ರಾಜ್ಯ ಸರ್ಕಾರ ಕಲ್ಲಡ್ಕ ಪ್ರಭಾಕರ ಭಟ್ಟರ ಶ್ರೀರಾಮ ವಿದ್ಯಾಕೇಂದ್ರದ ಶಾಲೆಗೆ ಅನ್ನದಾನದ ಅನುದಾನ ಬರೋದು ನಿಲ್ಲುವಂತೆ ಮಾಡಿದ್ದು ಹಳೇ ಸುದ್ದಿ. ಆದರೆ, ಈಗ ಇಲ್ಲಿನ ವಿದ್ಯಾರ್ಥಿಗಳು ಸರ್ಕಾರಕ್ಕೆ ಸವಾಲು ಎಸೆದಿದ್ದಾರೆ..! ತಮ್ಮ ಬಿಸಿಯೂಟಕ್ಕೆ ತಾವೇ ಭತ್ತ ಬೆಳೆಯಲಾರಂಭಿಸಿದ್ದಾರೆ..!
ಸ್ವಾವಲಂಭಿಗಳಾಗಿರುವ ವಿದ್ಯಾರ್ಥಿಗಳು ಸುಮಾರು 7 ಎಕರೆ ಜಾಗದಲ್ಲಿ ಪೈರು ನೆಟ್ಟಿದ್ದರು. ಇದೀಗ ಅದರ ಫಸಲು ಸಿಕ್ಕಿದೆ..! ತಾವೇ ಅದರ ಕಟಾವು ಮಾಡಿದ್ದು, ಸುಮಾರು 20 ಕ್ವಿಂಟಾಲ್ ಭತ್ತ ಬೆಳೆದಿದ್ದಾರೆ. ಈ ಮೂಲಕ ತಮ್ಮ ಬಿಸಿಯೂಟಕ್ಕೆ ತಾವೇ ಅಕ್ಕಿಯನ್ನು ಸಿದ್ಧಮಾಡಿಕೊಂಡಿದ್ದಾರೆ. ಹುಲ್ಲನ್ನು ಅಲ್ಲಿನ ಜಾನುವಾರುಗಳಿಗೆ ಬಳಸುತ್ತಿದ್ದಾರೆ.