ಕುರುಕ್ಷೇತ್ರ ಸಿನಿಮಾ ಬಗ್ಗೆ ಕೊನೆಗು ಮೌನ ಮುರಿದ ದಾಸ..!!
ಇಂದು ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ತಮ್ಮ 42 ಹುಟ್ಟುಹಬ್ಬವನ್ನ ತೀರಾ ಸರಳವಾಗಿ ಆಚರಿಸಿಕೊಳ್ತಿದ್ದಾರೆ.. ನೆಚ್ಚಿನ ನಟನಿಗೆ ಶುಭಾಶಯ ತಿಳಿಸಲು ಅಭಿಮಾನಿಗಳು ಸಾಗರೋಪಾದಿಯಲ್ಲಿ ದಚ್ಚು ಮನೆಯ ಕಡೆ ಆಗಮಿಸುತ್ತಿದ್ದಾರೆ.. ದರ್ಶನ್ ಕೂಡ ಎಲ್ಲರಿಗು ದರ್ಶನ ನೀಡಿ ಕೈ ಕುಲುಕುವ ಮೂಲಕ ಸಂತಸ ಪಡುತ್ತಿದ್ದಾರೆ…
ಇನ್ನು ಇದೇ ಸಂದರ್ಭದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ದರ್ಶನ್ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಹೇಳಿಕೆ ನೀಡಿದ್ದಾರೆ.. ಈಗಾಗ್ಲೇ ಯಜಮಾನ ಸಿನಿಮಾ ರಿಲೀಸ್ ಗೆ ಸಿದ್ದವಾಗಿದೆ.. ಇತ್ತಕಡೆ ಕುರುಕ್ಷೇತ್ರ ಶೂಟಿಂಗ್ ಮುಗಿದು ವರ್ಷ ಕಳೆದ್ರು ಸಿನಿಮಾ ಮಾತ್ರ ತೆರೆಗೆ ಬರುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ.. ಈ ಬಗ್ಗೆ ದರ್ಶನ್ ಸ್ಪಷ್ಟನೆ ನೀಡಿದ್ದಾರೆ..
ಕುರುಕ್ಷೇತ್ರ ಚಿತ್ರದ ಗ್ರಾಫಿಕ್ಸ್ ಕೆಲಸಗಳು ಇನ್ನು ಬಾಕಿ ಇದೆ.. ಹೀಗಾಗೆ ಸಿನಿಮಾ ತಡವಾಗುತ್ತಿದೆ ಎಂದಿದ್ದಾರೆ.. ಅಷ್ಟೆ ಅಲ್ಲದೇ ಕುರುಕ್ಷೇತ್ರ ಜೊತೆಗೆ ಇದೇ ವರ್ಷ ಒಡೆಯ ಸಿನಿಮಾ ಸಹ ತೆರೆಗೆ ಬರಲಿದೆ ಎಂದಿದ್ದಾರೆ.. ಒಂದು ವರ್ಷದಿಂದ ಸುಮ್ಮನೆ ಕೂತಿದ್ದೆ.. ಹೀಗಾಗೆ ಈ ವರ್ಷ ನನ್ನ ಮೂರು ಚಿತ್ರಗಳು ಬಿಡುಗಡೆಗೊಳ್ಳಲ್ಲಿದೆ ಎನ್ನುವ ಮೂಲಕ, ತಮ್ಮ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ..