ಬೆಂಗಳೂರು : ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ಪತನಕ್ಕೆ, ಬಿಜೆಪಿ ಸರ್ಕಾರದ ರಚನೆಗೆ ನಾಂದಿ ಹಾಡಿದ್ದವರು ಸಚಿವರಾಗಿದ್ದಾರೆ. ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾಗಿ, ಅನರ್ಹತೆ ಶಿಕ್ಷೆಯನ್ನು ಅನುಭವಿಸಿ, ಪುನಃ ಬಿಜೆಪಿಯಿಂದ ಜನಾದೇಶ ಪಡೆದ 10 ಮಂದಿಗೆ ಸಚಿವ ಸ್ಥಾನ ಸಿಕ್ಕಿದೆ.
ರಮೇಶ್ ಜಾರಕಿಹೊಳಿ, ಎಸ್.ಟಿ ಸೋಮಶೇಖರ್, ಡಾ.ಕೆ ಸುಧಾಕರ್, ಭೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್, ಆನಂದ್ ಸಿಂಗ್, ಬಿ.ಸಿ ಪಾಟೀಲ್, ಗೋಪಾಲಯ್ಯ, ಶ್ರೀಮಂತ ಪಾಟೀಲ್ ,ನಾರಾಯಣ ಗೌಡ ಇಂದು ಯಡಿಯೂರಪ್ಪ ಸಂಪುಟ ಸೇರಿದರು. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಈ ನೂತನ ಮಂತ್ರಿಗಳಿಗೆ ರಾಜ್ಯಪಾಲ ವಜುಭಾಯ್ ವಾಲಾ ಪ್ರಮಾಣವಚನ ಬೋಧನೆ ಮಾಡಿದರು.
ಇವರೇ ನೋಡಿ ಸಿಎಂ ಯಡಿಯೂರಪ್ಪ ಸಂಪುಟ ಸೇರಿದ ನೂತನ ಸಚಿವರು..!
Date: