ಅವಶ್ಯಕತೆ ಇದ್ದರೂ ಅವಕಾಶಗಳನ್ನು ಬಳಸಿಕೊಳ್ಳುವಾಗ ಅಡೆತಡೆಗಳು ಬರುತ್ತವೆ ಅನ್ನೋ ಕಾರಣದಿಂದಲೇ ಕೆಲವೊಂದು ಅವಕಾಶಗಳನ್ನು ಗಾಳಿಗೆ ತೂರುವವರಿದ್ದಾರೆ..! ಆದರೆ ಅವಕಾಶ ಸಿಗದೇ ಇದ್ದರೂ ಅವಶ್ಯಕತೆಗಾಗಿ ಅವಕಾಶವನ್ನು ತಾನೇ ಸೃಷ್ಠಿಸಿಕೊಂಡು ಮುನ್ನುಗ್ಗುವ ಜನ ನಮ್ಮ ನಡುವೆ ವಿಶೇಷವೆನಿಸುತ್ತಾರೆ..! ಇಂತವರು ಸಾಧಕರಾಗಿ.. ಹೊಸ ಆವಿಷ್ಕಾರಗಳ ಹರಿಕಾರರಾಗಿ ಹೊರ ಹೊಮ್ಮುತ್ತಾರೆ..! ಹೊಸತನವನ್ನು ಬಯಸುವ ಪ್ರತಿಯೊಬ್ಬರೂ ತಮ್ಮದಾರಿಯಲ್ಲಿ ಬರುವ ಅಡೆತಡೆಗಳನ್ನು ದಾಟಿಯೇ ಮುನ್ನುಗ್ಗಿರ್ತಾರೆ..! ಅವರು ನಡೆಯುವ ಹಾದಿ ಯಾರಿಗೂ.., ಯಾರೆಂದರೆ ಯಾರಿಗೂ ಗೊತ್ತೇ ಇರುವುದಿಲ್ಲ..! ಅವರನ್ನು ನೋಡಿ ಏನಪ್ಪಾ, ಎಂಥಾ ಹುಚ್ಚ ಇವನೆಂದು ಗೇಲಿ ಮಾಡುವವರೂ ಇರ್ತಾರೆ..! ನಗುವವರು ಇದ್ದಾರೆ..! ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಹೊಸತನದೊಂದಿಗೆ ಅಂದುಕೊಂಡಿದ್ದನ್ನು ಸಾಧಿಸಿದಾತ ಎಲ್ಲರೂ ಅವನನ್ನು ನಿಬ್ಬೆರಗಾಗಿ ನೋಡುವಂತೆ ಮಾಡ್ತಾನೆ..! ಅವಕಾಶಗಳು ಇಲ್ಲದೇ ಇದ್ದರೂ ತನ್ನ ಕ್ರಿಯೇಟಿವ್ ಐಡಿಯಾವನ್ನೇ ಬಂಡವಾಳವನ್ನಾಗಿಸಿಕೊಂಡು ಹೊಸ ತಂತ್ರಜ್ಞಾನವನ್ನು ಪರಿಚಯಿಸಿ ಉದ್ಯಮಲೋಕಕ್ಕೆ ಎಂಟ್ರಿಕೊಟ್ಟ ಹಲವಾರು ಜನರ ಸಾಲಿಗೆ ಇನ್ನೊಬ್ಬ ಯುವಕ ಸೇರಿದ್ದಾನೆ..! ಈತ ಕನ್ನಡಿಗನೆಂಬುದೇ ನಮಗೆ ಹೆಮ್ಮೆ..! ಆತ ಯಾರು..? ಅವನು ಕಂಡುಹಿಡಿದಿದ್ದೇನು…? ಈ ಕನ್ನಡದ ಯುವಕನ ಯಶೋಗಾಥೆಯನ್ನು ಕೇಳೋಣವೇ..!? ಸರಿ, ಆ ಯುವಕನ ಬಗ್ಗೆ, ಆತನ ಸಾಧನೆಯ ಬಗ್ಗೆ ನೋಡ್ಕೊಂಡು ಬರೋಣ ಬನ್ನಿ..!
