ಪ್ರತಿಕಾರ ತೀರಿಸಿಕೊಂಡ ಸೇನೆ: ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಫಿನಿಷ್…
ನಮ್ಮ 40 ಸಿಆರ್ ಪಿಎಫ್ ಯೋಧರನ್ನ ಬಲಿ ಪಡೆದ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್, ಯೋಧರ ಹತ್ಯೆಗೆ ಸಂಚು ರೂಪಿಸಿದ್ದ ಜೈಷ್ ಇ ಮೊಹಮ್ಮದ್ ಸಂಘಟನೆಯ ಕಮಾಂಡರ್ ಆದ ಅಬ್ದುಲ್ ರಶೀದ್ ಘಜಿ ಯನ್ನ ಭಾರತ ಸೇನೆ ಯೋಧರು ಇಂದು ಹತ್ಯೆಗೈದು ಸೇಡನ್ನ ತೀರಿಸಿಕೊಂಡಿದ್ದಾರೆ…
ಇಡೀ ದೇಶವೇ ಹುತಾತ್ಮ ಯೋಧರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಬೇಡಿಕೆ ಇಟ್ಟಿತ್ತು.. ಕಳೆದ ರಾತ್ರಿ ಅಬ್ದುಲ್ ರಶೀದ್ ಘಾಜಿ ಮತ್ತು ಕಮ್ರಾನ್ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಪಿಂಗ್ಲಾನ್ ಪ್ರದೇಶದ ಮನೆಯೊಂದರಲ್ಲಿ ಅಡಗಿ ಕುಳಿತಿದ್ದರು.ಈ ಬಗ್ಗೆ ಗುಪ್ತಚರ ವಿಭಾಗದ ಅಧಿಕಾರಿಗಳು ನೀಡಿದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ರಾಷ್ಟ್ರೀಯ ರೈಫಲ್ಸ್ 55 ಯೋಧರು ಶರಣಾಗುವಂತೆ ಉಗ್ರರಿಗೆ ಸೂಚಿಸಿದರು.