No menu items!
11.7 C
Munich
Friday, May 1, 2026

ಪತಿಯನ್ನು‌ ಕೊಂದು ಆ್ಯಕ್ಸಿಡೆಂಟ್ ಅಂತ ಬಿಂಬಿಸಿದ್ಲು…!

Must read

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಹೊರವಲಯದಲ್ಲಿ ಜೂ‌ 1 ರಂದು ಅಪರಿಚಿತ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಅದು ಅಪಘಾತ ಎನ್ನಲಾಗಿತ್ತು. ಆದರೆ , ಅಸಲಿಗೆ ಅದು ಅಪಘಾತವಲ್ಲ ಕೊಲೆ…!
ಇದು ಅಪಘಾತವಲ್ಲ ಕೊಲೆ ಎಂಬುದು ಗ್ರಾಮಸ್ಥರ ಶಂಕೆಯಾಗಿತ್ತು. ಅದರ ಬೆನ್ನತ್ತಿದೆ ಪೊಲೀಸರಿಗೆ ಗ್ರಾಮಸ್ಥರ ಶಂಕೆ ಸತ್ಯ ಎಂಬುದು ತಿಳಿಯಿತು.
ನಿವೃತ್ತ ಸೈನಿಕ ಪ್ರಕಾಶ್ ಶಂಕರ್ ಈಟಿ ಅವರು ಮೃತರು. ಇವರ ಸಾವಿಗೆ ನ್ಯಾಯ ಕೊಡಿಸುವಂತೆ ಪತ್ನಿ ಶ್ರೀದೇವಿ ಈಟಿ ಚಿಕ್ಕೋಡಿ ಸಂಚಾರಿ ಠಾಣೆಗೆ ದೂರು ಸಹ ನೀಡಿದ್ದಳು.


ಪ್ರಕರಣ ಬೇಧಿಸಿದಾಗ ಈ ಶ್ರೀದೇವಿಯೇ ತನ್ನ ಪತಿ ಪ್ರಕಾಶ್ ‌ನನ್ನು ಕೊಲೆಗೈದಿದ್ದು ಎಂದು ತಿಳೀತು.
ಈಕೆ ಸಂತೋಷ್ ಎಂಬುವವನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಪತಿ ಪ್ರಕಾಶನ ಕೊಲೆಗೆ ತಾನೇ ಸುಫಾರಿ ಕೊಟ್ಟು ಆಕ್ಸಿಡೆಂಟ್ ನಾಟಕವಾಡಿದ್ದಳು.
ಇದೀಗ ಎಲ್ಲವೂ ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀದೇವಿ, ಸಂತೋಷ್, ಮಹೇಶ್ , ಬರಮು ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article