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಆ ಯುವ ಸೈಂಟಿಸ್ಟ್ ಉದ್ಯಮಿಯ ಹೆಸರು “ಸಂತೋಷ್ ಕಾವೇರಿ”..! ನಮ್ಮ ಕರ್ನಾಟಕದ ಬೆಳಗಾಂನ ಪುಟ್ಟ ಹಳ್ಳಿಯವರು..! ಇದು ಅಂತಿಂತ ಹಳ್ಳಿಯಲ್ಲ ಕೊಂಪೆ..! ಇಂಥಹಾ ರಿಮೋಟ್ ಏರಿಯಾದಲ್ಲಿ ಹುಟ್ಟಿದ್ದ ಸಂತೋಷ್ ಗೆ ಶಾಲೆಗೆ ಹೋಗುವುದೇ ಒಂದು ಅಗ್ನಿಪರಿಕ್ಷೆ ಆಗಿತ್ತು..! ನಿತ್ಯವೂ 10ಕಿ.ಮೀ ನೆಡೆದುಕೊಂಡೇ ಶಾಲೆಗೆ ಹೊಗ್ತಾ ಇದ್ರು..! ಹಂಗೋ ಹಿಂಗೋ ಹೈಸ್ಕೂಲ್ ಮೆಟ್ಟಿಲನ್ನೂ ಏರಿದ್ರು..! ಆ ಟೈಮಲ್ಲಿ ಬಡತನದ ಕಾವು ಮತ್ತಷ್ಟು ಸುಡುತ್ತೆ..! ಅವರ ಕುಟುಂಬದ ಸದಸ್ಯರು ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತೆ..! ಇದರ ಜೊತೆಜೊತೆಗೇನೇ ಆರ್ಥಿಕ ಸಮಸ್ಯೆ ಮತ್ತಷ್ಟು ಬಿಗುಡಾಯಿಸುತ್ತೆ..! ಮನೆಯ ಕೆಲಸ, ಹೊಲದ ಕೆಲಸವನ್ನೂ ಮಾಡಿ ಶಾಲೆಗೆ ಹೋಗುವುದು ತುಂಬಾ ಕಷ್ಟವಾಗುತ್ತೆ..! ಆದರೂ ಶಾಲೆ ಬಿಡುವ ಮನಸ್ಸನ್ನು ಸಂತೋಷ್ ಮಾಡ್ಲಿಲ್ಲ..! ಸಮಸ್ಯೆಗಳನ್ನೂ ಸಂತೋಷದಿಂದಲೇ ಸ್ವೀಕರಿಸಿದ ಸಂತೋಷ್ ಪ್ರತಿದಿನ ಬೆಳಿಗ್ಗೆ 5ಗಂಟೆಯಿಂದಲೇ ಹೊಲದಲ್ಲಿ ಕೆಲಸ ಮಾಡಿ ಶಾಲೆಗೆ ಸಮಯಕ್ಕೆ ಸರಿಯಾಗಿ ಹೋಗಲಾರಂಭಿಸಿದ್ರು..! ಅಷ್ಟೇ ಅಲ್ಲ, ಶಾಲೆಯಿಂದ ಸಂಜೆ ಬಂದೊಡನೆ ಮತ್ತೆ ಹೊಲದ ಕೆಲಸಕ್ಕೆ ಹೋಗ್ತಾ ಇದ್ರು..! ಹೀಗೆ ಹೊಲದ ಕೆಲಸ + ಓದು ಎರಡನ್ನೂ ನಿಭಾಯಿಸಿಕೊಂಡು ಕಷ್ಟಪಡುತ್ತಲೇ ಬೆಳೆದರು..!
