No menu items!
11.7 C
Munich
Friday, May 1, 2026

ವಿರಾಟ್ ಕೊಹ್ಲಿ ವೆಡ್ಸ್ ಅನುಷ್ಕಾಶರ್ಮಾ…!

Must read

ಮೋಸ್ಟ್ ಬ್ಯೂಟಿಫುಲ್ ಕಪಲ್ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾಶರ್ಮಾ ಇವ್ರಿಬ್ಬರು ರಿಲೇಷನ್ ಶಿಪ್ ನಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದ್ಯಂತೆ, ಅಯ್ಯೋ ಇಲ್ಲ ಇಲ್ಲ ಇವ್ರಿಬ್ಬರು ಮತ್ತೆ ಒಂದಾಗಿದ್ದಾರಂತೆ, ಅರೆ ಇವ್ರಿಬ್ಬರ ರಿಲೇಶನ್ ಶಿಪ್ ನಲ್ಲಿ ಬ್ರೇಕ್ ಅಪ್ ಆಗೋಯ್ತಂತೆ,  ಅಯ್ಯಯ್ಯೋ ಇವ್ರು ಮತ್ತೆ ಪ್ಯಾಚ್ ಅಪ್ ಆದ್ರಂತೆ. ಇಂಥ ಅಂತೆ ಕಂತೆಗಳ ಕನ್ಫ್ಯೂಶನ್ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾಶರ್ಮಾ ವಿಚಾರದಲ್ಲಿ ಇದ್ದೇ ಇತ್ತು.

ಆದ್ರೆ ಇನ್ನು ಮುಂದೆ ಇದಕ್ಕೆಲ್ಲ ಬ್ರೇಕ್ ಬೀಳಲಿದೆ. ಯಾಕೆಂದ್ರೆ ಲವ್ ಬರ್ಡ್ಸ್ ಅಂತಾ ಕರೆಯಲ್ಪಡುತ್ತಿದ್ದ ವಿರಾಟ್ ಹಾಗೂ ಅನುಷ್ಕಾ ಶರ್ಮಾ ಸದ್ಯದಲ್ಲೇ ಮಿಸ್ಟರ್ ಅಂಡ್ ಮಿಸಸ್ಸ್ ಕೊಹ್ಲಿ ಆಗಲಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ನಡುವಿನ ಪ್ರೇಮ ಪುರಾಣಕ್ಕೆ ಇತೀಶ್ರೀ ಸದ್ಯದಲ್ಲೇ ಬೀಳಲಿದೆ.ಯಾಕೆಂದ್ರೆ ಈ ಜೋಡಿ ವಿವಾಹ ಬಂಧನದಲ್ಲಿ ಬಂಧಿಯಾಗಲಿದ್ದಾರೆ. ಜಗತ್ತಿನಲ್ಲೆಡೆ ಸುತ್ತಾಡಿದ್ದ ಈ ಪ್ರಣಯ ಪಕ್ಷಿಗಳು ಇನ್ನು ಮುಂದೆ ಸತಿಪತಿಗಳಾಗಲಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಸಪ್ತಪದಿ ತುಳಿಯೋ ನಿರ್ಧಾರ ಮಾಡಿದ್ದಾರೆ. ಆದ್ರೆ ಯಾವಾಗ ಅನ್ನೋ ದಿನಾಂಕವನ್ನ ಇನ್ನು ಪ್ರಕಟ ಮಾಡಿಲ್ಲ. ಯಾಕೆಂದ್ರೆ ಅನುಷ್ಕಾ ಶರ್ಮಾ ಸದ್ಯ ಸುಲ್ತಾನ್ ಮೂವಿ ಬಿಡುಗಡೆಯ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಸಜ್ಜಾಗುತ್ತಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾಶರ್ಮಾ ಮನೆಯವರೂ ಪರಸ್ಪರ ಮಾತಾಡಿ ಒಪ್ಪಿಗೆ ಸೂಚಿಸಿದ್ದಾರೆ ಅನ್ನೋದು ಮೂಲಗಳ ಮಾಹಿತಿ. ಮುಂಬೈನ ಏರ್ ಪೋರ್ಟ್ ನಲ್ಲಿ ವಿರಾಟ್ ಹಾಗೂ ಅನುಷ್ಕಾ ಶರ್ಮಾ ಇತ್ತೀಚೆಗೆ ಭೇಟಿಯಾಗಿದ್ದು, ಕಾರ್ ನಲ್ಲಿ ಕುಳಿತು ಕಿಸ್ ಮಾಡಿರೋ ಫೋಟೋಗಳು ಎಲ್ಲೆಡೆ ಹರಿದಾಡಿದ್ದು, ಈ ಎಲ್ಲಾ ವಿಚಾರಗಳು ಇವ್ರಿಬ್ಬರು ಸದ್ಯದಲ್ಲೇ ಮದುವೆ ಆಗ್ತಿದ್ದಾರೆ ಅನ್ನೋ ಸುದ್ದಿಗೆ ಪುಷ್ಠಿ ನೀಡಿವೆ.

