ಆಟೋ ಡ್ರೈವರ್ ಕಮ್ ಸಿನಿಮಾ ರೈಟರ್..!

Date:

ಹತ್ತನೇ ಕ್ಲಾಸ್ ಅರ್ಧಕ್ಕೆ ಬಿಟ್ಟು, ಒಂದು ತುತ್ತು ಊಟಕ್ಕೂ ಕಷ್ಟಪಟ್ಟು, ಫೂಟ್ ಪಾತ್ನಲ್ಲಿ ಮಲಗಿದ್ದ ಇಂದಿನ ಆಟೋ ಡ್ರೈವರ್ ಇವತ್ತು ಕೇವಲ ಆಟೋಡ್ರೈವರ್ ಅಲ್ಲ ನಾವೆಲಿಸ್ಟ್(ಕಾದಂಬರಿಕಾರ)! ಇವರ ಲೈಫ್ ಸ್ಟೋರಿಯ ಸಣ್ಣ ಝಲಕ್ ಇಲ್ಲಿದೆ!
ಅವರ ಮನೆಯಲ್ಲಿ ನಿತ್ಯವೂ ಕಿರಿಕಿರಿ! ಅದನ್ನು ತಡೆದುಕೊಳ್ಳಲು ಸಾಧ್ಯವೇ ಆಗಲಿಲ್ಲ! ಅದಕ್ಕಾಗಿ ಅವತ್ತೊಂದು ದಿನ ಹೇಳದೆ ಕೇಳದೆ ಮನೆ ಬಿಟ್ಟು ಬರ್ತಾರೆ! ಅವತ್ತು ಮನೆಬಿಟ್ಟಾಗ ಅವರಿಗೆ ಮೀಸೆಯೂ ಚಿಗುರಿರುವುದಿಲ್ಲವೇನೋ? ಅಂದು ಎಲ್ಲವನ್ನೂ ತೊರೆದಾಗ ಅವರು ಅನುಭವಿಸಿದ ಕಷ್ಟ ಅವರಿಗೇ ಗೊತ್ತು! ಎಸ್.ಎಸ್.ಎಲ್.ಸಿ. ಕೂಡ ಅರ್ಧಕ್ಕೇ ಮುಗಿಸಿ ಬಿಟ್ಟಿದ್ರು! “ಅಯ್ಯೋ, ಸಾಕಪ್ಪಾ ಸಾಕು ಮನೆ ಸಹವಾಸ” ಅಂತ ಮನೆ-ಮಠ ಬಿಟ್ಟೇನೋ ಬಂದು ಬಿಟ್ರು! ಆದ್ರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಆಯ್ತು! ಕೆಲಸ ಇಲ್ದೆ ಅದೆಷ್ಟೋ ದಿನ ಖಾಲಿ ಹೊಟ್ಟೆಯಲ್ಲೇ ಹಸಿದು, ರಸ್ತೆ ಬದಿಯಲ್ಲಿ. ಅಲ್ಲೋ ಇಲ್ಲೋ ಅನಾಥರಾಗಿ ಮಲಗಿದರು! ಚೆನೈ, ಮಧುರೈ, ಅಂತೆಲ್ಲಾ ಅಲೆದು ಅಲೆದು ಸುಸ್ತಾದ್ರು! ನಂತರ ತಮಿಳುನಾಡಿನಲ್ಲೇ ಇದ್ರೆ ಸುಖವಿಲ್ಲ ಅಂತ ಆಂಧ್ರಪ್ರದೇಶದತ್ತ ಹೊರಟರು! ಅಲ್ಲಿಂದ ಇವರ ಹಣೆಬರಹವೂ ಬದಾಗುತ್ತೆ! ಟೋಟಲಿ ಇವ್ರ ಲೈಫೇ ಚೇಂಜ್ ಆಗ್ತಾ ಆಗ್ತಾ ಸಾಗುತ್ತೆ!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಆಂಧ್ರಪ್ರದೇಶದ `ಗುಂಟೂರಿ’ಗೆ 42 ಕಿಲೋಮೀಟರ್ ದೂರ ಇರುವ ಹಳ್ಳಿ ಹೋಟೆಲ್ಲೊಂದರ ಸರ್ವರ್ ಆಗ್ತಾರೆ! ಕಷ್ಟನೋ, ಸುಖನೋ ಬಿಡಿಗಾಸು ದುಡಿತಾ ಇರುವ ಟೈಮ್ ನಲ್ಲಿಯೇ ಮತ್ತೆ ಗ್ರಹಚಾರ ವಕ್ಕರಿಸಿಕೊಂಡೇ ಬಿಡುತ್ತೆ! ಅವರು ಮತ್ತು ಅವರ ಮೂವರು ಗೆಳೆಯರು ಆಂಧ್ರ ಜೈಲು ಕಂಬಿ ಎಣಿಸಬೇಕಾಗುತ್ತೆ! ತಮ್ಮದಲ್ಲದ ತಪ್ಪಿಗೆ 13ದಿನ ಜೈಲೂಟವೇ ಗತಿ ಆಗುತ್ತೆ! ಮತ್ತೆ ಅಲ್ಲಿಂದ ಮತ್ತೊಂದು ಟರ್ನಿಂಗ್ ಪಾಯಿಂಟ್ ಇವರ ಲೈಫ್ ಗೆ ಸಿಗುತ್ತೆ!
ಜೈಲಿನಲ್ಲಿದ್ದ ಆ 13ದಿನ ಅನುಭವಿಸಿದ ನೋವು, ಯಾತನೆ, ಲಾಠಿರುಚಿ ಈ ಸಾಮಾನ್ಯನನನ್ನು ಅಸಾಮನ್ಯನನ್ನಾಗಿಸುತ್ತೆ! ಅಲ್ಲಿ ತಾನು ಅನುಭವಿಸಿದ ನೋವು ಮತ್ತು ಇತರರ ಸಂಕಟವನ್ನೂ ಅತ್ಯಂತ ಗಂಭೀರವಾಗಿ ಪರಿಗಣಿಸಿದ ಇವರು ಕಾದಂಬರಿ ಬರೆಯುತ್ತಾರೆ! “ಲಾಕ್ ಅಪ್” ಎಂಬ ಅವರ ಆ ಕಾದಂಬರಿಯಲ್ಲಿ ಪೊಲೀಸರ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಡ್ತಾರೆ! ಹೀಗೆ ಜೈಲುವಾಸ ಇವರಿಗೆ ಕಾದಂಬರಿ ಬರೆಯಲು ಪ್ರೋತ್ಸಾಹಿಸುತ್ತೆ! 1984ರಲ್ಲಿ ಸ್ವಂತ ಊರು ಕೋಯಂಬುತ್ತೂರಿಗೆ ಬಂದ ಇವರು 160 ಪುಟಗಳ ಆ ಕಾದಂಬರಿಯನ್ನು ಬರೆಯುತ್ತಾರೆ! 2006ರಲ್ಲಿ ಪ್ರಕಟವಾದ ಅವರ ಕಾದಂಬರಿಗೆ “ಬೆಸ್ಟ್ ಡಾಕ್ಯುಮೆಂಟ್ ಆಫ್ ಹ್ಯುಮನ್ ರೈಟ್ಸ್” ಎಂಬ ಗೌರವವೂ ಸಿಗುತ್ತೆ! ಮಾನವಹಕ್ಕು ಸಂಸ್ಥೆಯೊಂದರ ಮುಖ್ಯಸ್ಥರಾಗಿದ್ದ ನ್ಯಾ. ವಿ. ಆರ್ ಕೃಷ್ಣ ಅಯ್ಯರ್ ಈ ಗೌರವವನ್ನು ಲಾಕ್ ಅಪ್ ಗೆ ನೀಡ್ತಾರೆ!
ಇವರ ಇದೇ ಕಾದಂಬರಿಯನ್ನು ಆಧಾರಿಸಿದ ಧನುಷ್ ನಿರ್ಮಾಣದ, ವೆಟ್ರಿಮಾರನ್ ನಿರ್ದೇಶನದ “ವಿಸರಣೈ” ಎಂಬ ಸಿನಿಮಾ ಕೂಡ ತೆರೆಕಂಡಿದೆ! ಆ ಸಿನಿಮಾ ಇಂದು “ವೆನಿಸ್ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟ್ ನಲ್ಲಿ” ಪ್ರದರ್ಶನಗೊಳ್ಳಲಿದೆ! ಒಟ್ಟಾರೆಯಾಗಿ ಈ ಅಂತರಾಷ್ಟ್ರೀಯ ಸಿನಿಮಾ ಹಬ್ಬಕ್ಕೆ ವಿಶ್ವದ 120 ದೇಶಗಗಳಿಂದ 2000 ಸಿನಿಮಾಗಳಲ್ಲಿ ಆಯ್ಕೆಯಾದ 20 ಸಿನಿಮಾಗಳ ಪೈಕಿ ತಮಿಳನ ಒಂದೇ ಒಂದು ಸಿನಿಮಾ ಇದಾಗಿದೆ! ಇಂತಹ ದೊಡ್ಡ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟ್ ಗೆ ಆಯ್ಕೆಯಾದ ತಮಿಳಿನ ಮೊಟ್ಟಮೊದಲ ಸಿನಿಮಾವೂ ಇದಾಗಿದೆ! ಇದು ನಿಜಕ್ಕೂ ಇಡೀ ಭಾರತೀಯರೇ ಹೆಮ್ಮೆಪಡುವಂತಹ ವಿಷಯ! ಅಂದು, ಮನೆಬಿಟ್ಟು ಬಂದು, ಅಲೆಮಾರಿಯಾಗಿ, ಜೈಲೂಟತಿಂದ ಬಡ ವ್ಯಕ್ತಿಯೊಬ್ಬನ ಕಾದಂಬರಿ ಆಧಾರಿತ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡ್ತಾ ಇದೆ ಅಂದ್ರೆ ಏನ್ ಸುಮ್ನೇನಾ?
ಓ.. ನಿಮಗೆ ಆ ಕಾದಂಬರಿಗಾರ ಯಾರು ಅಂತ ಹೇಳ್ಲೇ ಇಲ್ವಲಾ? ಅವರ ಹೆಸರು ಚಂದ್ರಕುಮಾರ್ ಅಲಿಯಾಸ್ ಆಟೋ ಚಂದ್ರನ್! ಇವರು ಅಂದು ಜೈಲುವಾಸದಿಂದಾಗಿ ಪ್ರೇರಿತರಾಗಿ ಕಾದಂಬರಿ ಬರೆಯೋಕೆ ಶುರುಮಾಡಿದ್ರಲ್ಲಾ? ಇವತ್ತಿಗೂ ಅದೇ ರೀತಿ ಬರವಣಿಗೆ ಮುಂದುವರೆಸಿದ್ದಾರೆ! ಇಂದು ಆಟೋ ಓಡಿಸುತ್ತಿರುವ ಇವರು, ಪ್ಯಾಸೆಂಜರ್ ಗೆ ಕಾಯುತ್ತಿರುವಾಗ, ಬಿಡಿವು ಸಿಕ್ಕಾಗ ಕಾದಂಬರಿ ರಚನೆಯಲ್ಲಿ ತೊಡಗಿರುತ್ತಾರೆ!
ಲೈಫ್ ನಲ್ಲಿ ಯಾವ್ ಟೈಮಲ್ಲಿ ಎಂಥಾ ಟರ್ನಿಂಗ್ ಪಾಯಿಂಟ್ ಸಿಗುತ್ತೆ ಅನ್ನೋದನ್ನ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ! ಆದ್ರೆ ಯಾರನ್ನೂ ಹಗುರವಾಗಿ ಕಾಣ್ಬರ್ದು, ಮನಸ್ಸು ಮಾಡಿದ್ರೆ ಯಾರು ಏನ್ ಬೇಕಾದ್ರೂ ಆಗ್ಬಹುದು! ಇದಕ್ಕೆ ಆಟೋಡ್ರೈವರ್ ಕಮ್ ನಾವೆಲಿಸ್ಟ್ ಚಂದ್ರಕುಮಾರ್ ಅಲಿಯಾಸ್ ಆಟೋ ಚಂದ್ರನ್ನೇ ರಿಯಲ್ ಎಕ್ಸಾಂಪಲ್!

  • ಶಶಿಧರ ಡಿ ಎಸ್ ದೋಣಿಹಕ್ಲು

—————

POPULAR  STORIES :

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...