ATM ಎ ಟಿ ಎಂ- ಎನಿ ಟೈಂ ಮನಿ ಸಿಗಲ್ಲ…!

Date:

ಕ್ಯಾಶ್ ಯಾಕೆ ಎ ಟಿ ಎಂ ಇದೆಯಲ್ಲ ಅಂತ ಹೇಳ್ತಿದ್ದವರಿಗೆಲ್ಲ ಶಾಕ್ ಕಾದಿದೆ. ಎ ಟಿ ಎಂ ಅಂದ್ರೆ ಎನಿ ಟೈಂ ಮನಿ ಅನ್ನೋದು ಇನ್ನು ಮುಂದೆ ಸುಳ್ಳಾಗಲಿದೆ.ರಾತ್ರಿ ತಡವಾಗಿ ಎ ಟಿ ಎಂ ನಲ್ಲಿ ಹಣ ಪಡೆಯಲು ಇನ್ನು ಮುಂದೆ ಬ್ಯಾಂಕ್ ಗಳು ಸಹಕರಿಸುವುದಿಲ್ಲ. ಏಕೆಂದರೆ ಎ ಟಿ ಎಂ ಗಳಿಗೆ ನಗದು ಪುನರ್ ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳಿಗೆ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಒಂದೊಮ್ಮೆ ಈ ನಿಯಮ ಜಾರಿಗೆ ಬಂದದ್ದೇ ಆದಲ್ಲಿ ರೆಡಿ ಕ್ಯಾಶ್ ಇಟ್ಟುಕೊಳ್ಳದೆ ಎ ಟಿ ಎಂ ಅನ್ನ ಅವಲಂಬಿಸಿರೋ ಸಹಸ್ರಾರು ಮಂದಿಗೆ ನಿರಾಸೆಯಾಗೋದಂತೂ ಗ್ಯಾರಂಟಿ. ರಾತ್ರಿ 8 ರ ಬಳಿಕ ಎ ಟಿ ಎಂ ಗಳನ್ನ ಪುನರ್ ಭರ್ತಿ ಮಾಡಬಾರದು ಎಂಬ ಪ್ರಸ್ತಾಪವನ್ನು ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ.
ಅಲ್ಲದೆ ಹಣ ಸಾಗಿಸೋ ವ್ಯಾನ್ ನಲ್ಲಿ ಸಿಸಿಟಿವಿ ಮತ್ತು ಜಿಪಿಎಸ್ ಅಳವಡಿಕೆಯಾಗಿರಬೇಕು. ಒಂದು ಟ್ರಿಪ್ ನಲ್ಲಿ ಗರಿಷ್ಠ 5 ಕೋಟಿ ಅನ್ನಷ್ಟೇ ಕೊಂಡೊಯ್ಯಬಹುದು. ಯಾವುದೇ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸುವಂತ ಇಬ್ಬರು ಸಶಸ್ತ್ರ ಗಾರ್ಡ್ ಗಳಿರಬೇಕು ಇತ್ಯಾದಿ ನಿಯಮಗಳನ್ನ ಜಾರಿಗೆ ತರುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಸುರಕ್ಷತಾ ದೃಷ್ಠಿಯಿಂದ ಈ ಯೋಜನೆ ಸ್ವಾಗತಿಸುವಂತದ್ದೇ. ಒಂದೊಮ್ಮೆ ಈ ಯೋಜನೆ ಜಾರಿಗೆ ಬಂದರೆ ಸದಾ ಜೇಬಲ್ಲಿ ಎ ಟಿ ಎಂ ಇಟ್ಟುಕೊಂಡು ಓಡಾಡುತ್ತಿದ್ದ ಜನ ಅವಶ್ಯಕತೆಗೆ ತಕ್ಕಂತೆ ಹಣ ಇಟ್ಟುಕೊಳ್ಳಬೇಕಾಗತ್ತೆ. ಆದರೆ ಎ ಟಿ ಎಂ ಸಂಸ್ಕೃತಿಗೆ ಹೊಂದಿಕೊಂಡಿರೋ ಜನಕ್ಕೆ ಈ ಯೋಜನೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಲಿದೆ.

  •  ಶ್ರೀ

POPULAR  STORIES :

ವಿರಾಟ್ ಕೊಹ್ಲೀನಾ ಮದ್ವೆ ಆಗ್ತಾಳಂತೆ ಖಂಡಿಲ್..!? #Video

ಇವ್ರಿಗೆಲ್ಲಾ ಜೈಲು ಗ್ಯಾರಂಟಿ..!? ಪನಾಮಾ ಹಗರಣ ಎಂದರೇನು..?

ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!

ಪ್ರಿಯಾಂಕ ಛೋಪ್ರಾ ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ..?

`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?

ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!

ಚಂದದ ನಟಿಯರೇಕೆ ಸೂಸೈಡ್ ಮಾಡ್ಕೋತಾರೆ..!?

`ಸಾಯುವ ಮನಸ್ಸೆ..! ನಿನ್ನ ಕಡೆ ನನಗಿದೆ ತಿರಸ್ಕಾರ..!!’

ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?

ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!

Share post:

Subscribe

spot_imgspot_img

Popular

More like this
Related

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ ಸಜೀವ ದಹನ

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ...

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...