ಇಂದು ದಾಂಪತ್ಯಕ್ಕೆ ಕಾಲಿಡಬೇಕಿದ್ದ ವಧು ಮತ್ತು ವರ ನಾಪತ್ತೆ…!

Date:

ಅವರಿಬ್ಬರಿಗೆ ಮದುವೆ ನಿಶ್ಚಯವಾಗಿತ್ತು. ನಿನ್ನೆ ಸಂಜೆ ಆರತಕ್ಷತೆಗೆ ಎಲ್ಲಾ ಏರ್ಪಾಡುಗಳು ಆಗಿದ್ವು. ಅಷ್ಟರಲ್ಲೇ ಆರತಕ್ಷತೆಗೆ ಕೂರಬೇಕಾದ ವಧು ಕಾಣೆ…! ಮದುವೆ ನಿಲ್ಲಬಾರದೆಂದು ವರನಿಗೆ ಬೇರೆ ಹುಡುಗಿಯನ್ನು ಆ ಕೂಡಲೇ ನಿಶ್ಚಯ ಮಾಡಲಾಗುತ್ತೆ…! ಅವನೂ ಒಪ್ಪಿಕೊಳ್ತಾನೆ. ಇಂದು ಬೆಳಗ್ಗೆಯೇ ಮದುವೆ ಇತ್ತು. ಆದ್ರೆ, ವರ ನಾಪತ್ತೆ…!


ಇದು‌ ಯಾವುದೋ ಸಿನಿಮಾ ಕಥೆಯಲ್ಲ.‌ ಕೋಲಾರದಲ್ಲಿ ನಡೆದ ರಿಯಲ್ ಸ್ಟೋರಿ.


ಜಿಲ್ಲೆಯ ಬಂಗಾರಪೇಟೆ ನೇರ್ನಳ್ಳಿಯ ಎನ್. ಸೌಮ್ಯ ಮಾಲೂರಿನ ಚನ್ನಕಲ್ಲಿನ ನಿವಾಸಿ ಗುರೇಶ್ ಗೆ ಮದುವೆ ನಿಶ್ಚಯವಾಗಿತ್ತು. ನಿನ್ನೆ ಆರತಕ್ಷತೆಗೆ ಎಲ್ಲಾ ತಯಾರಿ ಆದ್ಮೇಲೆ ವಧು ಸೌಮ್ಯ ನಾಪತ್ತೆ ಆಗಿದ್ದಾಳೆ. ಕೂಡಲೇ ಮದುವೆ ಮುರಿದು ಬೀಳಬಾರದೆಂದು ಸೌಮ್ಯಳ‌ ಚಿಕ್ಕಪ್ಪನ ಪುತ್ರಿ ವೆಂಕಟರತ್ನಮ್ಮ ಜೊತೆ ಗುರೇಶ್ ವಿವಾಹ ನಿಶ್ಚಯ ಮಾಡ್ತಾರೆ.


ಇದಕ್ಕೆ ಗುರೇಶ್ ಕೂಡ ಒಪ್ಪಿಗೆ ಸೂಚಿಸಿದ್ದ…ಆದರೆ,‌ಇಂದು ಬೆಳಗ್ಗೆ ನಾಪತ್ತೆಯಾಗಿದ್ದಾನೆ…! ಇದರಿಂದ ಮದುವೆ ಮುರಿದು ಬಿದ್ದಂತಾಗಿದೆ. ಮಾಲೂರು‌‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share post:

Subscribe

spot_imgspot_img

Popular

More like this
Related

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ ಬೆಂಗಳೂರು: ಮುಖ್ಯಮಂತ್ರಿ...

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ ಬೇಡ – ಡಿ.ಕೆ. ಶಿವಕುಮಾರ್

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ...

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...