ಮಗು ಹುಟ್ಟುವ ಮುನ್ನ ಕುಲಾವಿ ಹೊಲೆದರು ಎಂಬ ಗಾದೆಯನ್ನು ಆಗಾಗ ಕೇಳುತ್ತಿರುತ್ತೇವೆ. ಅಲ್ಲದೇ ಅದಕ್ಕೆ ಕೆಲವೊಂದು ಉದಾಹರಣೆಗಳು ಸಿಗುತ್ತಲೇ ಇರುತ್ತವೆ. ಅದಕ್ಕೆ ಇನ್ನೊಂದು ಸಾಕ್ಷಿ ಇಲ್ಲಿದೆ ನೋಡಿ.
ಅದೇನಪ್ಪಾ ಅಂದ್ರೆ, ಬಿಹಾರದಲ್ಲಿ ಇಂದು ಚುನಾವಣೆ ಭರ್ಜರಿಯಾಗಿ ನಡೆಯುತ್ತಿದೆ. ಆದರೆ ಜೆಡಿಯುನ ನಾಯಕ ಹಾಗೂ ಬಿಹಾರದ ನಗರಾಭಿವೃದ್ಧಿ ಸಚಿವ ಅವಧೇಶ್ ಕುಶ್ವಾ ಎಂಬುವವರು ಮುಂದೆ ಚುನಾವಣೆಯಲ್ಲಿ ಗೆದ್ದ ಬಳಿಕ ಕೆಲಸ ಮಾಡಿ ಕೊಡುತ್ತೇನೆ ಎಂದು ಈಗಲೇ 4 ಲಕ್ಷ ರೂಪಾಯಿ ಲಂಚ ಪಡೆದಿದ್ದಾನೆ. ಲಂಚ ಪಡೆಯುವಾಗಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವಧೇಶ್ ಕುಶ್ವಾ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಗಿದೆ.
ಭ್ರಷ್ಟಾಚಾರವನ್ನು ಪ್ರಜಾಪ್ರಭುತ್ವಕ್ಕಂಟಿದ ಕೊಳಕು ಎನ್ನುತ್ತಾರೆ. ಆದರೆ ಅವಧೇಶ್ ಕುಶ್ವಾ ನಾಯಕರೇ ಅದನ್ನು ಅಟ್ಟಕ್ಕೇರಿಸಿ ಕೂರಿಸಿದ್ದಾರೆ. ಆದ್ದರಿಂದ ಚುನಾವಣೆಯ ಸಮಯದಲ್ಲಿ ಅಂಥ ಭ್ರಷ್ಟ ನಾಯಕರಿಗೆ ಪಾಠ ಕಲಿಸಬೇಕು. ಅಂಥ ಅವಕಾಶ ಬಿಹಾರದ ಮತದಾರನಿಗೆ ಒಲಿದಿದ್ದು ಮುಂದೇನಾಗುತ್ತದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
Video :
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com