ಜೆಡಿಎಸ್ ಮುಗಿದೇ ಹೋಯ್ತು ಅಂದ್ರು, ಕುಮಾರಣ್ಣ ಕೇಂದ್ರ ಸಚಿವರಾಗಿಲ್ವ?: ಹೆಚ್.ಡಿ.ರೇವಣ್ಣ
ಬೆಂಗಳೂರು: ಜೆಡಿಎಸ್ ಮುಗಿದೇ ಹೋಯ್ತು ಅಂದ್ರು, ಕುಮಾರಣ್ಣ ಕೇಂದ್ರ ಸಚಿವರಾಗಿಲ್ವ? ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಿಖಿಲ್ ನಿಲ್ಲಿಸದಿದ್ರೆ ಕುಮಾರಸ್ವಾಮಿ ಮಗ ಹೆದರಿ ಹೋದ ಅಂತಾ ಹಬ್ಬಿಸುತ್ತಿದ್ರು. ನಿಖಿಲ್ ಪ್ರಾಮಾಣಿಕವಾಗಿ ಓಡಾಡ್ತಾನೆ, ಗೆಲ್ತಾನೆ. ಜೆಡಿಎಸ್ ಮುಗಿದೇ ಹೋಯ್ತು ಅಂದ್ರು, ಕುಮಾರಣ್ಣ ಕೇಂದ್ರ ಸಚಿವರಾಗಿಲ್ವ? ಇವರಾರಿಂದ ಮೈತ್ರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದಾರೆ.
ಪ್ರತಿದಿನ ಕತ್ತಲೆ ಆಗುತ್ತೆ ಬೆಳಗಾಗುತ್ತೆ. ಕಾಲ ಚಕ್ರ ಹೀಗೆ ಇರುವುದಿಲ್ಲ. ನಿಖಿಲ್ ನಿಲ್ಲಿಸದಿದ್ರೆ ಕದ್ದು ಓಡಿ ಹೋದ ಅನ್ನುತ್ತಿದ್ರು. ಕಾಂಗ್ರೆಸ್ 14 ತಿಂಗಳ ಸರ್ಕಾರ ಅವರು ಆಗ ಹಾಸನಕ್ಕೆ ಬಂದು ಹಗಲು ರಾತ್ರಿ ಸುತ್ತಾಡಿದ್ರು. ಆದರೂ ಹಾಸನದಲ್ಲಿ ಎಂಎಲ್ಎ ಗೆಲ್ಲೋಕಾಯ್ತ? ಆರು ಸ್ಥಾನಗಳನ್ನ ನಾವು ಗೆಲ್ಲಲಿಲ್ವ? ಲೋಕಸಭೆಯಲ್ಲಿ ನಾಲ್ಕು ದಿನ ಇದ್ದಂತೆ ಏನು ಮಾಡಿದ್ರು ಮುಂದೆ ಹೇಳ್ತೇನೆ. ಕಾಲ ಬರುತ್ತೆ ಎಂದು ಹೇಳಿದ್ದಾರೆ.