ಉಪ ಚುನಾವಣೆಯಲ್ಲಿ ತನ್ನ ಸೋಲಿಗೆ ಇ ವಿ ಎಂ ಹ್ಯಾಕ್ ಕಾರಣ ಎಂದು ರಾಣೆಬೆನ್ನೂರು ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸ್ಪೀಕರ್ ಕೆ ಬಿ ಕೋಳಿವಾಡ ಅನುಮಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇ ವಿ ಎಂ ಹ್ಯಾಕ್ ಮಾಡುವ ಮೂಲಕ ಏಕಚಕ್ರಾಧಿಪತ್ಯ ಸ್ಥಾಪನೆ ಮಾಡಲು ಹೊರಟಿದ್ದಾರೆ. ಅನರ್ಹರೆಲ್ಲರೂ ಇ ವಿ ಎಂ ಹ್ಯಾಕ್ ಮಾಡಿ ಗೆದ್ದಿರುವುದು. ಬಿಜೆಪಿ ಇ ವಿ ಎಂ ಹ್ಯಾಕ್ ಮಾಡಿಯೇ ಗೆಲ್ಲುತ್ತಿರುವುದು ಎಂದು ಆರೋಪಿಸಿದರು.
ಉಪ ಚುನಾವಣೆ ಬಳಿಕ ಸಿದ್ದರಾಮಯ್ಯ ಮನೆಗೆ ಹೋದಾಗ ಇಂಜಿನಿಯರ್ ಕರೆಸಿ ಇ ವಿ ಎಂ ಚೆಕ್ ಮಾಡಿಸಿದರು. ಸಿದ್ದರಾಮಯ್ಯ ೭ ಕಾಂಗ್ರೆಸ್ ಮತ್ತು ೩ ಬಿಜೆಪಿಗೆ ಬರಲಿ ಎಂದು ಬಟನ್ ಒತ್ತಿದರು. ಆಗ ಅಲ್ಲಿ ಅದೇ ಫಲಿತಾಂಶ ಬಂದಿತು. ಆಗ ಬಿಜೆಪಿ ಇ ವಿ ಎಂ ಹ್ಯಾಕ್ ಮಾಡಿ ಗೆದ್ದಿದ್ದಾರೆಂದು ಸಿದ್ದರಾಮಯ್ಯನವರೇ ಶಂಕಿಸಿದರು ಎಂದು ಹೇಳಿದರು.
ಏಕ ಚಕ್ರಾಧಿಪತ್ಯ ಸ್ಥಾಪಿಸಬೇಕು ಅಂತಾ ಮೋದಿ ಮತ್ತು ಅಮಿತ್ ಶಾ ಈ ರೀತಿ ಇವಿಎಂ ಹ್ಯಾಕ್ ಮಾಡಿ ಗೆಲ್ಲುತ್ತಿದ್ದಾರೆ. ದೇಶಾದ್ಯಂತ ಇವಿಎಂ ವ್ಯವಸ್ಥೆ ಕೊನೆಯಾಗಬೇಕು. ಬ್ಯಾಲೆಡ್ ಪೇಪರ್ ಜಾರಿಗೆ ಬರಬೇಕು. ಇವಿಎಂ ಹ್ಯಾಕ್ ಆಗಿದೆ ಅಂತಾ ಇಡಿ ಕಾಂಗ್ರೆಸ್ ಪಕ್ಷವೇ ಹೇಳ್ತಿದೆ. ಇದರ ವಿರುದ್ಧ ಜನಾಂದೋಲನ ಆರಂಭಿಸುತ್ತೇವೆ ಎಂದು ತಿಳಿಸಿದರು.
ಇವಿಎಂ ಹ್ಯಾಕ್ ಮಾಡಿ ಕೋಳಿವಾಡರನ್ನು ಸೋಲಿಸಲಾಯಿತಂತೆ!
Date: