No menu items!
33.2 C
Munich
Friday, August 14, 2026

ಸಿದ್ದರಾಮಯ್ಯಗೆ ನಡುಕ ಹುಟ್ಟಿಸಿತಾ ಮೈತ್ರಿ ಪಾದಯಾತ್ರೆ: ಕೊಪ್ಪಳ, ವಿಜಯನಗರ ದಿಢೀರ್ ರದ್ದು ಮಾಡಿದ್ಯಾಕೆ!?

Must read

 

ಬೆಂಗಳೂರು:- ವಾಲ್ಮೀಕಿ ಬೃಹತ್ ಬಹುಕೋಟಿ, ಹಾಗೂ ಮುಡಾ ಹಗರಣದ ವಿರುದ್ಧ ಮೈತ್ರಿ ನಾಯಕರು ಪಾದಯಾತ್ರೆ ಮಾಡುತ್ತಿದ್ದು, ಇದು ಕೊಂಚ ಸಿದ್ದರಾಮಯ್ಯರ ನೆಮ್ಮದಿ ಕೆಡಿಸಿತಾ ಎನ್ನಲಾಗಿದೆ. ಅಲ್ಲದೇ ನಿಗದಿಯಾಗಿದ್ದ ಕೊಪ್ಪಳ, ವಿಜಯನಗರ ದಿಢೀರ್ ರದ್ದು ಮಾಡಿದ್ದಾರೆ.

ಮಂಗಳವಾರ ಕೊಪ್ಪಳ ಹಾಗೂ ವಿಜಯನಗರದಲ್ಲಿ ಸಿದ್ದರಾಮಯ್ಯ ಪ್ರವಾಸ ನಿಗದಿಯಾಗಿತ್ತು. ಭರ್ಜರಿ ಮಳೆಯಿಂದ ಭರ್ತಿಯಾದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಸಿಎಂ ಬಾಗಿನ ಅರ್ಪಿಸಬೇಕಿತ್ತು.

ಈ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಚೇರಿ ದೃಢಪಡಿಸಿತ್ತು. ಆದರೆ ಮುಖ್ಯಮಂತ್ರಿಗಳು ಬರುವುದಕ್ಕೆ ಒಂದು ದಿನಕ್ಕೆ ಮೊದಲೇ ಕಾರ್ಯಕ್ರಮ ಮುಂದೂಡಿಕೆಯಾಗಿದೆ. ತಾತ್ಕಾಲಿಕವಾಗಿ ಸಿಎಂ ಕಾರ್ಯಕ್ರಮ ಮುಂದೂಡಿಕೆಯಾದ ಬಗ್ಗೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

- Advertisement -spot_img

More articles

- Advertisement -spot_img

Latest article