ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಅನರ್ಹಗೊಂಡ ಜೆಡಿಎಸ್ ಶಾಸಕ ಕುಮಾರಣ್ಣನ ಶಿಷ್ಯ ಎಂದು ಖ್ಯಾತಿಯಾಗಿದ್ದ ಗೋಪಾಲಯ್ಯ ಅವರು ಜೆಡಿಎಸ್ ನೀಡಿದ ವಿಪ್ ಉಲ್ಲಂಘಿಸಿ ವಿಶ್ವಾಸಮತಯಾಚಮೆ ಸಮಯದಲ್ಲಿ ಮತ ಹಾಕದೇ ಉಳಿದು ಬಿಜೆಪಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದಕ್ಕೆ ಯಡಿಯೂರಪ್ಪ ಬಳಿ ದುಬಾರಿ ಬೇಡಿಕೆಯೊಂದನ್ನು ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಗೋಪಾಲಯ್ಯ : “ನಾನು ಈಗಾಗಲೇ ಅನರ್ಹಗೊಂಡು ಆಗಿದೆ ಆದ್ದರಿಂದ ನನಗೆ ನಿಮ್ಮ ಸರ್ಕಾರದಲ್ಲಿ ಯಾವುದೇ ಪದವಿಯಾಗಲಿ ಮಂತ್ರಿ ಸ್ಥಾನವಾಗಲಿ ಬೇಡ ಬದಲಿಗೆ ಬೆಂಗಳೂರಿನ ಕಾರ್ಪೊರೇಟರ್ ಆಗಿರುವ ನನ್ನ ಪತ್ನಿಯನ್ನ ಮುಂದಿನ BBMP ಮೇಯರ್ ಮಾಡಿ”….
ಎಂದು ಬಹುದೊಡ್ಡ ಬೇಡಿಕೆಯನ್ನೆ ಗೋಪಾಲಯ್ಯ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಬಿಬಿಎಂಪಿಯಲ್ಲಿ ಹೇಮಲತಾ ಗೋಪಾಲಯ್ಯರಿಗೆ ಮೇಯರ್ ಪಟ್ಟ ವಿಚಾರ ಬಾರಿ ಸದ್ದು ಮಾಡುತ್ತಿದ್ದು ಇದು ಬಿಜೆಪಿ ನಾಯಕರಿಗೆ ತಲೆಬಿಸಿಯಾಗಿದೆ ಪರಿಣಮಿಸಿದೆ.