No menu items!
13.9 C
Munich
Wednesday, April 29, 2026

ಕಾಲಿಲ್ಲದೆ ಉಳುವ ಯೋಗಿಯ ನೋಡಲ್ಲಿ..! ಈ ರೈತನಿಗೆ ಸಾಥ್ ಕೊಟ್ಟಿದ್ದು ಫೇಸ್ ಬುಕ್..!

Must read

ಅತ್ತ ಸುಮ್ಮನೇ ಕೂರುವಂತೆಯೂ ಇಲ್ಲ. ಇತ್ತ ಕಡೆ ಕೆಲಸ ಮಾಡಲು ಒಂದು ಕಾಲೇ ಇಲ್ಲ. ಸುಮ್ಮನಿದ್ದರೆ ಇಡೀ ಮನೆಗೆ ಮನೆಯೇ ಉಪವಾಸ ಕೂರಬೇಕಾಗುತ್ತದೆ. ಆದ್ದರಿಂದ ಆ ರೈತ ಮಾಡಿದ ಐಡಿಯಾವನ್ನು ಕಂಡರೆ ಎಂಥಹ ಕಠೋರ ಮನಸ್ಸಿನ ಮನುಷ್ಯನನ್ನೂ ಬದಲಿಸಿಬಿಡುತ್ತದೆ. ಏಕೆಂದರೆ ಆ ರೈತ ತನ್ನ ಅರ್ಧ ಕಾಲಿಗೆ ಕಟ್ಟಿಗೆ ಕಟ್ಟಿಕೊಂಡು ನಡೆಯುತ್ತಿದ್ದ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ. ಕಾಲಿಲ್ಲದ ಆತನಿಗೆ ತನ್ನದೇ ಜಮೀನಿನನ್ನು ಸಂಪೂರ್ಣವಾಗಿ ನಿರ್ವಹಿಸುವ ಸಾಮರ್ಥ್ಯವಿಲ್ಲ. ಆದ್ದರಿಂದ ಬೇರೆಯವರ ಜಮೀನಿನಲ್ಲಿ ಕೂಲಿಗಾಗಿ ಕೆಲಸ ಮಾಡುತ್ತಿದ್ದ. ಅದರಿಂದ ಬರುವ ಹಣವೇ ಆತನ ಕುಟುಂಬಕ್ಕೆ ಆಧಾರ. ಇಷ್ಟಕ್ಕೂ ಇಂಥಹ ಓರ್ವ ರೈತನ ಜೀವನ ಇಂದು ಒಂದು ಫೋಟೋದಿಂದ ಬದಲಾಗಿದೆ. ಸಾಮಾಜಿಕ ಜಾಲತಾಣಗಳು ಮಾಡಿದ ಉಪಕಾರದಿಂದ ಆ ಬಡ ರೈತನಿಗೆ ಸಹಾಯವಾಗಿದೆ.

farmer_1444538831
ಯೆಸ್.. ಉತ್ತರ ಪ್ರದೇಶದ ಬುಂಧೇಲಖಂಡದಿಂದ 60 ಕಿಲೋ ಮೀಟರ್ ದೂರದ ಬಬೇರೂ ಎಂಬುದೇ ಈ ರೈತನಿರುವ ಊರು. ಆಸಿಫ್ ಎಂಬ ವ್ಯಕ್ತಿಯೋರ್ವ ಈತ ಕೆಲಸ ಮಾಡುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ. ಈಗ ಆ ಫೋಟೋ ಒಬ್ಬರಿಂದ ಒಬ್ಬರಿಗೆ ತಲುಪಿ ಕೊನೆಗೆ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ರನ್ನು ಮುಟ್ಟಿದೆ. ಫೋಟೋವನ್ನು ಗಮನಿಸಿದ ಅಖಿಲೇಶ್ ಯಾದವ್ ರವರು ತಕ್ಷಣವೇ ಆ ರೈತನ ನೆರವಿಗೆ ಧಾವಿಸಿದ್ದಾರೆ. ಆತನಿಗೆ ಕೃತಕ ಕಾಲನ್ನು ಒದಗಿಸಿದ್ದಾರೆ. ಇದರಿಂದ ಆ ಬಡ ರೈತನ ಜೀವನ ಈಗ ಬದಲಾಗಿದೆ.
ಇದನ್ನು ಗಮನಿಸಿದರೆ ನಮ್ಮ ರೈತರು ಎಂತಹ ನಿಕೃಷ್ಟ ಪರಿಸ್ಥಿತಿಯಲ್ಲಿದ್ದಾರೆ ಎಂಬುದು ಅರಿವಾಗುತ್ತದೆ. ಇನ್ನೊಂದೆಡೆ ಆ ಬಡ ರೈತನ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಅಖಿಲೇಶ್ ಯಾದವ್ ರ ಗಮನ ಸೆಳೆದ ಆಸೀಫ್ ರಂತಹವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ಅಲ್ಲವೇ..?

ರಾಜಶೇಖರ ಜೆ

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!

ಇವರೆಂಥಾ ಸ್ವಾಭಿಮಾನಿ, ಸ್ವಾವಲಂಭಿ ಅಜ್ಜಿ..! ವಯಸ್ಸು 78, ಆದ್ರೂ…!

ತಿನ್ನುವ ಮುನ್ನ ಯೋಚಿಸು ಚಿನ್ನಾ..! ನಿಮ್ಮ ತಿಂಡಿ, ತಿನಿಸು ಎಷ್ಟು ಸುರಕ್ಷಿತ..?

ಹತ್ತು ವರ್ಷದ ಹುಡುಗನಿಗೆ ಅದೆಂಥಾ ಜವಬ್ದಾರಿ..! ಈತನ ಬುದ್ಧಿ ಎಲ್ಲರಿಗೂ ಬರಲ್ಲ ಕಣ್ರೀ..!

ಗಂಡ ಹೆಂಡತಿಗೆ ಹೊಡೆದ್ರೆ ಈ ನಾಯಿ ಏನು ಮಾಡುತ್ತೆ ಅಂತ ನೋಡಿ..! ಇದು ಶಾಂತಿಪ್ರಿಯ ನಾಯಿ – ಭೀಮ್..!

ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!

ಕ್ರೀಡಾ ಇತಿಹಾಸದಲ್ಲಿಯೇ ಅತೀ ದುಬಾರಿ ಟಿಕೇಟ್ ಯಾವುದು ಗೊತ್ತೇ..?

ರಿಯಲ್ ಲೈಫ್ ನ ರಿಯಲ್ ಹೀರೋಗಳು..! ಏನೂ ಇಲ್ಲದವರು ಏನೇನೋ ಆಗಿಬಿಟ್ಟರು..!

ಏನೇನೋ ಕಂಡುಹಿಡಿಯುವವರ ನಡುವೆ ಇನ್ನೇನೋ ಕಂಡುಹಿಡಿಯುವ ನಮ್ಮ ಹುಡುಗ..! ಇವನು ಪಕ್ಕಾ ಕನ್ನಡದ ಸೈಂಟಿಸ್ಟ್

ಬೆಂಗಳೂರಿಗೂ ಬಂತು ತ್ರಿಡಿ ಬಾಬಾ ಫೋಟೋ..! ಈ ಫೋಟೋದ ವಿಶೇಷತೆ ಏನು ಗೊತ್ತಾ..?

ಆ್ಯಪಲ್ ತಿನ್ನೋಕೆ ಮುಂಚೆ ಈ ವೀಡಿಯೋ ತಪ್ಪದೇ ನೋಡಿ..!

ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!

10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

 ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article