ಹೈಸ್ಕೂಲ್ ಮುಗಿದೊಡನೆ ಬೆಳಗಾಂನ ಕಾಲೇಜುವೊಂದರಲ್ಲಿ ಪಿಯುಸಿಗೆ ಸೇರ್ತಾರೆ..! ಅಲ್ಲಿ “ಬ್ಯುಸ್ನೆಸ್ ಅಡ್ಮಿನಿಸ್ಟ್ರೇಷನ್ (ವ್ಯವಹಾರ ಆಡಳಿತ)” ವಿಷಯವನ್ನು ಆಯ್ಕೆ ಮಾಡಿಕೊಳ್ತಾರೆ..! ಪ್ರಥಮ ಪಿಯುಸಿ ಓದುವಾಗಲೇ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್ ನ ಲೀಡ್ ( ಲೀಡರ್ಸ್ ಆ್ಯಕ್ಸಲೇಟರಿಂಗ್ ಡೆವೆಲಪ್ ಮೆಂಟ್) ಗೆ ಸೇರ್ತಾರೆ..! ಅಲ್ಲಿನ ಕ್ರೀಯಾಶೀಲ ಸದಸ್ಯರಾದ ಸಂತೋಷ್, ಟೆಕ್ನಾಲಜಿ (ತಂತ್ರಜ್ಞಾನ)ದ ಬಗ್ಗೆ ತಿಳಿಯುತ್ತಾರೆ..! ಹೊಸ ತಂತ್ರಜ್ಞಾನದ ಆವಿಷ್ಕಾರ ತುಂಬಾ ಜನರಿಗೆ ಉಪಯೋಗಕ್ಕೆ ಬರುತ್ತೆ ಅನ್ನೋದನ್ನು ಮನಗಾಣ್ತಾರೆ..! ಲೀಡ್ ಗೆ ಸೇರಿದಲಿಂದ ಉದ್ಯಮಿ ಆಗಬೇಕೆಂಬ ನಿರ್ಧಾರಕ್ಕೆ ಬರ್ತಾರೆ..! ಲೀಡ್ ನ ವೇಧಿಕೆಯನ್ನು ಆ ನಿಟ್ಟಿನಲ್ಲಿ ಸಮರ್ಪಕವಾಗಿ ಬಳಸಿಕೊಳ್ತಾರೆ..! ರೈತರ ಜೀವನವನ್ನು ಸುಧಾರಿಸುವ ಐಡಿಯಾಗಳನ್ನು ಆ ವೇಧಿಕೆಯ ಮೂಲಕ ಕಾರ್ಯಗತಗೊಳಿಸ್ತಾ ಸಾಗ್ತಾರೆ..! ಯುವ ಉದ್ಯಮಿಯಾಗಿ ಬೆಳೆಯುತ್ತಿದ್ದಾರೆ..!
* ಕ್ಯಾರೆಟ್ ಕ್ಲೀನಿಂಗ್ ಯಂತ್ರ :
ಇದು ಸಂತೋಷರ ಮೊಟ್ಟಮೊದಲನೆಯ ಆವಿಷ್ಕಾರ..! ರೈತರು ತಾವುಬೆಳೆದ ಕ್ಯಾರೆಟ್ ಅನ್ನು ಮಾರುಕಟ್ಟೆಗೆ ಕೊಂಡೊಯ್ಯುವ ಮೊದಲು ಆ ಕ್ಯಾರೆಟ್ ಗಳನ್ನು ಸ್ವಚ್ಚಗೊಳಿಸಬೇಕಾಗುತ್ತೆ..! ಒಂದು ಕ್ವಿಂಟಾಲ್ ಕ್ಯಾರೆಟ್ ಅನ್ನು ಸ್ವಚ್ಛಗೊಳಿಸಲು ಕನಿಷ್ಟ 12 ಜನರಾದರೂ ಬೇಕಾಗುತ್ತೆ..! ಇದು ತುಂಬಾ ಸಮಯವನ್ನೂ ತಗೋಳುತ್ತೆ ಕೂಲಿನೂ ಕೊಡಬೇಕಾಗುತ್ತೆ..! ತಮ್ಮ ಫ್ಯಾಮಿಲಿಯೇ ಈ ಸ್ಥಿತಿಯನ್ನು ಎದರಿಸ್ತಾ ಇದ್ದಿದ್ದನ್ನು ಸ್ವತಃ ಕಣ್ಣಾರೆ ಕಂಡಿದ್ದ ಸಂತೋಷ್ ಸಮಯ ಮತ್ತು ಕೂಲಿ ಹಣ ರೈತರಲ್ಲೇ ಉಳಿಯಬೇಕೆಂಬ ಉದ್ದೇಶದಿಂದ ಈ ಯಂತ್ರವನ್ನು ಕಂಡು ಹಿಡಿದರು..!
ಈ ಕ್ಯಾರೆಟ್ ಕ್ಲೀನ್ ಮಾಡುವ ಯಂತ್ರ ಬಟ್ಟೆಯನ್ನು ಬಳಸಿ ಕ್ಯಾರೆಟ್ ಅನ್ನು ಶುಚಿ ಮಾಡುತ್ತೆ..! ಇವರು ಈ ಯಂತ್ರವನ್ನು ಆವಿಷ್ಕರಸಲು ಆರಂಭಿಸಿದಾಗ 11 ಬಾರಿ ವಿಫಲರಾಗಿದ್ರು..! ಆದ್ರೂ ಸೋತೆನೆಂದು ಛಲಬಿಡದೆ ಮತ್ತೆ ಮತ್ತೆ ಪ್ರಯೋಗಳನ್ನು ಮಾಡಿ ಕೊನೆಗೂ ಕ್ಯಾರೆಟ್ ಕ್ಲೀನಿಂಗ್ ಯಂತ್ರವನ್ನು ಪರಿಚಯಿಸಿಯೇ ಬಿಟ್ಟಿದ್ದಾರೆ..! ಕೇವಲ ಇಬ್ಬರೇ ಈ ಯಂತ್ರದ ಸಹಾಯದಿಂದ ಕೇವಲ 15ನಿಮಿಷದಲ್ಲಿ ಒಂದು ಕ್ವಿಂಟಾಲ್ ಕ್ಯಾರೆಟ್ ಸ್ವಚ್ಛ ಮಾಡಬಹುದು..!
* ಇಕೋ ಫ್ರೆಂಡ್ಲಿ ವಾಟರ್ ಕಾಯಿಲ್ (ಪರಿಸರಸ್ನೇಹಿ ನೀರನ್ನು ಕುದಿಸುವ ಕಾಯಿಲ್)..!
ಮೊದಲ ಆವಿಷ್ಕಾರದ ಯಶಸ್ಸು ಸಂತೋಷರನ್ನು ಇನ್ನೂ ಹೊಸ ಆವಿಷ್ಕಾರದೆಡೆಗೆ ಸೆಳೆಯುತ್ತೆ..! ಅದರಿಂದ ಉದ್ಯಮಶೀಲತೆಗೆ ಪ್ರೋತ್ಸಾಹ ಸಿಗುತ್ತೆ..! ಆಗ ಅವರು ಕಂಡುಹಿಡಿದಿದ್ದೇ ಈ “ಇಕೋ ಫ್ರೆಂಡ್ಲಿ ವಾಟರ್ ಕಾಯಿಲ್”..! ಸ್ಟವ್ ಸ್ಟಾಪ್ ಡಿವೈಸ್ ಹೊಂದಿರುವ ಈ ಕಾಯಿಲ್ ಮೂಲಕ ಒಂದೇ ಸಮಯದಲ್ಲಿ ಅಂದ್ರೆ ಏಕಕಾಲ ಅಥವಾ ಅಟ್ ಎ ಟೈಮ್ನಲ್ಲಿ ಆಹಾರ ಬೇಯಿಸಲು ನೀರನ್ನು ಕುದಿಸಬಹುದು +ಸ್ನಾನಕ್ಕೂ ಬಿಸಿ ನೀರನ್ನು ಸಂಗ್ರಹಿಸಬಹದು…!
ಗ್ಯಾಸ್ ಇವತ್ತು ದುಬಾರಿ ಆಗಿದ್ದು, ರೈತರು ಅನುಭವಿಸ್ತಾ ಇರೋ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವಲ್ಲಿಯೂ ಈ ತಂತ್ರಜ್ಞಾನ ಸಹಕರಿಸುತ್ತೆ ಎನ್ನುವ ಸಂತೋಷರ ಮಾತಿನಲ್ಲಿ ನಿಜಕ್ಕೂ ಅರ್ಥವಿದೆ..!
