ಸಿದ್ದರಾಮಯ್ಯ ಮುಸ್ಲಿಮರ ಓಲೈಕೆ ಮಾಡದೇ ನಿದ್ದೆ ಬರೋದಿಲ್ಲ: ಆರ್.ಅಶೋಕ್
ಬೆಂಗಳೂರು: ಸಿದ್ದರಾಮಯ್ಯ ಮುಸ್ಲಿಮರ ಓಲೈಕೆ ಮಾಡದೇ ನಿದ್ದೆ ಬರೋದಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸರ್ಕಾರವೇ ರೈತರ ಭೂಮಿ ಕಬಳಿಕೆ ಮಾಡ್ತಿದೆ. ರೈತರ ಸಂಘಕ್ಕೆ ಮನವಿ ಮಾಡ್ತೀನಿ ಬೀದಿಗಿಳಿದು ಹೋರಾಟ ಮಾಡಿ. ಇಲ್ಲದೆ ಹೋದ್ರೆ ಮುಂದೆ ಕೃಷಿ ಮಾಡೋಕೆ ಭೂಮಿ ಇರೊಲ್ಲ. ತಲೆ ಕೆಟ್ಟವನು ವಿಧಾನಸೌಧ ವಕ್ಫ್ ಆಸ್ತಿ ಅಂತಿದ್ದಾರೆ. ಸಂಸತ್ ಭವನ ವಕ್ಫ್ ಆಸ್ತಿ ಅಂತಿದ್ದಾರೆ.
ಮುಸ್ಲಿಮರು ಯಾವಾಗ ಭಾರತಕ್ಕೆ ಬಂದರು? ಮುಸ್ಲಿಮರು ಮತಾಂತರ ಬಿಟ್ಟು ಈಗ ಜಮೀನಾಂತರ ಮಾಡ್ತಿದ್ದಾರೆ. ಸಿದ್ದರಾಮಯ್ಯ ಮುಸ್ಲಿಮರ ಓಲೈಕೆ ಮಾಡದೇ ನಿದ್ದೆ ಬರೋದಿಲ್ಲ. ರೈತರ ಹೆಸರಿನಲ್ಲಿ ದಾಖಲಾತಿ ಆಗೋವರೆಗೂ ನಾವು ಹೋರಾಟ ಬಿಡೊಲ್ಲ. ನಾವು ಹಿಟ್ ಅಂಡ್ ರನ್ ಅಂತ ಸಿಎಂ ಹೇಳ್ತಾರೆ. ನಾವು ಮುಡಾ ಪ್ರತಿಭಟನೆ ಮಾಡಿದ್ವಿ. ನಿಮ್ಮ ಮೇಲೆ 420 ಕೇಸ್ ಬುಕ್ ಆಗಿದೆ. ಸಿಎಂ ಗೌರವ ಇದ್ದಿದ್ದರೆ ರಾಜೀನಾಮೆ ಕೊಟ್ಟ ಹೋಗಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.