ಶಾರುಖ್, ರಣಬೀರ್ ಒಬ್ಳನ್ನೆ ಲವ್ ಮಾಡ್ತಾರಂತೆ..!

Date:

ಒಬ್ರು ಬಾಲಿವುಡ್ ಬಾಕ್ಸ್ ಅಫೀಸ್ ಸುಲ್ತಾನ್, ಮತ್ತೊಬ್ಬ ಬಾಲಿವುಡ್ ಚಾಕೊಲೇಟ್ ಹೀರೋ ಇಬ್ಬರೂ ಹುಡುಗಿಯರ ಮನಕದ್ದ ರಸಿಕರು.. ಹು ಅಂದ್ರೆ ಹುಡುಗಿರು ಕ್ಯೂ ನಿಲ್ತಾರೆ ಅಂಥದ್ರಲ್ಲಿ ಒಬ್ಳನ್ನೇ ಲವ್ ಮಡೋ ಹಣೆಬರಹ ಇವ್ರಿಗೇನ್ ಬಂತಪ್ಪ ಅಂತ ಅನ್ನಿಸಿರ್ಬೇಕು ಅಲ್ವಾ..

ಇವ್ರಿಗೆ ಲವ್ ಮಾಡೋಕೆ ಬೇರೆ ಹುಡ್ಗಿರೇ ಸಿಕ್ಕಿರಲ್ವಾ ಅಥವ ಒಬ್ಬಳ್ಳನೇ ಇಬ್ಬರು ಲವ್ ಮಾಡೋ ಅಂಥ ಸುಂದರೀನಾ ಅಂಥಾ ಡೌಟ್ ಕಾಡ್ತಿರ್ಬೇಕು ಅಲ್ವಾ.. ಹೌದು ಕಣ್ರಿ ಈ ಸುಂದ್ರಿ ಕೇವಲ ಪಡ್ಡೆ ಹುಡುಗರ ಮನಸ್ಸು ಮಾತ್ರ ಕದಿಲಿಲ್ಲ, ಬಾಲಿವುಡ್ ಸ್ಟಾರ್ ನಟರು ಸೇರಿದಂತೆ ಹಾಲಿವುಡ್ ಹಿರೋಗಳು ಈಕೆಯ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.. ಯಾವ ದೇಶದ ಬೆಡಗಿಯರಿಗೂ ಕಮ್ಮಿ ಇಲ್ಲದಂತಹ ಮೈಮಾಟ ಈಕೆಯದ್ದು..

ಶಾರುಖ್‍ಗೆ ಆಲ್‍ರೆಡಿ ಮದ್ವೆ ವಯಸ್ಸಿಗೆ ಬಂದಿರೋ ಮಗ್ಳಿದ್ದಾಳೆ ಈಗ ಯಕಪ್ಪಾ ಬೇಕಿತ್ತು ಈ ಪ್ರಿತಿಪ್ರೇಮ ಅಲ್ವಾ..ರಣಬೀರ್ ಅಂತೂ ಮಲ್ಲ ಬಾಲಿವುಡ್ ಹುಡುಗಿಯರಲ್ಲಿ ಯಾರನ್ನ ಪ್ಲರ್ಟ್ ಮಾಡಿಲ್ಲ, ಲವ್ ಮಾಡಿಲ್ಲ ಅಂತಾ ಕೇಳಿದ್ರೆ ಒಂದೆರಡು ಅನ್ನಹುದು ಅಷ್ಟೆ! ಯಾವ್ದೂ ಸಿನಿಮಾದ ಕತೆ ತರ ಇದೆಯಲ್ಲ ಅನ್ನಿಸ್ತಿರ್ಬೇಕು ಅಲ್ವಾ.. ಹೌದು ಕರಣ್ ಜೊಹಾರ್ ನೆಸ್ಟ್ ಪ್ರಾಜೆಕ್ಟ್ ಈ ಇಬ್ಬರು ನಾಯಕರ ಜೊತೆಯಂತೆ ಅದು ಒಂದೇ ಮೂವಿಯಲ್ಲಿ ಸ್ಟಾರ್ ನಟರು ಕಾಣಿಸಿಕೊಳ್ಳಲ್ಲಿದ್ದಾರಂತೆ..

