ಹಳ್ಳಿಯಿಂದ ನಗರದ ಕಡೆ ಮಗ ಹೋದ್ರೆ ಅಂದ್ರೆ ಸಾಕು ಮಗ ನಗರಕ್ಕೆ ಹೋಗವ್ನೆ ಇನ್ನು ನಮ್ಮ ಕಷ್ಟಗಳನ್ನೆಲ್ಲಾ ತೀರುಸ್ತಾನೆ ಅಂತ ದೊಡ್ಡ ದೊಡ್ಡ ಕನಸ್ ಗಳನ್ನ ಕಟ್ಕೊಂಡು ಮಗನ ಮೇಲೆ ನಿರೀಕ್ಷೆಯ ಭಾರವನ್ನೆ ಇಟ್ಕೊಂಡಿರ್ತಾರೆ. ಆದ್ರೆ ಹಳ್ಳಿಯ ಜೀವನಕ್ಕೂ ನಗರ ಜೀವನಕ್ಕೂ ಭಾರಿ ವ್ಯತ್ಯಾಸ ಇದೆ ಅನ್ನೋದನ್ನ ಅಲ್ಲಿನ ಪರಿಸ್ಥತಿಯನ್ನ ಅರ್ಥ ಮಾಡಿಕೊಂಡೋವ್ನಿಗೆ ಗೊತ್ತಾಗೋದು..!. ನಗರದಲ್ಲಿ ಎಲ್ಲಾ ಕನಸುಗಳನ್ನು ಬದಿಗೊತ್ತಿ ಕೇವಲ ಯಾಂತ್ರಿಕ ಮನುಷ್ಯರಾಗಿ ಬಾಳ್ಬೇಕು ಅಷ್ಟೆ.. ಅಂತಹ ಯಾಂತ್ರಿಕ ನಗರಗಳಲ್ಲಿ ದೇಶದ ವಾಣಿಜ್ಯ ನಗರಿ ಮುಂಬೈ ಕೂಡ ಒಂದು..! ಜೀವನದ ಪಾಠ ಕಲೀಬೇಕಂದ್ರೆ ಒಮ್ಮೆ ಮುಂಬೈಗೆ ಹೋಗು ಅಂತ ಹಿರಿಯರು ಹೇಳಿದ್ದು ಸುಳ್ಳಲ್ಲ ಅನ್ನೋದು.. ಈ ಎರಡೂವರೆ ನಿಮಿಷದ ವಿಡಿಯೋ ಮೂಲಕ ತಿಳಿಯುತ್ತೆ..! ಈ ವಿಡಿಯೋದಲ್ಲಿ ದೃಶ್ಯೀಕರಿಸಿರುವಂತೆ ಮುಂಬೈನ ರೈಲುಗಳಲ್ಲಿ ಪ್ರತಿ ನಿತ್ಯದ ಸತ್ಯ ಸಂಗತಿಯನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ಜೀವನಕ್ಕಾಗಿ ಪ್ರತಿ ನಿತ್ಯ ಓಡಾಟ.. ದೊಡ್ಡ ಕನಸನ್ನು ಹೊತ್ತು ಇನ್ನೆಲ್ಲಿಗೋ ಪ್ರಯಾಣ.. ಮನ ಶಾಂತಿಗಾಗಿ ದೇವರ ಜಪ.. ಪ್ರೀತಿ, ಸ್ನೇಹ, ಸಂಬಂಧಗಳು. ಹೀಗೆ ಹತ್ತು ಹಲವು ಕೊಂಡಿಗಳನ್ನ ಒಂದೇ ಸ್ಥಳದಲ್ಲಿ ಕಾಣ್ಬೋದು ಅನ್ನೋದನ್ನ ಒಂದು ಕಿರು ಚಿತ್ರದ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದಾರೆ.. ಅದನ್ನ ನೀವು ಒಮ್ಮೆ ನೋಡಿ ಶೇರ್ ಮಾಡಿ..
Video :
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಯುವತಿಯನ್ನು ನುಂಗಿದ ಮೊಸಳೆ..! ಅದರ ಅಸಲಿ ಕಥೆ ಏನು ಗೊತ್ತಾ..?
ಡ್ರೆಸ್ ಬಗ್ಗೆ ಕಮೆಂಟ್: ಗಂಡನ ಎದುರೆ ನಡೀತು ಪತ್ನಿಗೆ ಹಲ್ಲೆ..!
ಆವಲಬೆಟ್ಟ ಫೇಮಸ್ ಸ್ಪಾಟ್ಗೆ ಭೇಟಿ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ಮೋದಿಗೆ ಪತ್ರ ಬರೆದು ಜಿಲ್ಲಾಡಳಿತಕ್ಕೆ ಶಾಕ್ ಕೊಟ್ಟ ನಮನ.! ಪತ್ರದಲ್ಲೇನಿತ್ತು.?