ಕ್ಷಮೆ ಕೇಳಿದ ಅಮಿತಾಭ್ ಬಚ್ಚನ್ ; ಮಾಡಿದ ತಪ್ಪೇನು?

Date:

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಅದರಲ್ಲೂ 2020ರಲ್ಲಿ ಅವರು ಸಾಕಷ್ಟು ಟ್ವೀಟ್ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ನಂತರದಲ್ಲಿ ಟ್ವಿಟ್ಟರ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ವ್ಯಕ್ತಿ ಬಿಗ್ ಬಿಗೆ 44.9 ಮಿಲಿಯನ್ ಟ್ವಿಟ್ಟರ್ ಫಾಲೋವರ್ಸ್ ಇದ್ದಾರೆ. ಈಗ ಟ್ವಿಟ್ಟರ್ ಮೂಲಕ ಅಭಿಮಾನಿಯೊಬ್ಬರಿಗೆ ಕ್ಷಮೆ ಕೇಳಿದ್ದಾರೆ.
ಇತ್ತೀಚೆಗಷ್ಟೇ ಅಮಿತಾಭ್ ಬಚ್ಚನ್ ಅವರು ಕವನವೊಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಇದನ್ನು ಬರೆದಿದ್ದವರು ‘ಸರ್, ನಿಮ್ಮ ಟ್ವಿಟ್ಟರ್ ಖಾತೆಯನ್ನು ನನ್ನ ಕವನ ನೋಡಲು ನಾನು ಪುಣ್ಯ ಮಾಡಿದ್ದೇನೆ. ಅದರ ಜೊತೆಗೆ ನನ್ನ ಹೆಸರು ಅಲ್ಲಿದ್ದರೆ ನನ್ನ ಖುಷಿ, ಹೆಮ್ಮೆ ದುಪ್ಪಟ್ಟಾಗಿರುತ್ತಿತ್ತು’ ಎಂದು ಹೇಳಿದ್ದಾರೆ. ಈ ಪ್ರತಿಕ್ರಿಯೆ ನೋಡಿ ಅಮಿತಾಭ್ ಹೊಸದೊಂದು ಟ್ವೀಟ್ ಮಾಡಿದ್ದಾರೆ.
‘ಈ ಕವನದ ಟ್ವೀಟ್‌ ತಿಶಾ ಅಗರ್‌ವಾಲ್ ಅವರಿಗೆ ಸೇರುವುದು. ಈ ಕವನ ಯಾರು ಬರೆದಿದ್ದಾರೆ ಎಂದು ಗೊತ್ತಿರಲಿಲ್ಲ, ಹೀಗಾಗಿ ಪೋಸ್ಟ್ ಮಾಡಿದೆ. ಯಾರೋ ನನಗೆ ಕಳಿಸಿದ ಕವನ ಇಷ್ಟವಾದ್ದರಿಂದ ಪೋಸ್ಟ್ ಮಾಡಿದೆ, ಕ್ಷಮೆಯಿರಲಿ’ ಎಂದು ಅಮಿತಾಭ್ ಹೇಳಿದ್ದಾರೆ. ಅಮಿತಾಭ್ ಈ ಟ್ವೀಟ್‌ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿರ್ದೇಶಕ ವಿಕಾಸ್‌ ಬಹ್ಲ್‌ ಅವರ ಹೊಸ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಅಮಿತಾಭ್‌ ಬಚ್ಚನ್ ನಟಿಸುತ್ತಿದ್ದಾರೆ. ತಂದೆ-ಮಗಳ ಪಾತ್ರದಲ್ಲಿ ಇವರಿಬ್ಬರು ಕಾಣಿಸಿಕೊಳ್ಳಲಿದ್ದಾರೆ. 78 ವರ್ಷ ವಯಸ್ಸಿನ ಅಮಿತಾಭ್ ಕೈತುಂಬ ಸಿನಿಮಾಗಳಿವೆ. ಬಿಗ್‌ ಬಿ ಸೇರಿದಂತೆ ಅವರ ಕುಟುಂಬಸ್ಥರೆಲ್ಲರಿಗೂ ಕೊರೊನಾ ತಗುಲಿತ್ತು, ಈಗ ಅವರೆಲ್ಲರೂ ಗುಣಮುಖರಾಗಿದ್ದಾರೆ. ‘ಬ್ರಹ್ಮಾಸ್ತ್ರ’, ‘ಚೆಹರೆ’, ‘ಜುಂಡ್’, ‘ಬಟರ್‌ಫ್ಲೈ’ ಮುಂತಾದ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದು, ಅವೆಲ್ಲವೂ ರಿಲೀಸ್ ಆಗಬೇಕಿವೆ. ಇನ್ನು ‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ ನಿರೂಪಣೆ ಮಾಡುತ್ತಿದ್ದಾರೆ.

ಕಮ್ ಬ್ಯಾಕ್ ಆಗುವ ಉತ್ಸಾಹದಲ್ಲಿದ್ದ ಯುವಿಗೆ ಶಾಕ್..!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಯುವರಾಜ್‌ ಸಿಂಗ್ ಮತ್ತೆ ದೇಸಿ ಕ್ರಿಕೆಟ್‌ಗೆ ಮರಳುವ ಆಸೆ ವ್ಯಕ್ತಪಡಿಸಿದ್ದರು. ಮುಖ್ಯವಾಗಿ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ (ಪಿಸಿಎ) ಸಿಕ್ಸರ್ ಕಿಂಗ್ ಯುವಿ ಅವರನ್ನು ದೇಸಿ ಕ್ರಿಕೆಟ್‌ಗೆ ಕರೆತರುವ ಪ್ರಯತ್ನ ನಡೆಸಿತ್ತು. ಪಂಜಾಬ್ ಕೋರಿಕೆಗೆ ಯುವಿ ಕೂಡ ಒಪ್ಪಿಗೆ ಸೂಚಿಸಿದ್ದರು. ಆದರೆ ಯುವಿ ಆಸೆಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ತಣ್ಣೀರೆರಚಿದೆ.
ಜೂನ್ 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಕೆಚ್ಚೆದೆಯ ಮಹಾರಾಜ ಯುವಿ ಅವರನ್ನು ದೇಸಿ ಕ್ರಿಕೆಟ್‌ನಲ್ಲಿ ಅಂದರೆ ಮುಂಬರಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯಲ್ಲಿ ಪಂಜಾಬ್ ಪರ ಆಡಿಸಲು ಪಿಸಿಎ ಯೋಚಿಸಿತ್ತು. ಈ ಬಗ್ಗೆ ಬಿಸಿಸಿಐಗೆ ಪತ್ರವೂ ಬರೆಯಲಾಗಿತ್ತು. ಆದರೆ ಯುವಿ ಮತ್ತು ಪಿಸಿಎ ಕೋರಿಕೆಯನ್ನು ಬಿಸಿಸಿಐ ನಿರಾಕರಿಸಿದೆ.
ದೇಸಿ ಕ್ರಿಕೆಟ್‌ಗೆ ಮರಳುವ ಯುವಿ ಕೋರಿಕೆಗೆ ಬಿಸಿಸಿಐ ನಿರಾಕರಿಸಲು ಕಾರಣವಿದೆ. ಬಿಸಿಸಿಐನಲ್ಲಿರುವ ಕಟ್ಟುನಿಟ್ಟಿನ ನಿಯಮದಿಂದಾಗಿ ಯುವಿ ಮತ್ತೆ ದೇಸಿ ಕ್ರಿಕೆಟ್‌ನಲ್ಲಿ ಆಡಲಾಗುತ್ತಿಲ್ಲ.
ದೇಸಿ ಕ್ರಿಕೆಟ್‌ಗೆ ಯುವಿಯನ್ನು ಕರೆತರುವ ಬಗ್ಗೆ ಪಂಜಾಬ್ ತೋರಿದ್ದ ಹುಮ್ಮಸ್ಸು, ಯುವಿ ನೀಡಿದ್ದ ಗ್ರೀನ್‌ ಸಿಗ್ನಲ್‌ ಕಂಡು ಯುವಿ ಮತ್ತೆ ದೇಸಿ ಕ್ರಿಕೆಟ್‌ನಲ್ಲಿ ಆಡುತ್ತಾರೆ ಎಂದು ಕ್ರಿಕೆಟ್ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಇದಕ್ಕೆ ಹಿನ್ನಡೆಯಾಗಿದೆ. ಕಾರಣ; ಬಿಸಿಸಿಐ ನಿಯಮದ ಪ್ರಕಾರ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ ಭಾರತೀಯ ಆಟಗಾರ ಒಂದು ವೇಳೆ ನಿವೃತ್ತಿ ವಾಪಸ್ ಪಡೆಯುವುದಾದರೆ ಆತ ಯಾವುದೇ ವಿದೇಶಿ ಲೀಗ್‌ಗಳಲ್ಲಿ ಆಡಿರಬಾರದು. ಆಗ ಮಾತ್ರ ಆತ ದೇಸಿ ಕ್ರಿಕೆಟ್ ಅಥವಾ ಐಪಿಎಲ್‌ನಲ್ಲಿ ಆಡಲು ಅರ್ಹನಾಗಿರುತ್ತಾನೆ. ಆದರೆ ಯುವಿ ಈಗಾಗಲೇ ವಿದೇಶಿ ಲೀಗ್‌ಗಳಲ್ಲಿ ಆಡಿದ್ದಾರೆ. ಹೀಗಾಗಿ ಯುವಿಗೋಸ್ಕರ ನಿಯಮ ಬದಲಾಯಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಹೇಳಿದೆ.
