ಕಾಂಗ್ರೆಸ್ ಸಚಿವರ ಕಾಲಿಗೆ ಬಿದ್ದ ಬಿಜೆಪಿ ಸಂಸದ..!

Date:

ಕಾಂಗ್ರೆಸ್ ಸಚಿವರ ಕಾಲಿಗೆ ಬಿದ್ದ ಬಿಜೆಪಿ ಸಂಸದ ಎನ್ನುವ ಹೆಡ್​ಲೈನ್ ನೋಡಿದ್ರೆ ಬರೀ ಆಶ್ಚರ್ಯ ಆಗಲ್ಲ.. ಶಾಕ್ ಕೂಡ ನಿಮಗೆ ಆಗಿರುತ್ತದೆ. ಆದರೂ ಇದು ಸುಳ್ಳು ಸುದ್ದಿಯಲ್ಲ… ಸತ್ಯ…
ಮೈಸೂರಿನ ಬಿಜೆಪಿ ಸಂಸದರಾಗಿರುವ ಪ್ರತಾಪ್ ಸಿಂಹ ಅವರು ಟ್ರಬಲ್ ಶೂಟರ್ ಖ್ಯಾತಿಯ ಸಚಿವ ಡಿ.ಕೆ ಶಿವಕುಮಾರ್ ಅವರ ಕಾಲಿಗೆ ಬಿದ್ದಿದ್ದಾರೆ..! ಇಂದು ಮಾಜಿ ಮುಖ್ಯಮಂತ್ರಿ ಎಸ್​.ಎಂ ಕೃಷ್ಣ ಅವರ ಹುಟ್ಟು ಹಬ್ಬ ಇತ್ತು. ಹೀಗಾಗಿ ತಮ್ಮ ಗುರು ಕೃಷ್ಣ ಅವರನ್ನು ಭೇಟಿಯಾಗಿ ವಿಶ್ ಮಾಡಲು ಡಿಕೆಶಿ ಕೃಷ್ಣ ಅವರ ಮನೆಗೆ ಹೋಗಿದ್ದರು. ಈ ಟೈಮ್​ನಲ್ಲೇ ಸಂಸದ ಪ್ರತಾಪ್ ಸಿಂಹ ಅವರು ಕೂಡ ಅಲ್ಲಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಶಿವಕುಮಾರ್ ಮತ್ತು ಪ್ರತಾಪ್ ಸಿಂಹ ಮುಖಾಮುಖಿ ಆಗಿದ್ದಾರೆ. ಆಗ ಪ್ರತಾಪ್ ಸಿಂಹ ಹಿರಿಯರಾದ ಡಿ.ಕೆ ಶಿವಕುಮಾರ ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರೂ ಕೂಡ ಪ್ರೀತಿಯಿಂದ, ನಗುಮೊಗದಿಂದ ಪ್ರತಾಪ್ ಸಿಂಹ ಅವರಿಗೆ ಆಶೀರ್ವಾದ ಮಾಡಿದ್ದಾರೆ.
ಪಕ್ಷ ಸಿದ್ಧಾಂತಗಳು ಏನೇ ಇರಲಿ.. ವೈಯಕ್ತಿಕ ಪ್ರೀತಿ, ಗೌರವ ಸಂಬಂಧಗಳು, ಸಂಪ್ರದಾಯ, ಸಂಸ್ಕೃತಿ ದೊಡ್ಡದು ಎನ್ನುವುದನ್ನು ಈ ಘಟನೆ ಸಾರುತ್ತದೆ ಅಲ್ಲವೇ? ಪ್ರತಾಪ್ ಸಿಂಹ ಮತ್ತು ಡಿಕೆಶಿ ಪಕ್ಷ, ರಾಜಕೀಯ ಎಂದು ಬಂದರೆ ಬದ್ಧ ವೈರಿಗಳು. ಆದರೆ, ಇಂಥಾ ಸನ್ನಿವೇಶ ರಾಜಕೀಯ ಮೀರಿದ ಬಂಧವನ್ನು ತೋರಿಸುತ್ತದೆ.

Share post:

Subscribe

spot_imgspot_img

Popular

More like this
Related

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ಹೆಚ್.ಡಿ. ದೇವೇಗೌಡರ ಮನವಿ

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ಹೆಚ್.ಡಿ....

ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ, ಎಲ್ಲ ಸೇರಿರೋದ್ರಲ್ಲಿ ತಪ್ಪೇನಿದೆ: ಡಿ.ಕೆ. ಶಿವಕುಮಾರ್ ಮರುಪ್ರಶ್ನೆ

ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ, ಎಲ್ಲ ಸೇರಿರೋದ್ರಲ್ಲಿ ತಪ್ಪೇನಿದೆ: ಡಿ.ಕೆ....

ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ನಮಸ್ಕಾರ ಮಾಡಬೇಕೇ? ಇಲ್ಲಿದೆ ಉತ್ತರ

ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ನಮಸ್ಕಾರ ಮಾಡಬೇಕೇ? ಇಲ್ಲಿದೆ ಉತ್ತರ ಪ್ರತಿದಿನ ಬೆಳಗ್ಗೆ ಸೂರ್ಯೋದಯದ...

ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ: ಡಾ.ಜಿ.ಪರಮೇಶ್ವರ

ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ: ಡಾ.ಜಿ.ಪರಮೇಶ್ವರ ಬೆಳಗಾವಿ: ರಾಜ್ಯದ ವಿವಿಧ ಅಗ್ನಿಶಾಮಕ...