ವೋಟ್​ ಮಾಡಿದ್ರೆ ಮಾತ್ರ ಈ ಹೋಟೆಲ್​ನಲ್ಲಿ ಫ್ರೀ ಊಟ..!

Date:

ಇಡೀ ದೇಶದಲ್ಲೀಗ ಲೋಕಸಭಾ ಚುನಾವಣೆಯ ಸಡಗರ, ಸಂಭ್ರಮ. ಏಪ್ರಿಲ್​ನ 11ರಂದು ಮೊದಲ ಹಂತದ ಮತದಾನ ನಡೆದಿತ್ತು. ಏಪ್ರಿಲ್ 18ರಂದು 2ನೇ ಹಂತದ ಮತದಾನ ನಡೆದಿತ್ತು. ಇಂದು 3ನೇ ಹಂತದ ಮತದಾನ ನಡೆಯುತ್ತಿದೆ. ರಾಜ್ಯದ ವಿಷಯಕ್ಕೆ ಬಂದರೆ ರಾಜ್ಯದಲ್ಲಿ ಏಪ್ರಿಲ್ 18ರಂದು ನಡೆದಿದ್ದು ಮೊದಲ ಹಂತದ ಚುನಾವಣೆ, ಇಂದು ನಡೆಯುತ್ತಿರುವುದು 2ನೇ ಹಂತದ ವೋಟಿಂಗ್.
ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಕೆಲವರು ವೈಯಕ್ತಿಕವಾಗಿ ಮುಂದಾಗಿದ್ದಾರೆ. ತಮ್ಮ ದುಡ್ಡಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಲಸು ಮುಂದಾಗಿದ್ದಾರೆ. ಅಂತರವರಲ್ಲಿ ಯಾದಗಿರಿಯ ಶಹಾಪುರ ನಗರದಲ್ಲಿನ ಅಮ್ಮ ಕ್ಯಾಂಟೀನ್ ಮಾಲೀಕ ಮಣಿಕಂಠ ಕೂಡ ಒಬ್ಬರು. ಅಲ್ಲಿನ ಅಮ್ಮ ಕ್ಯಾಂಟೀನ್​ನ ಮಾಲೀಕ ಮಣಿಕಂಠ ಸ್ವಯಂ ಪ್ರೇರಿತರಾಗಿ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ. ಇಂದು ಮತದಾನ ಮಾಡಿ ಬಂದವರಿಗೆ ಹೊಟ್ಟೆ ತುಂಬಾ ಫ್ರೀ ಊಟ ನೀಡಲಿದ್ದಾರೆ.
ಮಣಿಕಂಠ ಅವರ ತಾಯಿಯ ನೆನಪಲ್ಲಿ ಅಮ್ಮ ಕ್ಯಾಂಟೀನ್ ಆರಂಭಿಸಿದ್ದು, ಇಂದು ಮತಹಾಕಿ ಬಂದು ಕೈ ಬೆರಳು ತೋರಿಸಿದರೆ ಇಲ್ಲಿ ಫ್ರೀ ಊಟ ಮಾಡಿಕೊಂಡು ಹೋಗಬಹುದು. ವೋಟ್ ಹಾಕಿ ಎಂದು ದುಡ್ಡು ಕೊಟ್ಟು ಮತ ಕೊಳ್ಳುವ ಜನಪ್ರತಿನಿಧಿಗಳ ಮುಂದೆ ಮತದಾನದ ಜಾಗೃತಿಗಾಗಿ ಮತಹಾಕಿ ಬಂದವರಿಗೆ ಉಚಿತ ಊಟ ಕೊಡುವ ಇಂಥಾ ವ್ಯಕ್ತಿಗಳು ತುಂಬಾ ಗ್ರೇಟ್ ಅನಿಸಿಕೊಳ್ಳುತ್ತಾರೆ. ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕಾಗಿರುವುದು ಬಹುಮುಖ್ಯ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...