್ಳಲು ಡಿಸೈಡ್ ಮಾಡಿದ್ನಂತೆ..! ಅನಾರೋಗ್ಯದಿಂದ ಪ್ರಯಾಣ ಮಾಡಕ್ಕಾಗಲ್ಲ ಅಂತ ತೆಲಗಿ ವೀಡಿಯೋ ಕಾನ್ಫರೆನ್ಸ್ಗೆ ಮನವಿ ಮಾಡಿದ್ದನಂತೆ..! ನವೆಂಬರ್ನಲ್ಲಿ ಹೈದರಾಬಾದ್ನ ಸಿಬಿಐ ನ್ಯಾಯಾಲಯದೊಂದಿಗೆ ತೆಲಗಿ ಬೆಂಗಳೂರಿನಲ್ಲಿ ಜೈಲಿಂದಲೇ ವಿಡಿಯೋ ಕಾನ್ಫರೆನ್ಸ್ನಲ್ಲಿ ಪಾಲ್ಗೊಳ್ಳುತ್ತಿದ್ದ, ಅಷ್ಟೇ ಅಲ್ಲದೆ ಬೇರೆ ಪ್ರಕರಣಗಳಿಗೂ ಸಂಬಂಧಪಟ್ಟಂತೆ ತಪ್ಪೊಪ್ಪಿ ಕೊಳ್ತಾ ಇದ್ನಂತೆ..!
ಅಕಸ್ಮಾತ್ ಅಷ್ಟೂ 40 ಪ್ರಕರಣಕ್ಕೂ ಶಿಕ್ಷೆಯಾಗಿದ್ದರೂ 7 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ಇರಲಿಲ್ಲ. ಈತನ ಪ್ರಕರಣಗಳಲ್ಲಿ ಬೇಗಂ ಬಜಾರ್ ಪ್ರಕರಣ ಪ್ರಮುಖವಾದುದು. ಬಳಿಕ ನಾನಾ ಪ್ರಕರಣಗಳು ದಾಖಲಾದವು. ಬೇಗಂ ಬಜಾರ್ ಪೊಲೀಸರು ತೆಲಗಿ ವಿರುದ್ಧ ಐಸಿಸಿ ಸೆಕ್ಷನ್ 259, 260, 262 ಅಡಿ ಪ್ರಕರಣ ದಾಖಲಿಸಿದ್ರು. ನಕಲಿ ಸ್ಟಾಂಪ್ ಪ್ರಕರಣದದಲ್ಲಿ 1999ರಲ್ಲಿ ಬಂಧನಕ್ಕೆ ಒಳಗಾಗಿದ್ದ. ಅಂದಿನಿಂದಲೇ ಜೈಲಿನಲ್ಲಿದ್ದ ಆತನಿಗೆ ನ್ಯಾಯ ಸಿಗಲಿಲ್ಲ ಎಂದು ವಕೀಲ ರಾವ್ ಹೇಳಿದ್ದಾರೆ.