ಪ್ರೀ-ವೆಡ್ಡಿಂಗ್ ಶೂಟ್ ಗೆ ತೆರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ವರ, ವಧು ಮತ್ತು ಮಾನಾಸಿಕ ಅಸ್ವಸ್ಥ ಮಹಿಳೆ ಮೃತಪಟ್ಟಿರೋ ಘಟನೆ ಹಾಸನದ ಆಲೂರು ತಾಲೂಕಿನ ಪಾಳ್ಯ ಬಳಿ ನಡೆದಿದೆ.
ರಾಧಿಕ (25) ಮತ್ತು ಸುಪ್ರೀತ್ (27) ದಾಂಪತ್ಯಕ್ಕೆ ಕಾಲಿಡೋ ಮುನ್ನ ಇಹಲೋಕದ ಯಾತ್ರೆ ಮುಗಿಸಿದ ದುರ್ದೈವಿಗಳು.
ಫೆಬ್ರವರಿ 5 ರಂದು ಮದುವೆ ನಡೆಯಬೇಕಿತ್ತು. ಈ ಹಿನ್ನೆಲೆಯಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಗೆ ಹೋಗುತ್ತಿದ್ದರು. ಹಾಸನದ ಶೆಟ್ಟಿಹಳ್ಳಿ ಚರ್ಚ್ ಬಳಿ ಫೋಟೋ ಶೂಟ್ ಮುಗಿಸಿ ಮಂಜ್ರಾಬಾದ್ ಕೋರ್ಟ್ ಕಡೆಗೆ ಹೋಗ್ತಿದ್ರು. ಈ ವೇಳೆ ಎನ್ ಎಚ್ 75 ರಲ್ಲಿ ಅಸ್ವಸ್ಥ ಮಹಿಳೆಯೊಬ್ಬರು ಅಡ್ಡ ಬಂದಿದ್ದಾರೆ. ಆಕೆಗೆ ಡಿಕ್ಕಿ ಹೊಟೆಯೋದನ್ನು ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಈ ವೇಳೆ ವಧು ರಾಧಿಕ ಮತ್ತು ಮಾನಸಿಕ ಅಸ್ವಸ್ಥ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕ್ಯಾಮರಮನ್ ಮತ್ತು ಚಾಲಕಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ. ವರ ಸುಪ್ರೀತ್ ಮತ್ತು ವಧುವಿನ ತಾಯಿಯನ್ನು ಸಹ ಆಸ್ಪತ್ರೆಗೆ ಸೇರಿಸಲಾಗಿತ್ತು.ತಾಯಿ ಚಿಕಿತ್ಸೆ ಪಡೆಯುತ್ತಾದೆ. ವರ ಸುಪ್ರೀತ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.