ಮಾಧ್ಯಮ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ 500ಕ್ಕೂ ಹೆಚ್ಚು ಮಂದಿ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಫಸ್ಟ್ ನ್ಯೂಸ್ ನ ಪ್ರಧಾನ ಸಂಪಾದಕರಾದ ಎಸ್. ಎಚ್ ಮಾರುತಿ, ಮೆಟ್ರೋ ವಿಭಾಗದ ಮುಖ್ಯಸ್ಥ, ಸೀನಿಯರ್ ಆ್ಯಂಕರ್ ಸೋಮಣ್ಣ ಮಾಚಿಮಾಡ, ಸುವರ್ಣ ನ್ಯೂಸ್ ನ ನಿರೂಪಕಿ ಸುಗುಣ, ಟಿವಿ9 ನ ನಾರಯಣ ಸ್ವಾಮಿ, ನಿರೂಪಕ ಗೌರೀಶ್ ಅಕ್ಕಿ, ವೇಳೆ ವಿಜಯ ಕರ್ನಾಟಕದ ಸುದರ್ಶನ್ ಚನ್ನಂಗಿಹಾಳ್ , ನಟರಾದ ಸುದೀಪ್, ರಮೇಶ್ ಅರವಿಂದ್, ಸೃಜನ್ ಲೋಕೇಶ್ ಸೇರಿದಂತೆ ನಾನಾ ಸಾಧಕರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಪ್ರಶಸ್ತಿ ಪುರಸ್ಕೃತರು :
ನಟರಾದ ಸುದೀಪ್, ರಮೇಶ್ ಅರವಿಂದ್, ಸೃಜನ್ ಲೋಕೇಶ್
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಕೃಷಿ ತಜ್ಞ ಡಾ.ಮಹದೇವಪ್ಪ, ಅರಗಿಣಿ ಮತ್ತು ಈ ಸಂಜೆ ವಿಶೇಷ ವರದಿಗಾರರಾಗಿರುವ ಎನ್.ಎಸ್.ರಾಮಚಂದ್ರ, ಮಹದೇವಪ್ಪ, ಪ್ರದೀಪ್ ಆರ್ಯ, ಟಿ.ಎನ್.ಸೀತಾರಾಂ, ಅನುಶ್ರೀ, ಕೂಡ್ಲು ರಾಮಕೃಷ್ಣ, ಬೆಂಗಳೂರು ನಾಗೇಶ್, ತಿಮ್ಮೇಗೌಡ, ಡಾ.ಕಾಮಿನಿ ರಾವ್, ಡಾ.ರವೀಂದ್ರ, ಅರುಳಾಲನ್, ಪಿ.ಧನಂಜಯ, ಡಾ.ಸಚ್ಚಿದಾನಂದ್, ಡಾ.ಎಂ.ವಿ.ಶ್ರೀನಿವಾಸ್, ತಲಕಾಡು ಚಿಕ್ಕರಂಗೇಗೌಡ, ಶ್ರೀನಿವಾಸ್ ಜಿ.ಕಪ್ಪಣ್ಣ, ಚೇತನ್, ಮಾಧ್ಯಮ ಕ್ಷೇತ್ರದಿಂದ ಎಂ.ನಾಗರಾಜ್, ರವಿಶಂಕರ್ ಭಟ್, ಬಿ.ಪಿ.ಮಲ್ಲಪ್ಪ, ಈ ಸಂಜೆ ಛಾಯಾಗ್ರಾಹಕ ಕ್ಯಾತನಹಳ್ಳಿ ಚಂದ್ರಶೇಖರ್, ಸುದರ್ಶನ್ ಚನ್ನಂಗಿಹಾಳ್, ಶಿವರಾಮ್, ರಾಘವೇಂದ್ರ ಗಣಪತಿ, ಧ್ಯಾನ್ ಪೂಣಚ್ಚ, ಬಿ.ಎನ್.ರಮೇಶ್, ಹೊನ್ನಾಚಾರ್, ಆಲ್ಫ್ರೆಡ್, ಸಿದ್ದರಾಜು ಮತ್ತಿತರರು.
ಪ್ರಶಸ್ತಿ ಪುರಸ್ಕೃತರಿಗೆ ನಾಡಪ್ರಭು ಕೆಂಪೇಗೌಡರ ಅಶ್ವಾರೂಢ ಪ್ರತಿಮೆ, ಪ್ರಶಸ್ತಿ ಪತ್ರ ಹಾಗೂ 15 ಸಾವಿರ ರೂ.ಗಳ ನಗದು ಬಹುಮಾನ ನೀಡಲಾಗುತ್ತದೆ.