ಇಬ್ಬರು ಅಣ್ಣತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ದೀಪಿಕಾಪಡುಕೊಣೆ ಮತ್ತು ಕತ್ರಿನಾ ಕೈಫ್ ಇಬ್ಬರ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಚಿತ್ರದ ವಿಶೇಷ ಏನಪ್ಪಾ ಅಂದ್ರೆ ಇಬ್ಬರು ಒಬ್ಬಳನ್ನೆ ಲವ್ ಮಾಡ್ತಿರೊದು. ಆದ್ರೆ ಇಬ್ಬರು ಬೆಡಗಿಯರಲ್ಲಿ ಲೀಡ್ ರೋಲ್‍ನಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಡೌಟ್.. ರಣಬಿರ್ ಕಪೂರ್ ಈಗಾಗಲೇ ಇಬ್ಬರು ನಾಯಕಿಯರ ಜೊತೆ ಲವ್, ಡೇಟಿಂಗ್, ರೋಮ್ಯಾನ್ಸ್ ಕುಚ್ಚ್ ಕುಚ್ಚ್ ನಡೆದಿದ್ದು ಗೊತ್ತೇ ಇದೆ.
ಕ್ಯಾಟ್ ಬಿ-ಟೌನ್‍ಗೆ ಕಾಲಿಟ್ಟಿದ್ದೆ ದೀಪಿಕಾಳ ಜೊತೆ ರಣಬೀರ್ ಬ್ರೇಕ್ ಅಪ್ ಮಾಡ್ಕೊಂಡು ಕತ್ರಿನಾಳ ಹಿಂದೆ ಸುತ್ತಾಡ್ತಾರೆ ಸದ್ಯ ಕತ್ರಿನಾಳಿಂದಲೂ ದೂರ ಉಳಿದು ಒಂಟಿಯಾಗಿರುವ ರಣಬೀರ್‍ಗೆ ಈ ಚಿತ್ರದಿಂದ ಮತ್ತೆ ದೀಪಿಕಾ ಅಥವಾ ಕತ್ರಿನಾ ರೋಮ್ಯಾನ್ಸ್ ಮಡ್ತಾರಾ ನೊಡ್ಬೇಕಿದೆ..

  • ಹಾಲೇಶ್ ಎಂಎಸ್ ಹುಣಸನಹಳ್ಳಿ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಸತ್ರೂ ಲವ್ ಮ್ಯಾರೇಜ್ ಆಗಲ್ವಂತೆ ಈ ನಟಿ.

ಶುಭ ಶುಕ್ರವಾರದಂದು ತೆರೆಗೆ ಬರಲಿದೆ ಕುಳ್ಳನ ಚೌಕ

ಬಜೆಟ್-2017: ಯಾವುದು ತುಟ್ಟಿ, ಯಾವುದು ಅಗ್ಗ..?

ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ

ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?

ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

Share post:

Subscribe

spot_imgspot_img

Popular

More like this
Related

ನಟ ದರ್ಶನ್‌ ಶಸ್ತ್ರಾಸ್ತ್ರ ಪರವಾನಗಿ ಅಮಾನತ್ತಿನಲ್ಲಿಟ್ಟ ಪೊಲೀಸರ ಕ್ರಮಕ್ಕೆ ಹೈಕೋರ್ಟ್‌ ತಡೆ

ನಟ ದರ್ಶನ್‌ ಶಸ್ತ್ರಾಸ್ತ್ರ ಪರವಾನಗಿ ಅಮಾನತ್ತಿನಲ್ಲಿಟ್ಟ ಪೊಲೀಸರ ಕ್ರಮಕ್ಕೆ ಹೈಕೋರ್ಟ್‌ ತಡೆ ಬೆಂಗಳೂರು:...

ಶಾಲೆಗಳಲ್ಲಿ ಮೊಬೈಲ್ ಬ್ಯಾನ್ ವಿಚಾರ ಚರ್ಚೆಯಲ್ಲಿದೆ: ಡಿ.ಕೆ. ಶಿವಕುಮಾರ್

ಶಾಲೆಗಳಲ್ಲಿ ಮೊಬೈಲ್ ಬ್ಯಾನ್ ವಿಚಾರ ಚರ್ಚೆಯಲ್ಲಿದೆ: ಡಿ.ಕೆ. ಶಿವಕುಮಾರ್ ಬೆಂಗಳೂರು: “ಶಾಲೆಗಳಲ್ಲಿ ಮೊಬೈಲ್...

ಬೆಂಗಳೂರು ತಾಪಮಾನ 39 ಡಿಗ್ರಿಗೆ ಏರಿಕೆ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು ತಾಪಮಾನ 39 ಡಿಗ್ರಿಗೆ ಏರಿಕೆ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ ಬೆಂಗಳೂರು:...

ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರು ಮಂತ್ರಾಲಯಕ್ಕೆ ಭೇಟಿ

ಪ್ರತಿ ವರ್ಷ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ...