ಮತ್ತೆ ಕ್ರಿಕೆಟ್ ಆಡುವ ಯುವರಾಜ್ ಸಿಂಗ್ ಕನಸಿಗೆ ತಣ್ಣೀರೆರಚಿದ ಬಿಸಿಸಿಐ!

Date:

ಕ್ರಿಕೆಟ್ ಗೆ ಯುವರಾಜ ಸಿಂಗ ನಿವೃತ್ತಿ ಘೋಷಿಸಿದ ನಂತರ ಇತ್ತೀಚಿನ ಕೆಲ ದಿನಗಳಿಂದ ಯುವರಾಜ್ ಸಿಂಗ್ ಮತ್ತೆ ಟಿಕೆಟ್ ಆಡಲಿದ್ದಾರೆ ಎಂಬ ಕನಸನ್ನು ಅಭಿಮಾನಿಗಳು ಹೊತ್ತುಕೊಂಡಿದ್ದರು. ಇದಕ್ಕೆ ಕಾರಣ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ತೆಗೆದುಕೊಂಡಿದ್ದ ಒಂದು ನಿರ್ಧಾರ. ಹೌದು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಮತ್ತೆ ಯುವರಾಜ ಸಿಂಗ್ ಅವರನ್ನು ಮುಂಬರುವ ಸೈಯದ್ ಮುಷ್ತಾಕ್ ಅಲಿ ಟಿ 20 ಲೀಗ್ ನಲ್ಲಿ ಆಡಿಸುವ ಯೋಚನೆಯಲ್ಲಿತ್ತು.

 

ಇನ್ನು ಇದೇ ನಿಟ್ಟಿನಲ್ಲಿ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಬಿಸಿಸಿಐಗೆ ಪತ್ರವನ್ನು ಸಹ ಬರೆದಿತ್ತು. ಈ ಪತ್ರವನ್ನು ಇದೀಗ ಬಿಸಿಸಿಐ ತಿರಸ್ಕರಿಸಿದೆ. ಹೌದು ಯುವರಾಜ್ ಸಿಂಗ್ ಅವರಿಗೆ  ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಆಡಲು ಬಿಸಿಸಿಐ ಅವಕಾಶವನ್ನು ನೀಡುತ್ತಿಲ್ಲ.

 

ಬಿಸಿಸಿಐ ನಿಯಮದ ಪ್ರಕಾರ ಒಬ್ಬ ಭಾರತೀಯ ಆಟಗಾರರ ನಿವೃತ್ತಿಯನ್ನು ಘೋಷಿಸಿದ ನಂತರ ಯಾವುದೇ ರೀತಿಯ ವಿದೇಶಿ ಲೀಗ್ ಗಳಲ್ಲಿ ಆಡಿರಬರದು.. ಹೀಗಿದ್ದಾಗ ಮಾತ್ರ ಮತ್ತೆ ಆತ ತನ್ನ ನಿವೃತ್ತಿಯನ್ನು ವಾಪಸ್ ಪಡೆದುಕೊಂಡು ದೇಸಿ ಕ್ರಿಕೆಟ್ ಗಳಲ್ಲಿ ಆಡಬಹುದು. ಒಂದು ವೇಳೆ ಆತ ವಿದೇಶಿ ಲೀಗ್ ಗಳಲ್ಲಿ ಆಡಿದ್ದರೆ ಆತ ಮತ್ತೆ ತನ್ನ ನಿವೃತ್ತಿಯನ್ನು ವಾಪಸ್ಸು ಪಡೆಯಲು ಅನರ್ಹ ನಾಗಿರುತ್ತಾನೆ. ಯುವರಾಜ್ ಸಿಂಗ್ ಅವರು ನಿವೃತ್ತಿಯ ನಂತರ ವಿದೇಶಿ ಲೀಗ್ ಗಳಲ್ಲಿ ಆಡಿರುವುದರಿಂದ ಅವರು ತಮ್ಮ ನಿವೃತ್ತಿಯನ್ನು ವಾಪಸ್ ಪಡೆದುಕೊಂಡು ದೇಸಿ ಕ್ರಿಕೆಟ್ ಆಡಲು ಅನರ್ಹರಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...