`ಟೀ' ಮಾರುತ್ತಿರುವ ಪದವೀಧರ ಸೋದರರ ಕಥೆ..!

Date:

ಆ ಮೂವರು ಸೋದರರು ಪದವೀಧರರು. ಪದವಿ ಮುಗಿದರೂ ಕೆಲಸಕ್ಕೆ ಅಲೆದಾಟ ತಪ್ಪಲಿಲ್ಲ..! ಅಣ್ಣನಿಗೆ ಕಾಲ್ಸೆಂಟರ್ ನಲ್ಲಿ ಸಿಕ್ಕ ಕೆಲಸ ತೃಪ್ತಿ ಸಿಗಲಿಲ್ಲ..! ಮೂವರೂ ಕೆಲಸಕ್ಕಾಗಿ ಕಷ್ಟಪಟ್ಟಿದ್ದು ಅಷ್ಟಿಷ್ಟಲ್ಲ..! ಕೆಲಸಕ್ಕೆ ಅಲೆದು ಅಲೆದು ಸಾಕಪ್ಪಾ ಸಾಕು ಅನಿಸಿದಾಗ ಈ ಸೋದರರು ಸ್ವಂತ ಉದ್ಯೋಗವನ್ನು ಮಾಡಲು ನಿರ್ಧರಿಸಿದ್ರು..! ದೊಡ್ಡ ಮೊತ್ತರ ಬಂಡವಾಳ ಹಾಕೋಕೆ ದುಡ್ಡು ಇರಲಿಲ್ಲ..! ಸಾಲ ಮಾಡಿಯಾದ್ರೂ ಸ್ವಲ್ಪ ದೊಡ್ಡ ಮೊತ್ತದ ಬ್ಯುಸ್ನೆಸ್ ಮಾಡಿದ್ರೂ ಕ್ಲಿಕ್ ಆಗದೇ ಇದ್ರೆ ಏನಪ್ಪಾ ಮಾಡೋದು ಅಂತ `ಹಾಸಿಗೆ ಇದ್ದಷ್ಟೇ ಕಾಲು ಚಾಚಿದ್ರು’..! ಯಾರು ಏನಂದರೂ ಚಿಂತೆಯಿಲ್ಲ ಅಂತ, ಹೇಳೋರ ಬಗ್ಗೆ ತಲೆಕೆಡಿಸಿಕೊಳ್ಳದೇ `ಟೀ ಮಾರೋಕೆ ಶುರುಮಾಡಿದ್ರು..! ಪದವೀಧರರಾಗಿ ಟೀ ಮಾರಾಟ ಮಾಡಿ ಜೀವನ ನಡೆಸಲು ಮುಂದಾದ ಈ ಸಹೋದರರ ಕಿರು ಪರಿಚಯವಿಲ್ಲಿದೆ..!
ಈ ಸೋದರರು ಲಕ್ನೋದವರು..! ಹೆಚ್ಚು ಕಡಿಮೆ 20 ವರ್ಷದ ಆಸುಪಾಸಿನವರು. ಪದವಿ ತಕ್ಕಂತೆ ಕೆಲಸ ಸಿಗಲಿಲ್ಲ..! ಕೆಲಸ ಸಿಗಲಿಲ್ಲ ಅಂತ ಸುಮ್ಮನೇ ಕೂರಲಾಗುತ್ತದೆಯೇ..?! ಹ್ಞೂಂ, ಹ್ಞೂಂ ಸಾಧ್ಯವಿಲ್ಲ..! ಉದ್ಯೋಗ ಬೇಕೇ ಬೇಕು..! ಆಗ ಹಿರಿಯ ಸೋದರ `ಗೋವಿಂದ್ ತ್ರಿಪಾಟಿ’ಯವರಿಗೊಂದು ಐಡಿಯಾ ಬರುತ್ತೆ..! ಕಂಪ್ಯೂಟರ್ ಅಪ್ಲಿಕೇಷನ್ ವಿಷಯದಲ್ಲಿ ಪದವಿ ಪಡೆದಿರುವ ಇವರು ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡ್ತಾ ಇದ್ರು. ಕೆಲಸ ಯಾಕೋ ಬೇಡ ಅನಿಸಿತು..! ತಾನೇ ಸ್ವಂತ ಉದ್ಯೋಗ ಮಾಡ್ಬೇಕೆಂದು ನಿರ್ಧರಿಸಿದ ಗೋವಿಂದ್ ತ್ರಿಪಾಟಿಗೆ ಹೊಳೆದಿದ್ದೇ `ಟೀ ಮಾರುವ’ ಐಡಿಯಾ..!
ಆಗ ಅವರ ಇಬ್ಬರು ಸೋದರರಾದ ಗೋಪಾಲ್ ಮತ್ತು ಮಾದವ್ ಕೂಡ ಕೆಲಸಕ್ಕೆ ಅಲೆಯುತ್ತಿದ್ದರು..! ಕೆಲಸಕ್ಕೆ ಅಲೆದು ಅಲೆದು ಬೇಜಾರಾಗಿದ್ದ ಅವರೂ ಅಣ್ಣನ ಜೊತೆ ಕೈ ಜೋಡಿಸಿದರು..!
ಇವತ್ತು ಈ ಮೂವರು ಸೋದರರು ತಮ್ಮದೇ ಟೀ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ..! ಎಲ್ಲಾ ಖರ್ಚುಗಳು ಹೋಗಿ 350-400 ರೂಪಾಯಿ ಉಳಿಸುತ್ತಿದ್ದಾರೆ..! ಕಾಲ್ ಸೆಂಟರ್ ಕೆಲಸಕ್ಕಿಂತ ಇದೇ ಕೆಲಸ ತೃಪ್ತಿ ತಂದಿದೆ ಅಂತಾರೆ ಹಿರಿಯ ಸೋದರ ಗೋವಿಂದ್ ತ್ರಿಪಾಟಿ.

