ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಲ್ಪಟ್ಟ ಅಪರಾಧಿಗಳಾದ ವಿನಯ್ ಶರ್ಮ, ಮುಕೇಶ್ ಕುಮಾರ್, ಅಕ್ಷಯ್ ಕುಮಾರ್ ಸಿಂಗ್ ಹಾಗು ಪವನ್ ಗುಪ್ತಾ ಅವರನ್ನು ಗಲ್ಲಿಗೇರಿಸಲಾಗುವುದು ಎಂದು ಕಳೆದ ವಾರ ದಿಲ್ಲಿ ಕೋರ್ಟ್ ಹೇಳಿತ್ತು. ಆದರೆ ನಾಲ್ವರಲ್ಲಿ ಒಬ್ಬನಾದ ಮುಕೇಶ್ ಸಿಂಗ್ ಗುರುವಾರ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ.ಅದು ತಿರಸ್ಕೃತಗೊಂಡರೂ ಅಪರಾಧಿಯೊಬ್ಬನಿಗೆ ಮರಣದಂಡನೆ ಶಿಕ್ಷೆ ವಿಧಿಸುವುದಕ್ಕಿಂತ ಮುಂಚೆ 14 ದಿನಗಳ ನೋಟಿಸ್ ನೀಡಬೇಕಿದೆ ಎಂದು ಹೇಳಲಾಗುತ್ತಿದ್ದು ಹಾಗಾಗಿ ಒಬ್ಬ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿರುವುದರಿಂದ ಜ. 22ರಂದು ಅವರ ಗಲ್ಲು ಶಿಕ್ಷೆ ಖಂಡಿತ ನೆರವೇರುವುದಿಲ್ಲ ಎಂದು ದೆಹಲಿ ಸರಕಾರ ಹೈಕೋರ್ಟಿಗೆ ಇಂದು ಹೇಳಿದೆ .
ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೆ ಏರಿಸುತ್ತಿಲ್ಲ ! ಏಕೆ ?
Date: