ಆರ್.ಆರ್.ನಗರ ಪೊಲೀಸರಿಂದ ಕುಖ್ಯಾತ ಸರಗಳ್ಳನ ಬಂಧನ!
ಬೆಂಗಳೂರು: ಕುಖ್ಯಾತ ಸರಗಳ್ಳನನ್ನು ಆರ್.ಆರ್.ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸುರೇಶ್ @ಸೂರ್ಯ (28) ಬಂಧಿತ ಆರೋಪಿ, ವೃದ್ದ ಮಹಿಳೆಯರನ್ನ ಟಾರ್ಗೆಟ್ ಮಾಡಿ ಸರಗಳವು ಮಾಡ್ತಿದ್ದನು. ಆಕ್ಟಿವಾ ಬೈಕ್ ನಲ್ಲಿ ಹಿಂಬದಿಯಿಂದ ಬಂದು ಮಾಂಗಲ್ಯ ಸರ ಕಸಿದು ಪರಾರಿಯಾಗ್ತಿದ್ದನು.
ಕಳೆದ ವಾರ ಆರ್.ಆರ್.ನಗರದ ಕುವೆಂಪು ಸರ್ಕಲ್ ನಲ್ಲಿ ವೃದ್ದ ಮಹಿಳೆಯ ಸರ ಎಗರಿಸಿದ್ದ ಆರೋಪಿ ವಿರುದ್ದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ 3.12 ಲಕ್ಷ ಮೌಲ್ಯದ 50 ಗ್ರಾಂ ಚಿನ್ನದ ಸರ ವಶಕ್ಕೆ ಪಡೆದಿದ್ದು, ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.