No menu items!
18.1 C
Munich
Tuesday, May 5, 2026

ದರ್ಶನ್ ‘ಒಡೆಯ’ನಿಗೆ ಒಡತಿಯಾಗಿ ಆಯ್ಕೆಯಾಗಿರುವ ರಾಘವಿ ಯಾರು ಗೊತ್ತಾ..?

Must read

ದರ್ಶನ್ಒಡೆಯನಿಗೆ ಒಡತಿಯಾಗಿ ಆಯ್ಕೆಯಾಗಿರುವ ರಾಘವಿ ಯಾರು ಗೊತ್ತಾ..?

ಚಾಲೆಂಜಿಗ್ ಸ್ಟಾರ್ ಅಭಿನಯದ ಹೊಸ ಸಿನಿಮಾ ಒಡೆಯ.. ಈ ಚಿತ್ರದ ಶೂಟಿಂಗ್ ಇಂದಿನಿಂದ ಆರಂಭವಾಗಿದೆ.. ಎಂ.ಡಿ.ಶ್ರೀಧರ್ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾಗೆ ನಾಯಕಿಯಾಗಿ ಹೊಸ ಚೆಲುವೆಯನ್ನ ಆಯ್ಕೆ ಮಾಡಲಾಗಿದೆ.. ದರ್ಶನ್ ಅವರ ಹೈಟು, ಪರ್ಸನಾಲಿಟಿಗೆ ಸೂಟ್ ಆಗುವ ಒಡತಿಯನ್ನ ಸೆಲೆಕ್ಟ್ ಮಾಡಿದೆ ಚಿತ್ರತಂಡ.. ದರ್ಶನ್ ರಂತ ಸ್ಟಾರ್ ನಟನೊಂದಿಗೆ ಸ್ಕ್ರೀನ್ ಷೇರ್ ಮಾಡಿಕೊಳ್ಳುವ ಆಫರ್ ಪಡೆದಿರುವ ಹುಡುಗಿ ಕೊಡಗಿನ ರಾಘವಿ ತಿಮ್ಮಯ್ಯ..

ಮೂಲತಃ ಮಾಡೆಲ್ ಆಗಿರೋ ರಾಘವಿ ಅವರು ತಮಿಳಿನ ಕೆಲವೊಂದು ಆಲ್ಬಂ ಸಾಂಗ್ ನಲ್ಲಿ ನಟಿಸಿದ್ದಾರೆ..ಇದೇ ಮೊದಲ ಬಾರಿಗೆ ಬಿಗ್ ಸ್ಕ್ರೀನ್ ಪಾದಾರ್ಪಣೆ ಮಾಡುತ್ತಿರುವ ಈಕೆ ದರ್ಶನ್ ರಂತಹ ನಟರ ಜೊತೆಗೆ ಆಫರ್ ಸಿಕ್ಕಿರೋದು ಈಕೆಯ ಲಕ್ ಅಲ್ಲದೆ ಮತ್ತೇನು ಅಲ್ಲ.. ಅಂದಹಾಗೆ ಒಡೆಯ ತಮಿಳಿನ ವೀರಂ ಚಿತ್ರ ರಿಮೇಕ್ ಆಗಿದ್ದು, ಅಜಿತ್ ನಿರ್ವಹಿಸಿದ್ದ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ತಿದ್ದಾರೆ.. ಸಂದೇಶ್ ನಾಗರಾಜ್ ಅವರ ನಿರ್ಮಾಣ ಸಂಸ್ಥೆ ಈ ಚಿತ್ರವನ್ನ ಸಿದ್ದ ಮಾಡ್ತಿದೆ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article