  • ಶಶಿಧರ ಡಿ ಎಸ್ ದೋಣಿಹಕ್ಲು

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಟೀಕಿಸುವವರಿಗೆ ಟ್ಟೀಟರ್ ಲ್ಲಿ ಉತ್ತರ ಕೊಟ್ಟಿದ್ದಾರೆ ಮೋದಿ..! ತಮ್ಮನ್ನು ಟೀಕಿಸುವವರಿಗೆ ಪ್ರಧಾನಿಯ ಪ್ರತ್ಯುತ್ತರವೇನು..?!

ಪ್ರವಾಹದ ಮಧ್ಯೆಯೂ ರಾಜಕೀಯ ಬೇಕಿತ್ತಾ..? ಆಹಾರ ಪೊಟ್ಟಣಗಳ ಮೇಲೆ ಅಮ್ಮ ಸ್ಟಿಕ್ಕರ್ಸ್..!

ರಾಹುಲ್ ದ್ರಾವಿಡ್ ಒಳ್ಳೆಯ ಕ್ರಿಕೆಟಿಗ ಮಾತ್ರವಲ್ಲ. ಅವರೊಬ್ಬ ಆದರ್ಶ ವ್ಯಕ್ತಿ..!

`ಗ್ರಾಮೀಣ ಜನರಿಗಾಗಿ’ ಕೆಲಸ ಬಿಟ್ಟುಬಂದ ಇಂಜಿನಿಯರ್ಸ್..!

`ಕೊಹಿನೂರು ವಜ್ರ’ ಪಾಕಿಸ್ತಾನದ್ದಂತೆ..! `ಕೊಹಿನೂರು ವಜ್ರ’ದ ಮೇಲೂ ಬಿತ್ತು ಪಾಕ್ ಕಣ್ಣು..!

ಇವರು ನಮ್ಮ ಬೆಂಗಳೂರಿನ ತ್ಯಾಜ್ಯೋಧ್ಯಮಿ..! ಕಸ ಆಯುವಾತನಿಗೆ ವಿಶ್ವಸಂಸ್ಥೆಯಿಂದ ಕರೆ..!

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...