ನೀರಿನಿಂದಲೇ ನಡೆಯುತ್ತೆ ಈ ಕಂಪ್ಯೂಟರ್..! ವಾಟರ್ ಕಂಪ್ಯೂಟರ್ ಕಂಡುಹಿಡಿದ ಭಾರತೀಯ..!

Date:

ಪದೇ ಪದೇ ಕೈ ಕೊಡುವ ಕರೆಂಟ್ ನಿಂದಾಗಿ ಯಾವುದೇ ಕೆಲಸಗಳೂ ನೆಟ್ಟಗೆ ನಡೆಯುವುದಿಲ್ಲ. ಕೆಲವೊಮ್ಮೆ ಅತಿ ಮುಖ್ಯ ಕೆಲಸದಲ್ಲಿ ತೊಡಗಿದಾಗಲೇ ಹಾಳಾದ್ದು, ಕರೆಂಟು ಕೈ ಕೊಟ್ಟು ಹೋಗುತ್ತೆ. ಆಗ ನಮ್ಮ ವಿಜ್ಞಾನಿಗಳು ಕರೆಂಟಿಲ್ಲದೇ ನಡೆಯುವ ಕಂಪ್ಯೂಟರನ್ನಾದರೂ ಕಂಡುಹಿಡಿಯಬಾರದಾ..? ಅಂದುಕೊಂಡಿದ್ದೂ ಇದೆ. ಆದರೆ ಆ ಮಾತು ಓರ್ವ ಭಾರತೀಯ ವಿಜ್ಞಾನಿ ಕಿವಿಗೆ ಬಿದ್ದಿದೆ. ಆದ್ದರಿಂದ ಆತ ನೀರಿನಿಂದಲೇ ನಡೆಯುವ ಕಂಪ್ಯೂಟರ್ ಕಂಡುಹಿಡಿದಿದ್ದಾನೆ.
ನಮ್ಮ ಎಲೆಕ್ಟ್ರಾನಿಕ್ಸ್ ವಸ್ತುಗಳು ನೀರು ತಾಗಿದರೆ ಸಾಕು ಕೆಟ್ಟು ಹೋಗುತ್ತವೆ. ಆದರೆ ಭಾರತ ಮೂಲದ ಮನು ಪ್ರಕಾಶ್ ಎಂಬುವವರು ಕೇವಲ ನೀರಿನಿಂದಲೇ ನಡೆಯುವ ಕಂಪ್ಯೂಟರ್ ಕಂಡುಹಿಡಿದಿದ್ದಾರೆ. ಈ ಕಂಪ್ಯೂಟರ್ ಕೇವಲ ನೀರಿನ ಹನಿಗಳ ಸಹಾಯದಿಂದ ಚಲಿಸುತ್ತದೆ.
ಐಐಟಿಯಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿರುವಾಗಲೇ ಮನು ಪ್ರಕಾಶ್ ರವರು, ನೀರಿನ ಹನಿಗಳ ಸಹಾಯದಿಂದ ಕಾರ್ಯನಿರ್ವಹಿಸುವ ಕಂಪ್ಯೂಟರ್ ತಯಾರಿಸಬೇಕೆಂಬ ಕನಸನ್ನು ಹೊಂದಿದ್ದರು. ಸುಮಾರು ಒಂದು ದಶಕಕ್ಕೂ ಹೆಚ್ಚುಕಾಲ ಶ್ರಮಿಸಿದ ಬಳಿಕ ಫ್ಲ್ಯುಯಿಡ್ ಡೈನಾಮಿಕ್ಸ್ ಮೂಲಕ ನಿದರ್ಿಷ್ಟ ಸೂಚನೆಯನ್ವಯ ನೀರಿನ ಹನಿಗಳು ಚಲಿಸುವಂತೆ ಮಾಡುವ ಮೂಲಕ ಕಾರ್ಯನಿರ್ವಹಿಸುವ ಕಂಪ್ಯೂಟರ್ ನ್ನು ಕಂಡು ಹಿಡಿದಿದ್ದಾರೆ. ಸಾಮಾನ್ಯ ವಿದ್ಯುನ್ಮಾನ ತಂತ್ರಜ್ಞಾನ ಆಧಾರಿತ ಕಂಪ್ಯೂಟರ್ ಗಳು ಕಾರ್ಯನಿರ್ವಹಿಸುವ ಮಾದರಿಯಲ್ಲೇ ಈ ಕಂಪ್ಯೂಟರ್ ಕೆಲಸ ಮಾಡುತ್ತದೆ. ಆದರೆ ಸಾಮಾನ್ಯ ಕಂಪ್ಯೂಟರ್ ಗಳಿಗೆ ಹೋಲಿಸಿದರೆ ಈ ಕಂಪ್ಯೂಟರ್ ವೇಗ ಕಡಿಮೆಯಿದೆ. ಸದ್ಯ ತಯಾರಾಗಿರುವ ಮಾದರಿಯನ್ನು ಇನ್ನಷ್ಟು ಸುಧಾರಿಸಿ, ವೇಗ ಹೆಚ್ಚಿಸಲು ಮನು ಪ್ರಕಾಶ್ ಮುಂದಾಗಿದ್ದಾರೆ.
ನೀರಿನಲ್ಲೇ ನಡೆಯುವ ಕಂಪ್ಯೂಟರ್ ಮಾರುಕಟ್ಟೆಗೆ ಬಂದರೆ ದೊಡ್ಡ ಕ್ರಾಂತಿಯಾಗುವುದರಲ್ಲಿ ಅನುಮಾನವೇ ಇಲ್ಲ. ಆದ್ದರಿಂದ ನಮ್ಮ ಭಾರತೀಯ ಮನು ಪ್ರಕಾಶ್ ರವರು ಕಂಡುಹಿಡಿದಿರುವ ಈ ಕಂಪ್ಯೂಟರ್ ಮತ್ತಷ್ಟು ಉತ್ತಮ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಬರಲಿ ಎಂಬುದೇ ನಮ್ಮ ಆಶಯ.