* ಎತ್ತಿನಗಾಡಿಗೆ ಬ್ರೇಕ್ ಸಿಸ್ಟಮ್ :
ಎತ್ತಿನಗಾಡಿಗೆ ಬ್ರೇಕ್ ಇದ್ಯಾ..?! ಇರ್ಲಿಲ್ಲ. ಬಟ್ ಈಗ ಸಂತೋಷ್ ಎತ್ತಿನಗಾಡಿಗೂ ಬ್ರೇಕ್ ಸಿಸ್ಟಮ್ ಪರಿಚಯಿಸಿದ್ದಾರೆ..! ಎತ್ತಿನಗಾಡಿಯಲ್ಲಿ ಎತ್ತನಿನ ಮೂಗಿಗೆ ಹಾಕಿದ ದಾರವನ್ನು ಎಳೆಯುತ್ತಾ ಗಾಡಿಯನ್ನು ನಿಲ್ಲಿಸುವುದು ಮತ್ತು ಚಲಿಸುವಂತೆ ಮಾಡುವುದನ್ನು ಎತ್ತಿನಗಾಡಿ ಹೊಡೆಯವಾಗ ಮಾಡ್ಬೇಕಾಗುತ್ತೆ..! ಆದ್ರೆ ಅದರಿಂದ ಎತ್ತನ್ನು ಹಿಂಸಿಸಿದಂತೆ ಅಲ್ಲವೇ..?! ಮತ್ತು ಇಳಿಜಾರಿನಲ್ಲಿ ಈ ಗಾಡಿಯನ್ನು ನಿಯಂತ್ರಿಸುವುದು ಕಷ್ಟ..! ಇದಕ್ಕಾಗಿಯೇ ಸಂತೋಷ್ ಬ್ರೇಕ್ ಸಿಸ್ಟಮ್ ಪರಿಚಯಿಸಿದ್ದಾರೆ..! ಚಾಲಕ 5 ಅಡಿ ಎತ್ರದಲ್ಲಿ ಕುಳಿತೂ ಕೂಡ ಎತ್ತಿನಗಾಡಿಯನ್ನು ನಿಯಂತ್ರಸ ಬಹುದು..!
ಬೆಳಿಗ್ಗೆ ಐದುಗಂಟೆಗೆ ಎದ್ದು ಹೊಲದ ಕೆಲಸವನ್ನು ಮಾಡಿ 10ಕಿ.ಮೀ ದೂರದ ಶಾಲೆಗೆ ನಡೆದುಕೊಂಡೇ ಹೋಗಿ ಬರ್ತಾ ಇದ್ದ ಸಂತೋಷ್, ರೈತರಿಗೆ ಅನುಕೂಲವಾಗುವ ಮೂರು ಪರಿಸರ ಸ್ನೇಹಿ ಯಂತ್ರಗಳನ್ನು ಆವಿಷ್ಕರಿಸುವ ಮೂಲಕ ಚಿಕ್ಕ ವಯಸ್ಸಲ್ಲಿಯೇ ಕ್ರೀಯಾಶೀಲ ಉದ್ಯಮಿಯಾಗಿ ಬೆಳೆಯುತ್ತಿದ್ದಾರೆ..! ನಾವು ಇವರಿಂದ ಇನ್ನೂ ಅನೇಕ ರೈತಪರ ತಂತ್ರಜ್ಞಾನವನ್ನು ನಿರೀಕ್ಷಿಸಬಹುದು..! ಇಷ್ಟೊಂದು ಭರವಸೆ ಮೂಡಿಸಿರೋ ಕನ್ನಡಿಗ ಸಂತೋಷ್ ಕಾವೇರಿ “ಅವಶ್ಯಕತೆಯೇ ಆವಿಷ್ಕಾರದ ತಾಯಿ” ಅನ್ನೋದನ್ನು ಸಾರಿದ್ದಾರೆ..! ಇವರು ಯುವಕರಿಗೆ ಸ್ಫೂರ್ತಿಯ ಚಿಲುಮೆ..! “ಸಂತೋಷ್ ಕಾವೇರಿ.. ನಿಮಗೊಂದು ಸಲಾಂ..!
- ಶಶಿಧರ ಡಿ ಎಸ್ ದೋಣಿಹಕ್ಲು
Source: allaboutbelgaum
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : [email protected]
atorvastatin uk order atorvastatin 20mg generic order lipitor 40mg sale