No menu items!
15.1 C
Munich
Wednesday, May 6, 2026

ನಾನು ಊರಲ್ಲಿಲ್ಲ ನನ್ನ ಫ್ಯಾನ್ಸ್ ನ ಕೆಣಕಲು ಬರಬೇಡಿ..! ಡಿಬಾಸ್ ವಾರ್ನಿಂಗ್

Must read

ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಫ್ಯಾನ್ ವಾರ್ ಬಹಳ ಜೋರಾಗಿಯೇ ಇದ್ದು ಕಿಚ್ಚ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ತಾರಕಕ್ಕೇರಿದೆ. ಇನ್ನು ಪೈಲ್ವಾನ್ ಚಿತ್ರದ ಬಿಡುಗಡೆಯ ನಂತರ ಪೈರಸಿ ವಿಚಾರವಾಗಿ ಈ ಇಬ್ಬರು ಅಭಿಮಾನಿಗಳ ನಡುವೆ ವಾದವಿವಾದಗಳು ಜೋರಾಗಿಯೇ ನಡೆಯುತ್ತಿವೆ. ಎರಡು ಅಭಿಮಾನಿ ಬಳಗಗಳು ಸಹ ಒಬ್ಬರ ಮೇಲೊಬ್ಬರು ವಾದ ವಿವಾದಗಳನ್ನು ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಡಿಕೊಳ್ಳುತ್ತಿದ್ದಾರೆ.

ಇನ್ನು ಈ ಫ್ಯಾನ್ ವಾರ್ ಬಗ್ಗೆ ಯಾವ ನಟರು ಸಹ ಪ್ರತಿಕ್ರಿಯೆ ನೀಡಿರಲಿಲ್ಲ ಆದರೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಟ್ವೀಟ್ ಒಂದನ್ನು ಮಾಡಿದ್ದು , ನಾನು ಬೆಂಗಳೂರಿನಲ್ಲಿ ಇಲ್ಲ ಶೂಟಿಂಗ್ನಲ್ಲಿ ಬ್ಯುಸಿ ಇದ್ದೇನೆ ಸದ್ಯಕ್ಕೆ ಕೇಳಿಬರುತ್ತಿರುವ ಕೆಲ ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು ನನ್ನ ಅನ್ನದಾತರು , ಸೆಲೆಬ್ರಿಟಿಗಳನ್ನು ಕೆಣಕುವುದು ಅಥವಾ ಪ್ರಚೋದಿಸುವುದು ಮಾಡಬೇಡಿ ಎಂದು ವಾರ್ನ್ ಮಾಡಿದ್ದಾರೆ. ದರ್ಶನ್ ಅವರ ಈ ಟ್ವೀಟ್ ಪ್ರಕಾರ ಸೆಲೆಬ್ರಿಟಿಗಳು ಎಂದರೆ ಅವರ ಅಭಿಮಾನಿಗಳು ಹೌದು ಈ ಹಿಂದೆ ಸೆಲೆಬ್ರಿಟಿ ಚಾಲೆಂಜ್ ಎಂದು ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿ ಎಂದು ಕರೆದಿದ್ದರು. ಈ ಮೂಲಕ ದರ್ಶನ್ ಅವರು ತಮ್ಮ ಅಭಿಮಾನಿಗಳ ತಂಟೆಗೆ ಯಾರೂ ಬರಬೇಡಿ ಎಂದು ಟಾಂಗ್ ನೀಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article