ಕ್ರಿಕೆಟ್ ಹಾಗೂ ಬಾಲಿವುಡ್ ಸ್ಟಾರ್ ಗಳ ನಡುವೆ ಲವ್  ,ಬ್ರೇಕ್ ಅಪ್ ಅನ್ನೋದು ಕಾಮನ್ ಆಗ್ಬಿಟ್ಟಿದೆ. ಸದ್ಯ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಸಪ್ತಪದಿ ತುಳಿಯಲು ಸಿದ್ದರಾಗಿರೋದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ.

  • ಶ್ರೀ

POPULAR  STORIES :

181 ಸದಸ್ಯರಿರುವ ವಿಶ್ವದ ದೊಡ್ಡಕುಟುಂಬ! ಈ ಕುಟುಂಬದ ಎಲ್ಲಾ ಸದಸ್ಯರಿಗೂ ಒಂದೇ ನಿವಾಸ!

ಒಂದೇ ಬಾಲಿಗೆ 286 ರನ್ ಬಾರಿಸಿದ ಕಥೆ..!

ಪೆಟ್ರೋಲ್ ಬಂಕ್‍ನಲ್ಲಿ ಯಾವೆಲ್ಲಾ ಸೇವೆ, ಸೌಲಭ್ಯ ಉಚಿತವಾಗಿರಬೇಕು ಗೊತ್ತಾ?

ಫೇಸ್‍ಬುಕ್‍ನಲ್ಲಿ ಫೋಟೋ ಹಾಕಿದ ಗೆಳಯನ ಕೊಲೆ! ಮಡಿಕೇರಿಯಿಂದ ಬಂದ ಗೆಳತಿ ಮಂಚಕ್ಕೆ ಬರಲಿಲ್ಲ, ಅದಕ್ಕೇ ಫೇಸ್‍ಬುಕ್‍ನಲ್ಲಿ ಫೋಟೋ ಹಾಕಿದ!

ರಾಜೀನಾಮೆ ನಂತರ ಮೊದಲಬಾರಿಗೆ ಮೀಡಿಯಾ ಮುಂದೆ ಅನುಪಮಾ ಏನ್ ಹೇಳಿದ್ರು ಗೊತ್ತಾ?!

ಹೇರ್ ಟ್ರಾನ್ಸ್‍ಪ್ಲಾಂಟ್ ಮಾಡಿಸ್ಕೋತೀರಾ..!? ಸಾವು ಗ್ಯಾರಂಟಿ..!! ಹುಷಾರ್..!!?

ದೆಹಲಿಗೆ ಬಾಂಬಿಡ್ತಾನಂತೆ ದಾವೂದ್..! ನರರಾಕ್ಷಸನನ್ನು ಹಿಡಿಯೋ ತಾಕತ್ತಿಲ್ಲವೇ..!?

`ಭಾರತದಿಂದ ಮುಸ್ಲೀಮರನ್ನು ಓಡಿಸಬೇಕು..!?’ ಸಾದ್ವಿ ಪ್ರಾಚಿಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ #Video

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article