ರೈನಾ ಬ್ಯಾಟಿಂಗ್ ಹೊಗಳಿದ ಆರ್‌ಸಿಬಿ ಆಟಗಾರನಿಗೆ ಫ್ಯಾನ್ಸ್ ಪಾಠ

Date:

 

ಇಂಡಿಯನ್ ಪ್ರೀಮಿಯರ್ ಲೀಗ್ ಸಮಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಕಿತ್ತಾಡುವಷ್ಟು ಬೇರೆ ಯಾವುದೇ ತಂಡಗಳ ಅಭಿಮಾನಿಗಳು ಸಹ ಕಿತ್ತಾಡುವುದಿಲ್ಲ ಎನಿಸುತ್ತದೆ. ಎರಡೂ ತಂಡಗಳ ನಡುವೆ ಪಂದ್ಯವಿದ್ದಾಗ ಮಾತ್ರವಲ್ಲದೆ ಇತರೆ ಐಪಿಎಲ್ ತಂಡಗಳ ಪಂದ್ಯಗಳ ಸಮಯದಲ್ಲಿಯೂ ಸಹ ಬೆಂಗಳೂರು ಮತ್ತು ಚೆನ್ನೈ ತಂಡಗಳ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕಾಲೆಳೆಯುವುದರಲ್ಲಿ ತೊಡಗಿರುತ್ತಾರೆ.

ಇದೀಗ ಅಂತಹದ್ದೇ ಘಟನೆ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎರಡನೇ ಪಂದ್ಯದ ವೇಳೆ ನಡೆದಿದೆ. ಶನಿವಾರ ನಡೆದ ಈ ಬಾರಿಯ ಐಪಿಎಲ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಡಿದವು. ಚೆನ್ನೈ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಚೆನ್ನೈ ತಂಡ 2.1 ಓವರ್‌ಗಳಲ್ಲಿ ಕೇವಲ 7 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಜತೆಯಾದ ಮೊಯಿನ್ ಅಲಿ ಮತ್ತು ಸುರೇಶ್ ರೈನಾ ತಂಡವನ್ನು ಉತ್ತಮ ಸ್ಥಿತಿಯತ್ತ ತಂದರು. 15.1 ಓವರ್‌ಗಳವರೆಗೂ ಉತ್ತಮ ಬ್ಯಾಟಿಂಗ್ ಮಾಡಿದ ರೈನಾ 36 ಎಸೆತಗಳಿಗೆ 54 ರನ್ ಬಾರಿಸಿದರು.

 

ಸುರೇಶ್ ರೈನಾ ಅವರ ಈ ಇನ್ನಿಂಗ್ಸ್ ನೋಡಿ ಬೆಂಗಳೂರು ತಂಡದ ಆಟಗಾರ ಸಚಿನ್ ಬೇಬಿ ಟ್ವಿಟರ್ ಮೂಲಕ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. “ಚಿನ್ನ ತಲಾ ಸುರೇಶ್ ರೈನಾ ವಾಟ್ ಎ ಕಮ್ ಬ್ಯಾಕ್ ವೆಲ್ ಪ್ಲೇಯ್ಡ್” ಎಂದು ಟ್ವಿಟರ್ ಮೂಲಕ ಸಚಿನ್ ಬೇಬಿ ಸುರೇಶ್ ರೈನಾ ಅವರ ಆಟವನ್ನು ಕೊಂಡಾಡಿದ್ದಾರೆ. ಸಚಿನ್ ಬೇಬಿ ಅವರ ಈ ಟ್ವೀಟ್ ಗೆ ರಿಪ್ಲೈ ಮಾಡಿರುವ ಕೆಲಸ ಆರ್‌ಸಿಬಿ ಅಭಿಮಾನಿಗಳು ಮೊದಲು ಆರ್ ಸಿಬಿ ಪಂದ್ಯಗಳ ಕಡೆ ಗಮನ ಕೊಡಿ ಎಂದು ಸಚಿನ್ ಬೇಬಿಗೆ ಕೌಂಟರ್ ನೀಡಿದ್ದಾರೆ.

 

 

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...