ನಾಯಿ ಮರಿಗಳು ಹಸುಗೂಸನ್ನೆ ತಿಂದು ಹಾಕಿರುವ ಅಮಾನವೀಯ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೇವಿನಾಳ ಗ್ರಾಮದಲ್ಲಿ ನಡಿದಿದೆ. ಹೌದು ನಾಯಿ ಮರಿಗಳು ಹಸುಗೂಸನ್ನೆ ತಿಂದು ಹಾಕಿದೆ. ಅನೈತಿಕ ಸಂಬಂಧದಿಂದ ಜನಿಸಿದ ಮಗು ಅಂತ ಹೇಳಲಾಗುತ್ತಿದ್ದು, ತಮ್ಮ ಅನೈತಿಕ ಸಂಬಂಧ ಮುಚ್ಚಿಡುವ ಸಲುವಾಗಿ ಮಗುವನ್ನು ಎಸೆದು ಹೋದ ಕಟುಕರು. ಹೀಗಾಗಿ ಆಗ ತಾನೆ ಜನಿಸಿದ ಮಗುವನ್ನು ಅರ್ಧಂಬರ್ಧ ತಿಂದು ಹಾಕಿ ನಾಯಿ ಮರಿಗಳು ಬಿಸಾಡಿವೆ. ಕೂಸಿನ ವಾರಿಸುದಾರರನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದು, ಈ ಘಟನೆ ಸಂಭಂದ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.



