ಶುರುವಾಗಿದೆ ಸರ್ಜಿಕಲ್ ಸ್ಟ್ರೈಕ್ ಭಯ..!! ಗಡಿಯಿಂದ ಓಡಿ ಹೋದ ಪಾಕ್ ಉಗ್ರರು..
ಪುಲ್ವಾಮಾದಲ್ಲಿ ನಮ್ಮ 40 ಯೋಧರನ್ನ ಬಲಿ ಪಡೆದ ಉಗ್ರರಿಗೆ ಭಯ ಶುರುವಾಗಿದೆ.. ಭಾರತದ ಯೋಧರು ಯಾವ ಕ್ಷಣವಾದರು ತಮ್ಮ ವಿರುದ್ದ ಸರ್ಜಿಕಲ್ ಸ್ಟ್ರೈಕ್ ಗೆ ಮುಂದಾಗಬಹುದು ಎಂದು ತಿಳಿದು, ಪಾಕ್ ಆಕ್ರಮಿತ ಕಾಶ್ಮೀರ ಹಾಗು ಪಾಕಿಸ್ತಾನದ ಗಡಿ ಭಾಗದಲ್ಲಿ ಆಶ್ರಯ ಪಡೆದಿದ್ದ ಉಗ್ರರು ಪರಾರಿಯಾಗಿದ್ದಾರೆ…
ಇಡೀ ದೇಶವೇ ಯೋಧರ ಹತ್ಯೆಗೆ ವಿರೋಧ ವ್ಯಕ್ತ ಪಡೆಸಿದ್ದು, ಸರಿಯಾದ ಕ್ರಮಕ್ಕೆ ಮುಂದಾಗುವಂತೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ.. ಹೀಗಾಗೆ ಗಡಿ ಪ್ರದೇಶದಲ್ಲಿ ಈಗಾಗ್ಲೇ ಭಾರತೀಯ ಸೈನಿಕರ ಸಂಖ್ಯೆಯನ್ನ ಹೆಚ್ಚಿಸಲಾಗಿದೆ.. ಇದೆಲ್ಲದರ ಬಗ್ಗೆ ತಿಳಿದಿರುವ ಉಗ್ರರು, ತಾವಿದ್ದ ಜಾಗವನ್ನ ಖಾಲಿ ಮಾಡಿ ವಾಪಸ್ ಪಾಕಿಸ್ತಾನದ ಕಡೆ ಮುಖ ಮಾಡಿದ್ದಾರೆ ಎನ್ನಲಾಗಿದೆ..
ಇನ್ನು ಭಾರತೀಯ ಯೋಧರಿಗೆ ಹೆದರಿರುವ ಉಗ್ರರು ಪಿಓಕೆ ಒಳಪ್ರದೇಶದ ಸುರಕ್ಷಿತ ಸ್ಥಳದಲ್ಲಿ ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.. ಒಟ್ಟಿನಲ್ಲಿ ಈ ಬಗ್ಗೆ ಮುಂದೆ ಭಾರತೀಯ ಸೇನೆ ಉಗ್ರರಿಗೆ ಯಾವ ರೀತಿ ಪಾಠ ಕಲಿಸಲಿದೆ ಎಂಬುದನ್ನ ಕಾದು ನೋಡಬೇಕು..