Video :

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇಂತಹ ತಾಯಿ ಎಲ್ಲಾದರೂ ಸಿಗುತ್ತಾಳೆಯೇ..?

ಬೆಂಗಳೂರಿನಲ್ಲಿ ಅಲ್ ಖೈದಾ ಶಂಕಿತ ಉಗ್ರನ ಬಂಧನ..! ವಿವಾದಾತ್ಮಕ ಹೇಳಿಕೆ ನೀಡುವುದೇ ಈತನ ಕೆಲಸವಾಗಿತ್ತು..!

6 ಗುಂಡು ತಿಂದರೂ ನೆಲಕ್ಕೆ ಬೀಳದ ಭಾರತದ ಹೀರೋ..! ನಿಜ ಜೀವನದ ಸೂಪರ್ ಸ್ಟಾರ್ ಗೆ ಸೆಲ್ಯೂಟ್ ಹೊಡೆಯಿರಿ..!

ನೋಡ್ರಪ್ಪೋ ನೋಡ್ರೀ ಇದು ದುಡ್ಡಿನ ಮರ..! ಈ ಮರದಲ್ಲಿವೆ ಅಸಂಖ್ಯಾತ ಚಿಲ್ಲರೆ ಹಣ..!

ಕನ್ನಡ ಸಿನಿಮಾಗಳಿಗೇಕೆ ಥಿಯೇಟರ್ ಗಳಸಮಸ್ಯೆ..?! -ಕಿರಿಕ್ ಕೀರ್ತಿ

`ಹಾವು ಕಚ್ಚಿತಲ್ಲೋ ತಮ್ಮಾ ಹೋಗುತೈತೆ ಜೀವಾ..’ Kannada Folk Song

ಗನ್ ಕಲ್ಚರ್ ಎಫೆಕ್ಟ್, ದೊಡ್ಡಣ್ಣನ್ ಕಣ್ಣಲ್ಲಿ ಕಣ್ಣೀರು..!

ಪ್ರೀತಿ ಎಂಥವರನ್ನೂ ಬದಲಾಯಿಸುತ್ತೆ..! ಯಾರಿಂದಲೂ ಬದಲಾಗದ ಹುಡುಗರು ಹುಡುಗಿಯಿಂದ ಬದಲಾಗ್ತಾರೆ..!

ಒಂಟಿಕಾಲಲ್ಲೇ `ಮೌಂಟ್ ಎವರೆಸ್ಟ್’ ಏರಿದ ಸಾಹಸಿ..!

ಒಂದೇ ಇನ್ನಿಂಗ್ಸ್ ನಲ್ಲಿ 1009 ರನ್ ಬಾರಿಸದ ಪೋರ..! ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆಟೋ ಚಾಲಕನ ಮಗ..!

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...