ಪೇಜಾವರ ಶ್ರೀಗಳಿಗೆ ಶುಭ ಕೋರಿದ ರಾಷ್ಟ್ರಪತಿ ರಾಮನಾಥ ಕೋವಿಂದ್..
ಪೇಜಾವರ ವಿಶ್ವೇಶತೀರ್ಥ ಶ್ರೀಗಳ 80ನೇ ವರ್ಧಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಉಡುಪಿಗೆ ಆಗಮಿಸಿದ್ದಾರೆ.. ಈ ಸಂದರ್ಭದಲ್ಲಿ ಶ್ರೀ ವಿಶ್ವೇಶತೀರ್ಥರನ್ನ ಬೇಟಿಯಾಗಿ ಅವರ ಯೋಗಕ್ಷೇಮವನ್ನ ವಿಚಾರಿಸಿದ ರಾಷ್ಟ್ರದ ಪ್ರಥಮ ಪ್ರಜೆ ಶುಭಾಶಯಗಳನ್ನ ಕೋರಿದ್ದಾರೆ..
ಸದ್ಯ ಶ್ರೀಕೃಷ್ಣನ ದರ್ಶನ್ ಪಡೆದು ಸಂತೋಷದಲ್ಲಿದ್ದಾರೆ ರಾಷ್ಟ್ರಪತಿ ಗಳು, ಆದ್ಮಾತ್ಮದ ಬಗ್ಗೆ ಶ್ರೀ ವಿಶ್ವೇಶತೀರ್ಥ ಬಳ ಚರ್ಚೆ ನಡೆಸಿದ್ದಾರೆ.. ನಾನೂ ಭಗವಂತನ ಭಕ್ತನಾಗಿದ್ದೇನೆ .ನನಗೂ ಶ್ರದ್ಧೆ ಇದೆ.ಆದರೆ ರಾಷ್ಟ್ರಪತಿ ಯ ಸ್ಥಾನದಲ್ಲಿ ಕುಳಿತು ನನಗೆ ಕೆಲವು ನಿರ್ಭಂಧಗಳಿರುವುದರಿಂದ ಅವುಗಳಿಗೆ ಒಳಪಟ್ಟು ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಕೋವಿಂದ್ ಹೇಳಿದರು.
ಯಕ್ಷಗಾನಕಿರೀಟ ಧಾರಣೆ ,ಅಟ್ಟೆ ಪ್ರಭಾವಳಿ ಉಡುಗೊರೆ….!!!
ರಾಷ್ಟ್ರಪತಿ ಗಳಿಗೆ ಶ್ರೀಗಳು ಶಾಲು ,ಹಾರ ತೊಡಿಸಿ ಯಕ್ಷಗಾನದ ಕೇದಗೆ ಮುಂಡಾಸು ,ತಲೆಗೆ ತೊಡಿಸಿ( ವಿಶ್ವಪ್ರಸನ್ನತೀರ್ಥರು) ದೇವರ ಸಾಂಪ್ರದಾಯಿಕ ಅಟ್ಟೆ ಪ್ರಭಾವಳಿ ಸ್ವರಚಿತ ಕೃತಿಗಳ ಸಹಿತ ಫಲಪುಷ್ಪ ನೀಡಿಅನುಗ್ರಹಿಸಿದರು.ಅವರ ಪತ್ನಿಯನ್ನೂ ಶ್ರೀಗಳು ಉಡುಗೊರೆ ನೀಡಿ ಹರಸಿದರು. ಕರ್ನಾಟಕ ನಾಗಾ ಲ್ಯಾಂಡ್ ರಾಜ್ಯಪಾಲರುಗಳಿಗೂ ಯಕ್ಷಗಾನದ ಕಿರಟ ತೊಡಿಸಿ ಉಡುಗೊರೆ ನೀನೀಡಿ ಅಭಿನಂದಿಸಿದರು.