ದಿಯಾ ರಿಲೀಸ್ ಡೇಟ್ ಫಿಕ್ಸ್ – ಟ್ರೇಲರ್ ನೋಡಿದ್ರೆ ಆ ದಿನಕ್ಕೆ ಕಾಯ್ತೀರಿ..!

Date:

ಚಂದನವನದಲ್ಲಿ ಹೊಸಬರ ಅಲೆ ಜೋರಾಗಿದೆ. ಹೊಸ ಹೊಸ ಕಲಾವಿದರನ್ನು ಹಾಕಿಕೊಂಡು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬರ್ತಿದ್ದಾರೆ. ಹೊಸಬರಿಗೆ ಬಂಡವಾಳ ಹಾಕುವ ಧೈರ್ಯ ಮಾಡಿ, ಅವರನ್ನು ಪ್ರೋತ್ಸಾಹಿಸುವ, ಸ್ಯಾಂಡಲ್​ವುಡ್​ನಲ್ಲಿ ಹೊಸತನ ತರುವ ಪ್ರಯತ್ನವನ್ನು ಮಾಡುವ ನಿರ್ಮಾಪಕರ ಶ್ರದ್ಧೆ, ಆಸಕ್ತಿ ಹಾಗೂ ಇಚ್ಛಾಶಕ್ತಿಯನ್ನು ಮೆಚ್ಚಲೇ ಬೇಕು. ಅಂಥಾ ನಿರ್ಮಾಪಕರಲ್ಲಿ ಕೃಷ್ಣ ಚೈತನ್ಯ ಕೂಡ ಒಬ್ಬರಾಗಿದ್ದಾರೆ.
ಹೌದು ಪ್ರೊಡ್ಯೂಸರ್ ಕೃಷ್ಣ ಚೈತನ್ಯ ಅವರು ಹೊಸ ತಂಡದೊಂದಿಗೆ ಸದ್ದಿಲ್ಲದೆ ಒಂದು ಸಿನಿಮಾ ಮಾಡಿದ್ದಾರೆ. ಆ ಸಿನಿಮಾದ ಹೆಸರು ‘ದಿಯಾ’ ಅಂತ. ದಿಯಾ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. 2 ನಿಮಿಷ 7 ಸೆಕೆಂಡ್ ಇರುವ ಟ್ರೇಲರ್ ಸಿನಿಮಾದ ಮೇಲೆ ಕುತೂಹಲವನ್ನು ಹುಟ್ಟುಹಾಕಿದೆ.
ದೀಕ್ಷಿತ್ ಶೆಟ್ಟಿ ಮತ್ತು ಪೃಥ್ವಿ ಅಂಬಾರ್​ ಚಿತ್ರದ ಇಬ್ಬರು ನಾಯಕರು. ಖುಷಿ ಚಿತ್ರದ ನಾಯಕಿ. ಇನ್ನು ಸ್ವರ್ಣಲತಾ ಪ್ರೊಡಕ್ಷನ್​​ನಡಿಯಲ್ಲಿ ಕೃಷ್ಣ ಚೈತನ್ಯ ಅವರು ನಿರ್ಮಿಸುತ್ತಿರುವ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು 6-5= 2 ಸಿನಿಮಾ ಖ್ಯಾತಿಯ ಡೈರೆಕ್ಟರ್ ಅಶೋಕ್ ಕೆ.ಎಸ್​ರವರು. ಇನ್ನುಳಿದಂತೆ ವಿಶಾಲ್ ವಿಠಲ್, ಸೌರಭ್ ವಾಘ್ ಮರೆ ಅವರ ಛಾಯಗ್ರಹಣವಿದೆ. ಅಜನೀಶ್​ ಲೋಕನಾಥ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಕಲೆ ವರದರಾಜ್ ಕಾಮತ್​ ಅವರದ್ದು. ಪ್ರೊಡಕ್ಷನ್ ಹೊಣೆಯನ್ನು ಯತೀಶ್ ನಿಭಾಯಿಸಿದ್ದಾರೆ. ಇಂಚರಾ ವಿನಯಾ ಅವರ ವಸ್ತ್ರವಿನ್ಯಾಸ, ಖುರ್ಷಿದಾ ಬಾನು ವರ್ಣಾಲಂಕಾರ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಪ್ರವೀಣ್ ಚನ್ನಪ್ಪ, ರಾಕೇಶ್ ಶ್ರೀನಿವಾಸ್, ದರ್ಶನ್ ಅಪೂರ್ವ, ಚಂದನ್, ಮತ್ತು ಭರತ್ ಡೈರೆಕ್ಷನ್ ಟೀಮ್​ನಲ್ಲಿ ಸಿನಿಮಾಕ್ಕಾಗಿ ಶ್ರಮಿಸಿದ್ದಾರೆ.
ಒಟ್ಟಿನಲ್ಲಿ ಯುವ, ಹೊಸಬರ ತಂಡವೊಂದು ದಿಯಾ ಸಿನಿಮಾ ಮಾಡಿದ್ದು, ಟ್ರೇಲರ್ ನೋಡಿದ್ರೆ ಇದೊಂದು ಪಕ್ಕಾ ಸಸ್ಪನ್ಸ್, ಥ್ರಿಲ್ಲರ್ ಮೂವಿ ಅನಿಸ್ತಿದೆ. ನವೆಂಬರ್ 8ರಂದು ಸಿನಿಮಾ ರಿಲೀಸ್ ಆಗಲಿದೆ.

Share post:

Subscribe

spot_imgspot_img

Popular

More like this
Related

ನ್ಯಾಷನಲ್ ಹೆರಾಲ್ಡ್ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ: ಡಿ.ಕೆ. ಶಿವಕುಮಾರ್

ನ್ಯಾಷನಲ್ ಹೆರಾಲ್ಡ್ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ: ಡಿ.ಕೆ....

ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ; ಬೆಂಗಳೂರಿನಲ್ಲಿ ಚಳಿಯ ಮುನ್ಸೂಚನೆ

ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ; ಬೆಂಗಳೂರಿನಲ್ಲಿ ಚಳಿಯ ಮುನ್ಸೂಚನೆ ಬೆಂಗಳೂರು: ಕರಾವಳಿ ಹಾಗೂ...

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್ ತಿರಗೇಟು

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್...

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್’ಗೆ HDK ಪತ್ರ

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್'ಗೆ HDK ಪತ್ರ ನವದೆಹಲಿ:...