ಭಾರತೀಯ ಕ್ರಿಕೆಟರ್ ಒಬ್ಬ ಅಂತಾರಾಷ್ಟ್ರೀಯ ನಿವೃತ್ತಿ ವಾಪಸ್ ಪಡೆದು ದೇಸಿ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಆಡಿದ ಉದಾಹರಣೆಯಿಲ್ಲವೆ? ಇದೆ. ಅಂಬಾಟಿ ರಾಯುಡು 2019ರ ವಿಶ್ವಕಪ್‌ ವೇಳೆ ನಿವೃತ್ತಿ ಘೋಷಿಸಿದ್ದರು. ಮತ್ತೆ ನಿವೃತ್ತಿ ವಾಪಸ್ ಪಡೆದು ದೇಸಿ ಕ್ರಿಕೆಟ್ ಮತ್ತು ಕಳೆದ ಐಪಿಎಲ್‌ನಲ್ಲೂ ಸಿಎಸ್‌ಕೆ ಪರ ಆಡಿದ್ದರು. ಆದರೆ ರಾಯುಡು ಯಾವುದೇ ವಿದೇಶಿ ಲೀಗ್‌ಗಳಲ್ಲ ಆಡಿಲ್ಲವಾದ್ದರಿಂದ ಅವರು ನಿವೃತ್ತಿ ವಾಪಸ್ ಪಡೆಯುವುದಾಗಿ ಬಿಸಿಸಿಐ ಅನುಮತಿಗೂ ಕಾಯುವ ಅಗತ್ಯ ಇರಲಿಲ್ಲ. ಯಾಕೆಂದರೆ ವಿದೇಶಿ ಲೀಗ್‌ಗಳಲ್ಲಿ ಆಡದ ಹೊರತು ಭಾರತೀಯ ಆಟಗಾರ ತಾನು ಬಯಸಿದರೆ ನಿವೃತ್ತಿ ವಾಪಸ್ ಪಡೆದು ದೇಸಿ ಕ್ರಿಕೆಟ್‌ನಲ್ಲಿ ಆಡಬಹುದು.
ಹಿಂದೆ ಭಾರತದ ಅನುಭವಿ ಬೌಲರ್ ಪ್ರವೀಣ್ ತಾಂಬೆಗೂ ಬಿಸಿಸಿಐ ನಿಯಮ ಅಡ್ಡಿ ಮಾಡಿತ್ತು. ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದ ಪ್ರವೀಣ್ ತಾಂಬೆ ಆ ಬಳಿಕ ನಿವೃತ್ತಿ ವಾಪಸ್ ಪಡೆದಿದ್ದರು. ಆದರೆ ಕಳೆದ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ತಾಂಬೆ ಇದ್ದರಾದರೂ ಅವರಿಗೆ ಐಪಿಎಲ್‌ನಲ್ಲಿ ಆಡಲು ಅನುಮತಿ ಲಭಿಸಲಿಲ್ಲ. ಅವರನ್ನು ಕೆಕೆಆರ್‌ನಿಂದ ಹೊರಗಿಡಲಾಯಿತು. ಯಾಕೆಂದರೆ ತಾಂಬೆ ಅದಾಗಲೇ ದುಬೈ ಟಿ10 ಲೀಗ್‌ನಲ್ಲಿ ಆಡಿಯಾಗಿತ್ತು. ಯುವಿ ಕೂಡ ಈಗಾಗಲೇ ದುಬೈ ಟಿ10 ಲೀಗ್‌ ಮತ್ತು ಗ್ಲೋಬಲ್ ಟಿ20 ಕೆನಡಾ ಲೀಗ್‌ಗಳಲ್ಲಿ ಆಡಿರುವುದರಿಂದ ಅವರಿಗೆ ಮತ್ತೆ ದೇಸಿ ಕ್ರಿಕೆಟ್‌ನಲ್ಲಿ ಆಡಲಾಗುತ್ತಿಲ್ಲ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...