ಕೈ ಮುರಿದರೂ ಕಾರ್ ರೇಸ್ ನಲ್ಲಿ ಭಾಗವಹಿಸುತ್ತಾರೆ ದರ್ಶನ್….!

Date:

ಸಿನಿಮಾಗಳಲ್ಲಿ ಕೈ ಕಾಲಿಗೆ ಬ್ಯಾಂಡೇಜ್​ ಹಾಕಿದ್ರೂ ಫೈಟ್​ ಮಾಡಬಹುದು. ರೇಸ್​ನಲ್ಲಿ ಭಾಗವಹಿಸಬಹುದು. ಯಾಕಂದ್ರೆ ಅದೆಲ್ಲಾ ಡೂಪ್​. ಆದರೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅದನ್ನೇ ರಿಯಲ್​ ಲೈಫ್​ನಲ್ಲಿ ಮಾಡೋಕೆ ಹೊರಟಿದ್ದಾರೆ. ವಿಷಯ ಏನಂದ್ರೆ, ಇತ್ತೀಚೆಗಷ್ಟೇ ಮೈಸೂರಿನಲ್ಲಿ ಸಂಭವಿಸಿದ ಕಾರು ಅಪಘಾತದ ವೇಳೆ ದರ್ಶನ್​ ಅವರ ಬಲಗೈ ಮೂಳೆ ಮುರಿದಿತ್ತು. ಚಿಕಿತ್ಸೆ ಪಡೆದ ದರ್ಶನ್​ ಅವರು ಒಂದು ತಿಂಗಳು ವಿಶ್ರಾಂತಿ ಪಡೆಯಬೇಕಿದೆ. ಹೀಗಿದ್ರೂ ದರ್ಶನ್​ ಕಾರ್​ ರೇಸ್​ ಒಂದರಲ್ಲಿ ಭಾಗವಹಿಸಲು ತಯಾರಿ ನಡೆಸಿದ್ದಾರೆ.
ಮೈಸೂರು ದಸರಾ ಪ್ರಯುಕ್ತ ಇದೇ ಅಕ್ಟೋಬರ್​ 6 ಹಾಗೂ 7ನೇ ತಾರೀಕು ಲಲಿತ್​ ಮಹಲ್​ನ ಹೆಲಿಪ್ಯಾಡ್​ ಮೈದಾನದಲ್ಲಿ ಗ್ರಾವೆಲ್​ ಫೆಸ್ಟ್​ ನಡೆಯಲಿದೆ. ಆ ಗ್ರಾವೆಲ್​ ಫೆಸ್ಟ್​ನಲ್ಲಿ ಕಾರ್​ ರೇಸ್​ ಕೂಡ ನಡೆಯುತ್ತೆ. ಆ ಕಾರ್​ ರೇಸ್​ನಲ್ಲಿ ಪಾಲ್ಗೊಳ್ಳಲು ದರ್ಶನ್​ ಮಂಗಳವಾರ ಲೈಸೆನ್ಸ್​ ಪಡೆದುಕೊಂಡಿದ್ದಾರೆ. ಆ ಮೂಲಕ ಗ್ರಾವೆಲ್​ ಫೆಸ್ಟ್​ ಕಾರ್​ ರೇಸ್​ನಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸಿದ್ದಾರೆ.
ದರ್ಶನ್​ ಅವರ ಬಲಗೈ ಮುರಿದಿದ್ದು ಅವರು ವಿಶ್ರಾಂತಿ ಪಡೆಯಬೇಕಿದೆ. ಹೀಗಿರುವಾಗ ದರ್ಶನ್​ ಹೇಗೆ ರೇಸ್​ನಲ್ಲಿ ಭಾಗವಹಿಸುತ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳನ್ನ ಕಾಡುತ್ತಿದೆ. ಏಕೆಂದರೆ ಸಿನಿಮಾದಲ್ಲಿ ಏನೇ ಮಾಡಿದರೂ ನಡೆದು ಹೋಗುತ್ತೆ. ಅದನ್ನೇ ರಿಯಲ್​ ಲೈಫ್​ನಲ್ಲಿ ಮಾಡೋಕೆ ಹೋದರೆ ಹೆಚ್ಚು ಕಡಿಮೆಯಾಗುವ ಸಾಧ್ಯತೆ ಇದೆ. ಹೀಗಾಗಿಯೇ ದರ್ಶನ್​ ಅವರ ಅಭಿಮಾನಿಗಳು ಆತಂಕದಲ್ಲಿದ್ದಾರೆ. ಆದರೆ ಈ ಕುರಿತು ದರ್ಶನ್​ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...