No menu items!
12.4 C
Munich
Wednesday, April 29, 2026

ಯೋಧ ಗುರುವಿನ ಮನೆಗೆ ಭೇಟಿ ನೀಡಿ ಕಣ್ಣೀರಿಟ್ಟ ನಟಿ ಹರಿಪ್ರಿಯ

Must read

ಹುತಾತ್ಮ ಗುರು ಅವರ ಮನೆಗೆ ಇಂದುಬೆಲ್ ಬಾಟಮ್ಚಿತ್ರ ತಂಡ ಸಹಾಯ ಧನ ನೀಡಿ ಅವರ ತಾಯಿ, ಪತ್ನಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಗುರು ಮನೆಯವರ ದುಃಖ ನೋಡಿ, ತಂದೆಯ ಸಾವನ್ನು ನೆನೆಪಿಸಿಕೊಂಡು ನಟಿ ಹರಿಪ್ರಿಯಾ ಕಣ್ಣೀರು ಹಾಕಿದ್ದಾರೆ.

ಕುಟುಂಬದಲ್ಲಿ ಯಾರನ್ನೇ ಕಳೆದುಕೊಂಡರು ಎಷ್ಟು ನೋವಾಗುತ್ತದೆ ಎಂಬುದು ನನಗೆ ತಿಳಿದಿದೆ. ಯಾಕೆಂದರೆ ಆ ನೋವು ನಮ್ಮ ತಂದೆಯನ್ನು ಕಳೆದುಕೊಂಡಾಗ ನನಗೂ ಆಗಿದೆ. ಆದರೆ ಯೋಧ ಗುರು ಅವರ ಪತ್ನಿ, ತಾಯಿ ನೋಡಿದರೆ ನನಗೆ ತುಂಬಾ ಸಂಕಟವಾಗುತ್ತಿದೆ. ಹೀನ ಕೃತ್ಯ ಎಸಗಿರುವ ಉಗ್ರರಿಗೆ ಆದಷ್ಟು ಬೇಗ ಉತ್ತರ ಕೊಟ್ರೆ ದೇಶದ ಜನ ಖುಷಿ ಆಗುತ್ತಾರೆ ಎಂದರು.ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿಯ ಗುಡಿಗೆರೆ ವೀರಯೋಧ ಗುರು ಸಮಾಧಿಗೂ ಬೆಲ್ಬಾಟಂ ಚಿತ್ರ ತಂಡ ಭೇಟಿ ನೀಡಿ ಗೌರವ ವಂದನೆ ಸಲ್ಲಿಸಿತು. ಬಳಿಕ ನಿರ್ಮಾಪಕ ಸಂತೋಷ್ ಕುಮಾರ್ 25 ಸಾವಿರ ರೂ. ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು 50 ಸಾವಿರ ರೂ. ಚೆಕ್ ವಿತರಿಸಿದ್ರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article